ಗುರುವಾರ, ಏಪ್ರಿಲ್ 28, 2011

ಕವಿಕಿರಣ - ಜೂನ್, 2009

ಆತ್ಮೀಯರೇ,
                 'ಕವಿಕಿರಣ'ದ ಜೂನ್, 2009ರ ಸಂಚಿಕೆ ಇದೋ ನಿಮ್ಮ ಮುಂದಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ, ಸೂಚನೆಗಳಿಗೆ ಸ್ವಾಗತವಿದೆ.
************************

ರಕ್ಷಾಪುಟ -1
**********************************

ಮೂಢ ಉವಾಚ     
      ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ|
      ಬುದ್ಧನೂ ಬೇರಲ್ಲ ಹಿಟ್ಲರನು ಬೇರಿಲ್ಲ||
      ಕೆಡುಕದು ಬೇರಲ್ಲ ಒಳಿತದು ಬೇರಿಲ್ಲ|
      ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ||
                               - ಕ.ವೆಂ.ನಾ.
* * * *
ಸಂಪಾದಕರು:    

     ಕ.ವೆಂ. ನಾಗರಾಜ್,
     ನಂ.೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ.
     ೨ನೆಯ ಮುಖ್ಯರಸ್ತೆ, ಶಾಂತಿನಗರ,
     ಹಾಸನ - ೫೭೩೨೦೧. (ಖಾಯಂ ವಿಳಾಸ).
ಪ್ರಸ್ತುತದ ತಾತ್ಕಾಲಿಕ ವಿಳಾಸ:    

     ನಂ. ೫೬, ಸೌಪರ್ಣಿಕಾ, ರೋಟರಿ ಶಾಲೆ  
     ಹಿಂಭಾಗ, ೪ನೆಯ ಅಡ್ಡರಸ್ತೆ, ರಾಜೇಂದ್ರನಗರ,
     ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: ೯೪೪೮೫ ೦೧೮೦೪.
ಸಹಸಂಪಾದಕರು:
     ಕವಿ ವೆಂ. ಸುರೇಶ್,                                                 
     ಸೌಪರ್ಣಿಕಾ, ೩ನೆಯ ಮುಖ್ಯ ರಸ್ತೆ, ೩ನೆಯ       
     ಅಡ್ಡರಸ್ತೆ, ಅಕ್ಕಮಹಾದೇವಿ ಪಾರ್ಕ್ ಹತ್ತಿರ,   
     ಬಸವೇಶ್ವರ ನಗರ,     ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: ೯೪೪೮೯ ೩೨೮೬೬.
ಪ್ರಕಾಶಕರು:    

 ಕವಿ ಪ್ರಕಾಶನ, ಶಿವಮೊಗ್ಗ.
ಮುದ್ರಕರು:
     ರಾಯಲ್ ಪ್ರಿಂಟರ್ಸ್, ಶಿವಮೊಗ್ಗ.
****************
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.

***************
ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೦೮ನೆಯ ಸಾಲು

ಶ್ರೀ/ ಶ್ರೀಮತಿಯರಾದ:
೧. ಕೆ.ವಿ.ಅನಂತ, ನೋರಿಸ್ ಟೌನ್, ಯು.ಎಸ್.ಎ.  ರೂ.೫೦೦೦
೨. ಸಾ.ಕ.ಕೃಷ್ಣಮೂರ್ತಿ ಕುಟುಂಬ, ಬೆಂ.                       ೧೦೧೦
೩. ಕೆ. ಶ್ರೀಕಾಂತ, ಬೆಂಗಳೂರು                                  ೧೦೦೦
೪. ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ                       ೫೦೦
೫. ಕ.ವೆಂ. ನಾಗರಾಜ್, ಹಾಸನ                                 ೫೦೦
೬. ಕವಿ ವೆಂ. ಸುರೇಶ್, ಶಿವಮೊಗ್ಗ                              ೫೦೦
೭. ಎಂ.ಎಸ್. ನಾಗೇಂದ್ರ, ಬೆಂಗಳೂರು                        ೫೦೦
೮. ಜಗದೀಶಚಂದ್ರ, ಬೆಂಗಳೂರು                                ೫೦೦
೯. ಮಹಾಲಕ್ಷ್ಮಿ ಮಂಜುನಾಥ, ಬೆಂಗಳೂರು                   ೫೦೦
೧೦. ಗಿರಿಜಾಲಕ್ಷ್ಮೀಪತಿ, ಬೆಂಗಳೂರು                           ೫೦೦
೧೧. ಅಶ್ವತ್ಥಪ್ರಸಾದ್, ಬೆಂಗಳೂರು                         ೧೦೫೦೦
೧೨. ದಿ.ಲಕ್ಷ್ಮಮ್ಮ ಸುಬ್ಬರಾವ್, ಹಳೇಬೀಡು ಇವರ    ನೆನಪಿನಲ್ಲಿ ಮಕ್ಕಳಿಂದ                                                                                  ೧೦೦೦
೧೩. ಎಸ್. ರಾಜಾರಾವ್, ಬೆಂಗಳೂರು                         ೫೦೨
೧೪. ಕೆ.ವಿ.ಲಲಿತಾಂಬಾವೆಂಕಟರಾಮಯ್ಯ, ಬೆಂ.            ೫೦೧
೧೫. ಎಸ್.ಕೆ. ರಾಮರಾವ್, ಬೆಂಗಳೂರು                      ೫೦೦
೧೬. ಕೃಷ್ಣಜೋಯಿಸ್, ಬೆಂಗಳೂರು                             ೫೦೦
೧೭. ಗುಂಡಾಜೋಯಿಸ್, ಕೆಳದಿ                                  ೫೦೦
೧೮. ರಾಮಮೂರ್ತಿ, ಕೆಳದಿ                                        ೫೦೦
೧೯. ವೆಂಕಟೇಶ ಜೋಯಿಸ್, ಕೆಳದಿ                             ೫೦೦
೨೦. ಹೆಬ್ಬೈಲು ಕೃಷ್ಣಮೂರ್ತಿರಾವ್, ಬೆಂಗಳೂರು             ೫೦೦
೨೧. ಸುಬ್ಬಲಕ್ಷ್ಮಮ್ಮ, ಎಸ್.ಎನ್.ಮೂರ್ತಿ, ಬೆಂ.              ೫೦೦
೨೨. ವಿಜಯಾ ಸುಬ್ರಾಮಯ್ಯ, ಬೆಂಗಳೂರು                   ೫೦೦
೨೩. ಕಾಶಿಬಾಯಿ, ಶಿಕಾರಿಪುರ                                      ೩೦೦
೨೪. ಬಿ.ಎಸ್. ಲಲಿತಾ, ಬೆಂಗಳೂರು                            ೧೦೦
                                                                ಒಟ್ಟು ೨೭೪೧೩ 


ವೆಚ್ಚದ ವಿವರ
೧. ಪ್ರಥಮ ಸಂಚಿಕೆ ಮುದ್ರಣ ವೆಚ್ಚ ರೂ.                      ೫೯೦೦
೨. ಪ್ಲಾಸ್ಟಿಕ್ ಕವರ್‌ಗಳು                                              ೧೦೦
ಒಟ್ಟು                                                                     ೬೦೦೦

ಜಮಾ ಖರ್ಚು ವಿವರ (೩೧-೧೨-೨೦೦೮ರವರೆಗೆ)
೧೩-೧೧-೦೮ರಲ್ಲಿದ್ದಂತೆ ಪ್ರಾರಂಭಶಿಲ್ಕು                 ರೂ.೧೦೫೧೦
ಸಂಗ್ರಹ (೧೩-೧೧-೦೮ರಿಂದ ೩೧-೧೨-೦೮ರವರೆಗೆ)      ೧೬೯೦೩
ಬಡ್ಡಿ ಮೊಬಲಗು                                                          -
ಒಟ್ಟು                                                                    ೨೭೪೧೩
ವೆಚ್ಚ                                                                        ೬೦೦೦
ಆಖೈರು ಶಿಲ್ಕು (೩೧-೧೨-೦೮ ರಲ್ಲಿದ್ದಂತೆ)                ೨೧೪೧೩ 

೨೦೦೯ನೆಯ ಸಾಲು
ವಂತಿಕೆ ನೀಡಿದವರು

೧. ಹೆಚ್.ಎಸ್. ಪುಟ್ಟರಾಜು, ಜಾವಗಲ್  ರೂ                 .೫೦೦೦
೨. ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು                  ೫೦೦೦
೩. ಕ.ವೆಂ. ನಾಗರಾಜ್, ಹಾಸನ                                      ೮೨೦
ಒಟ್ಟು                                                              ರೂ.೧೦೮೨೦ 


ಜಮಾ ಖರ್ಚು ವಿವರ (೦೧-೦೧-೦೯ರಿಂದ ೩೧-೦೫-೦೯ರವರೆಗೆ)
೦೧-೦೧-೦೯ರಲ್ಲಿದ್ದಂತೆ ಪ್ರಾರಂಭಶಿಲ್ಕು                    ರೂ.೨೧೪೧೩
ಸಂಗ್ರಹ (೦೧-೦೧-೦೯ರಿಂದ ೩೧-೦೫-೦೯ರವರೆಗೆ)          ೧೦೮೨೦
ಬಡ್ಡಿ ಮೊಬಲಗು                                                             247
ಒಟ್ಟು                                                                         32480
ವೆಚ್ಚ (ಪ್ರಥಮ ಸಂಚಿಕೆಗೆ ಸಂಬಂಧಿಸಿದಂತೆ)                        ೮೨೦
ಆಖೈರು ಶಿಲ್ಕು (೩೧-೦೫-೦೯ ರಲ್ಲಿದ್ದಂತೆ)                     31660

* * * *
     ಕವಿಕಿರಣದ ಮುಂದಿನ ಸಂಚಿಕೆ ಡಿಸೆಂಬರ್, ೨೦೦೯ರಲ್ಲಿ ಪ್ರಕಟವಾಗಲಿದೆ. ಎಂದಿನಂತೆ ಎಲ್ಲರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸಿದೆ.                                       -ಸಂ.

* * * *
-ರಕ್ಷಾಪುಟ -2-
************************************************

ಉತ್ತಮ ಬಾಂಧವ್ಯದೆಡೆಗೆ...


     "ವಾವ್!, ನಿಜಕ್ಕೂ ಹೊಸ ಅನುಭವ. ಇಂತಹ ಕಾರ್ಯಕ್ರಮ ನಾನು ಮೊದಲು ನೋಡಿರಲಿಲ್ಲ. ಬಹಳ ಉತ್ತಮವಾದ ಕಾರ್ಯಕ್ರಮ, ಅಭಿನಂದನೆಗಳು!"
     ಇದು ದಿನಾಂಕ ೨೮-೧೨-೨೦೦೮ರಂದು ಬೆಂಗಳೂರಿನಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದವರೊಬ್ಬರ ಪ್ತತಿಕ್ರಿಯೆ. ಉಳಿದವರಿಂದಲೂ ಇದೇ ರೀತಿಯ ಉದ್ಗಾರಗಳು, ಪ್ರತಿಕ್ರಿಯೆಗಳು! ನಿಜ, ಈ ಕಾರ್ಯಕ್ರಮ ಅನುಕರಣೀಯವಾಗಿತ್ತು ಮತ್ತು ಭಿನ್ನವಾಗಿತ್ತು. ಈ ಸಮಾರಂಭದಲ್ಲಿ ಕುಟುಂಬಗಳ ಸಂವಹನಾ ಮಾಧ್ಯಮವಾಗಿ, ಉತ್ತಮ ಬಾಂಧವ್ಯ ವೃದ್ಧಿ ಹಾಗೂ ಸಜ್ಜನಶಕ್ತಿಯ ಜಾಗರಣೆಗಾಗಿ, ಕವಿ ಪ್ರತಿಭೆಗಳ ಅನಾವರಣಕ್ಕಾಗಿ ರೂಪಿಸಿದ ಈ ಪತ್ರಿಕೆ ಕವಿಕಿರಣ ಬಿಡುಗಡೆಯಾಯಿತು. ಗೊತ್ತ್ತಿಲ್ಲದೇ ಇದ್ದ ಅನೇಕ ಬಂಧುಗಳು ಪ್ರಥಮ ಬಾರಿಗೆ ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡರು. ಹಿರಿಯರನ್ನು ಸ್ಮರಿಸಿಕೊಂಡರು. ನಾವೂ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಪಡೆದರು. ಪರಸ್ಪರ ಉತ್ತಮ ಬಾಂಧವ್ಯ ಮುಂದುವರೆಸುವ ಪ್ರಯತ್ನಕ್ಕೆ ಮನಸಾರೆ ಬೆಂಬಲಿಸಿದರು.

     ಮನುಷ್ಯನ ಜೀವನದಲ್ಲಿ ಸಂಬಂಧಗಳು - ತಾಯಿ, ತಂದೆ, ಮಕ್ಕಳು, ಅಜ್ಜ, ಅಜ್ಜಿ, ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ, ಹೆಂಡತಿ, ಇತ್ಯಾದಿ - ಹಾಸುಹೊಕ್ಕಾಗಿದೆ. ಈ ಸಂಬಂಧಗಳು ಮಧುರವಾಗಿದ್ದರೆ ಚೆನ್ನ. ಇಲ್ಲದಿದ್ದರೆ. . . .? ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಮುಂದೊಮ್ಮೆ ಚಿಕ್ಕಪ್ಪ, ದೊಡ್ಡಮ್ಮ, ಷಡ್ಡಕ, ಓರಗಿತ್ತಿ, ಅತ್ತಿಗೆ, ಮೈದುನ, ದಾಯಾದಿ, ಸೋದರತ್ತೆ, ಇತ್ಯಾದಿ ಸಂಬಂಧಗಳ ಅರ್ಥವೇ ಮಕ್ಕಳಿಗೆ ತಿಳಿಯದೇ ಹೋಗಬಹುದು. ಈಗ ಹೆಚ್ಚಿನ ಕುಟುಂಬಗಳಲ್ಲಿ ಒಂದೇ ಮಗುವಿರುವುದರಿಂದ ಅಣ್ಣ, ತಮ್ಮ, ಅಕ್ಕ, ತಂಗಿಯರ ಪ್ರೀತಿಯ ಅನುಬಂಧಗಳ ಅನುಭವಗಳೂ ಸಹ ಆ ಮಕ್ಕಳಿಗೆ ಆಗುತ್ತಿಲ್ಲ. ಗಂಡ, ಹೆಂಡತಿ ಇಬ್ಬರೂ ಒಟ್ಟಿಗೆ ಇದ್ದರೆ ಅದೇ ಅವಿಭಕ್ತ ಕುಟುಂಬ ಎಂದು ಹೇಳುವ ಪರಿಸ್ಥಿತಿ ಇಂದು ಇದೆ. ಸಂಬಂಧಗಳು ಚೆನ್ನಾಗಿರಬೇಕೆಂದರೆ ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕೆಂಬ ಮೂಲ ತತ್ವ ನೆನಪಿಡಬೇಕು.
     ಬಾಂಧವ್ಯಗಳು ಸುಮಧುರವಾಗಿರಲು ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು. ೧.ಒಳ್ಳೆಯ ಕೆಲಸಗಳನ್ನು ಮಾಡಿದಾಗ  ಮೆಚ್ಚುಗೆ ವ್ಯಕ್ತಪಡಿಸುವುದು, ಪ್ರೋತ್ಸಾಹಿಸುವುದು. ೨.ತಪ್ಪಾದಾಗ ಸರಿಪಡಿಸಲು ಪ್ರಾಮಾಣಿಕ ಯತ್ನ ಮಾಡುವುದು. ೩.ಮಾಡಿದ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರುವುದು. ೪.ಸಂಬಂಧಗಳು ಕೆಡುವಂತಹ ಯಾವುದೇ ಕೆಲಸಗಳನ್ನು ಮಾಡದಿರುವುದು. ೫.ಬಂಧುಗಳೊಳಗೆ ಸಾಧ್ಯವಾದಷ್ಟೂ ಹಣಕಾಸಿನ ವ್ಯವಹಾರಗಳನ್ನು ಇಟ್ಟುಕೊಳ್ಳದಿರುವುದು. ೬.ಸಭೆ, ಸಮಾರಂಭಗಳಿಗೆ ಆಹ್ವಾನ ಬಂದಾಗ ಹಾಜರಾಗುವುದು. ೭.ಹುಟ್ಟುಹಬ್ಬ, ವಿವಾಹದ ದಿನ, ಹಬ್ಬ ಹರಿದಿನಗಳು, ಇತ್ಯಾದಿ ದಿನಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು. ೮.ಕಷ್ಟ ಕಾಲದಲ್ಲಿ ನೆರವಾಗುವುದು, ಸಾಧ್ಯವಿಲ್ಲದಿದ್ದಲ್ಲಿ ಸಾಂತ್ವನ ಹೇಳುವುದು. ೯.ನೇರವಾಗಿ ಅಥವಾ ಹಿಂದಿನಿಂದ ದೂರದಿರುವುದು. ೧೦.ಭಿನ್ನಾಭಿಪ್ರಾಯ ಬಂದಾಗ ಮುಖಾಮುಖಿ ಮಾತನಾಡಿ ಭಿನ್ನತೆ ಪರಿಹರಿಸಿಕೊಳ್ಳುವುದು. ೧೧.ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ನೀಡುವುದು. . . . .ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಟ್ಟಿನಲ್ಲಿ ಸಮಯ, ಸಂದರ್ಭ, ಪರಿಸರಕ್ಕೆ ಅನುಗುಣವಾಗಿ ನಡೆಯುತ್ತಾ ನಮ್ಮ ಕಡೆಯಿಂದ ತಪ್ಪಾಗದಿರುವಂತೆ ನೋಡಿಕೊಂಡರೆ ಬಾಂಧವ್ಯಗಳು ಎಲ್ಲರಿಗೂ ಹಿತಕಾರಿಯಾಗಿರುತ್ತದೆ.
     ದ್ವೇಷಿಸಲು ನಮಗೆ ಹಲವಾರು ಕಾರಣಗಳು ಸಿಗುತ್ತವೆ. ಆದರೆ ಪ್ರೀತಿಸಲೂ ನಮಗೆ ಕಾರಣಗಳು ಇರುತ್ತವೆಂಬುದನ್ನು ಮರೆಯದಿರೋಣ. ಇದು ನಾವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ. ದ್ವೇಷದ ಪರಿಣಾಮ ಇತರರನನ್ನೂ ಹಾಳು ಮಾಡಿ ನಮ್ಮನ್ನೂ ಹಾಳು ಮಾಡುತ್ತದೆ ಎಂಬುದನ್ನು ಮರೆಯಬಾರದು. ದ್ವೇಷದಿಂದ ಇತರರಿಗೆ ಆಗುವ ಹಾನಿಗಿಂತ ಸ್ವಂತಕ್ಕೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ಆಗುವ ಹಾನಿಯೇ ಹೆಚ್ಚು. ಕತ್ತಲೆಯನ್ನು ಕತ್ತಲೆಯಿಂದ ಓಡಿಸಲಾಗುವುದಿಲ್ಲ. ಅದಕ್ಕೆ ಬೆಳಕೇ ಬರಬೇಕು. ಹಾಗೆಯೇ ದ್ವೇಷವನ್ನು ದ್ವೇಷದಿಂದ ತೊಡೆಯಲಾಗುವುದಿಲ್ಲ. ಹಾಗೆ ಮಾಡಿದರೆ ದ್ವೇಷ ಇನ್ನೂ ಹೆಚ್ಚುವುದಲ್ಲದೆ ಅದರ ವ್ಯಾಪ್ತಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗೂ ಹಬ್ಬುತ್ತದೆ. ದೊಡ್ಡವರ ತಪ್ಪಿಗೆ ಮಕ್ಕಳು ಬಲಿಯಾಗಬಾರದಲ್ಲವೇ? ದ್ವೇಷವನ್ನು ಗೆಲ್ಲಲು ಪ್ರೀತಿಗೆ ಮಾತ್ರ ಸಾಧ್ಯ. ತಪ್ಪು ಮಾಡಿಯೂ, ತಪ್ಪೆಂದು ಗೊತ್ತಿದ್ದೂ ತಿದ್ದಿಕೊಂಡು ನಡೆಯಲು ಬಯಸದವರು, ಅವರದೇ ಆದ ಕಾರಣಗಳಿಗಾಗಿ ಸುಳ್ಳು ಆರೋಪಗಳನ್ನು ಮಾಡಿ ಸಂಬಂಧಗಳನ್ನು ಕೆಡಿಸುವವರು ಕೆಲವರು ಇರುತ್ತಾರೆ. ಅಂತಹವರಿಂದ ದೂರವಿರುವುದು ಒಳ್ಳೆಯದು. ಅವರನ್ನೂ ಸಾಧ್ಯವಾದರೆ ಪ್ರೀತಿಸೋಣ; ಆಗದಿದ್ದರೆ ಸುಮ್ಮನಿರೋಣ! ಆದರೆ ಯಾವ ಕಾರಣಕ್ಕೂ ದ್ವೇಷಿಸದಿರೋಣ!! ಇತರರು ಇಷ್ಟಪಡುವ ವ್ಯಕ್ತಿತ್ವ ಬೆಳೆಸಿಕೊಳ್ಳೋಣ!!! ಇತರರು ಇಷ್ಟಪಡುವ ವ್ಯಕ್ತಿತ್ವ ನಮ್ಮದಾಗಬೇಕೆಂದರೆ ಇತರರನ್ನು ಇಷ್ಟಪಡುವ ಮನೋಭಾವ ನಾವು ಬೆಳೆಸಿಕೊಂಡರೆ ಮಾತ್ರ ಸಾಧ್ಯ. ಇತರರ ಪ್ರೀತಿ, ವಿಶ್ವಾಸ, ಸ್ನೇಹ, ಸಹಕಾರ ನಮಗೆ ಬೇಕೆಂದರೆ ಮೊದಲು ಅದನ್ನು ಇತರರಿಗೆ ನಾವು ನೀಡಬೇಕು. ಹಣ ಖರ್ಚು ಮಾಡಿದಷ್ಟೂ ಕಡಿಮೆಯಾಗುತ್ತದೆ. ಆದರೆ ಪ್ರೀತಿ, ವಿಶ್ವಾಸಗಳು ನೀಡಿದಷ್ಟೂ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೀತಿಗೆ ಮಾಂತ್ರಿಕ ಶಕ್ತಿಯಿದೆ. ಪ್ರೀತಿಯ ಭಾಷೆಯನ್ನು ಮೂಕ ಮಾತನಾಡಬಲ್ಲ; ಕಿವುಡ ಕೇಳಬಲ್ಲ; ಪ್ರೀತಿಯ ಹಾಡಿಗೆ ಹೆಳವ ಕುಣಿಯಬಲ್ಲ; ಪ್ರೀತಿಯ ಕಣ್ಣಿನಲ್ಲಿ ಕುರುಡ ನೋಡಬಲ್ಲ. ಜೀವನವನ್ನು ನೋಡುವ ರೀತಿ ಬದಲಾಯಿಸಿಕೊಂಡಲ್ಲಿ, ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ತಪ್ಪು ಹುಡುಕದೆ ಒಳ್ಳೆಯ ಅಂಶಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡಲ್ಲಿ, ನಮ್ಮನ್ನು ಇತರರು ಇಷ್ಟಪಡದಿದ್ದರೂ ದ್ವೇಷಿಸುವುದಿಲ್ಲ.
     ವೈರಿಯ ಅಬ್ಬರಕೆ ಬರೆಯೆಳೆಯಬಹುದು|
     ಕಪಟಿಯಾಟವನು ಮೊಟಕಿಬಿಡಬಹುದು||
     ಮನೆಮುರುಕರನು ತರುಬಿಬಿಡಬಹುದು|
     ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ||
     ಕವಿ ಕುಟುಂಬಗಳ ವಾರ್ಷಿಕ ಸಮಾವೇಶಗಳ ಪ್ರಮುಖ ಉದ್ದೇಶ ಸಹ ಬಾಂಧವ್ಯಗಳನ್ನು ಉತ್ತಮಗೊಳಿಸುವುದೇ ಆಗಿದೆ. ನಮ್ಮ ಪೂರ್ವಜರ, ಹಿರಿಯರ ಒಳ್ಳೆಯ ಸಾಧನೆಗಳನ್ನು ನೆನೆಸಿಕೊಂಡು ನಾವೂ ಸಹ ಏನನ್ನಾದರೂ ಸಾಧಿಸಲು ಪ್ರೇರಿಸಬೇಕೆಂಬುದು ಇದರ ಹಿನ್ನೆಲೆಯಾಗಿದೆ. ಒಂದೇ ಕುಟುಂಬದ ಒಟ್ಟಿಗೆ ಸೇರದ ಸದಸ್ಯರುಗಳೂ ಸಹ ಸಮಾವೇಶದಲ್ಲಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ.  ಒಳ್ಳೆಯ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿದಷ್ಟೂ ಕೆಟ್ಟ ಸಂಗತಿಗಳಿಗೆ ಹಿನ್ನಡೆಯಾಗುತ್ತದೆ. ವಾರ್ಷಿಕ ಸಮಾವೇಶಗಳಲ್ಲಿ ನಮ್ಮ ಪೂರ್ವಜರ ಕೃತಿಗಳನ್ನು ಆಧರಿಸಿದ ರೂಪಕ, ನಾಟಕ, ಸಂಗೀತ, ಇತ್ಯಾದಿಗಳನ್ನು ಏರ್ಪಡಿಸಬಹುದು. ಇದಕ್ಕೆ ಪೂರ್ವ ತಯಾರಿ ಮಾಡಬಹುದು. ಪ್ರತಿ ಕುಟುಂಬದ ಕಡೆಯಿಂದ ವರ್ಷದ ಸಾಧನೆಯಾಗಿ ಏನನ್ನಾದರೂ ಮಾಡಲು ಕುಟುಂಬದ ಒಬ್ಬರು ಸದಸ್ಯರಾದರೂ ಮನಸ್ಸು ಮಾಡಬೇಕು. ಆ ಸಾಧನೆ ಬರವಣಿಗೆಯಿರಬಹುದು,  ನಟನೆ, ಆಟೋಟ, ಸಂಗೀತ,ನಾಟ್ಯವಿರಬಹುದು, ಚಿತ್ರಕಲೆಯಾಗಿರಬಹುದು, ನಾವು ತೊಡಗಿಕೊಂಡಿರುವ ವೃತ್ತಿ ಅಥವಾ ಪ್ರವೃತ್ತಿಯಲ್ಲಿರಬಹುದು,  ಗಮನಿಸಬಹುದಾದ ಯಾವುದೇ ಸಂಗತಿಯಿರಬಹುದು. ಸಮಾವೇಶಗಳಲ್ಲಿ ಇಂತಹ ಸಾಧನೆಗಳನ್ನು ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟಬಹುದು, ಗೌರವಿಸಬಹುದು. ಇತರರು ಮಾಡಲಿ, ನಾವು ಪ್ರೋತ್ಸಾಹಿಸೋಣ ಎಂಬುದರ ಬದಲಿಗೆ ನಾವೂ ಏನನ್ನಾದರೂ ಜೀವಿತಕಾಲದಲ್ಲಿ ಸಾಧಿಸೋಣ ಎಂಬ ಭಾವನೆ ಬಂದಲ್ಲಿ ಉತ್ತಮ ಬೆಳವಣಿಗೆಯೇ ಸರಿ. ಕವಿ ಕುಟುಂಬಗಳವರು ಮನಸ್ಸು ಮಾಡಿ ಕಾರ್ಯ ಪ್ರವೃತ್ತರಾಗುತ್ತಾರೆ, ವಾರ್ಷಿಕ ಸಮಾವೇಶಗಳು ಇಂತಹ ಆರೋಗ್ಯಕರ ಸ್ಪರ್ಧೆಗೆ ಉತ್ತಮ ವೇದಿಕೆಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ,
ಉತ್ತಮ ಬಾಂಧವ್ಯಕ್ಕಾಗಿ ತಮ್ಮವನು,
-ಕ.ವೆಂ. ನಾಗರಾಜ್.
********************

ಜೀವನ
ಜೀವನ ಯಶಸ್ಸು ಮತ್ತು ಸೋಲುಗಳ ಮಿಶ್ರಣ; ಉತ್ತಮ ಬದುಕಿಗೆ ಇವೆರಡೂ ಇರಬೇಕು.
***************************
-ಪುಟಗಳು 1,2-
******************************

'ಸೇರಿದೆವು ನಾವು'
ಕವಿಕುಟುಂಬಗಳ ಮತ್ತು ಬಂಧು ಬಳಗದವರ ಮೂರನೆಯ ವಾರ್ಷಿಕ ಸಮಾವೇಶದ ವರದಿ
     ದಿನಾಂಕ ೨೮-೧೨-೨೦೦೮ರ ಭಾನುವಾರದ ಮುಂಜಾನೆ ಬೆಳಿಗ್ಯೆ ೮.೩೦ರಿಂದಲೇ ಕವಿ ಕುಟುಂಬಗಳ ಸದಸ್ಯರು ಮತ್ತು ಬಂಧು ಬಳಗದವರು ಬೆಂಗಳೂರಿನ ಜೆ.ಪಿ. ನಗರದ ೨ನೆಯ ಹಂತದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಸಮೀಪವಿರುವ ಮಾ ಆನಂದಮಯಿ ಆಶ್ರಮದ ಸಭಾಭವನದಲ್ಲಿ ಸೇರಲಾರಂಭಿಸಿ ಬೆ. ೯.೩೦ರ ವೇಳೆಗೆ ಸಕಾಲದಲ್ಲಿ ಒಟ್ಟುಗೂಡಿದರು. ಉಪಾಹಾರದ ಬಳಿಕ ೧೦.೦೦ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ವೇದಿಕೆಗೆ ಆಗಮಿಸಿದ ಹಿರಿಯರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿ, ಶ್ರೀ ಕವಿ ವೆಂಕಟಸುಬ್ಬರಾವ್, ಶ್ರೀ ಡಾ. ಕೆಳದಿ ಕೃಷ್ಣಾಜೋಯಿಸ್, ಶ್ರೀ ಸಾ.ಕ. ಕೃಷ್ಣಮೂರ್ತಿ, ಶ್ರೀ ಎಂ. ಎಸ್. ನಾಗೇಂದ್ರ ಮತ್ತು ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್‌ರವರು ವೇದಘೋಷಸಹಿತ  ಜ್ಯೋತಿ ಬೆಳಗಿಸಿ ಸಭಾ ಕಾರ್ಯಕ್ರಮ ಆರಂಭಿಸಿದರು. ಪ್ರಾರಂಭದಲ್ಲಿ ದಿ. ಕವಿ ಸುಬ್ರಹ್ಮಣ್ಯಯ್ಯರವರ ತಂಗಿ ದಿ. ಶ್ರೀಮತಿ ಸುಂದರಮ್ಮರವರ ಮಗ ಶ್ರೀ ಸತ್ಯನಾರಾಯಣರಾವ್ ಮತ್ತು ದಿ. ಕವಿ ಸುಬ್ರಹ್ಮಣ್ಯಯ್ಯರವರ ಅಳಿಯ ಶ್ರೀ ನಾರಾಯಣರಾವ್‌ರವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು. ಕು. ನಿರಂಜನನ ಸುಶ್ರಾವ್ಯ ಪ್ರಾರ್ಥನೆ ಗಮನ ಸೆಳೆಯಿತು. ಹಿರಿಯರಾದ ಶ್ರೀ ಕೃಷ್ಣಮೂರ್ತಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.

'ಕವಿಕಿರಣ' ಪತ್ರಿಕೆ ಬಿಡುಗಡೆ     ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ.ವೆಂ.ನಾಗರಾಜ್ ರವರು ಕಾರ್ಯಕ್ರಮದ ರೂಪು ರೇಷೆ, ಅವರ ಸಂಪಾದಕತ್ವದಲ್ಲಿ ಕವಿ ಕುಟುಂಬದ ಪತ್ರಿಕೆ ಕವಿಕಿರಣ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಸಂವಹನದ ಅಗತ್ಯ, ಸಜ್ಜನ ಶಕ್ತಿ ಜಾಗೃತಗೊಳಿಸಲು, ಸದಸ್ಯರ ಸುಪ್ತ ಶಕ್ತಿ ಅನಾವರಣ ಮಾಡಲು ಪತ್ರಿಕೆ ವಹಿಸಬಹುದಾದ ಪಾತ್ರ ಕುರಿತು ತಿಳಿಸಿದರು. ಸಮಾರಂಭದಲ್ಲಿ ಬಿಡುಗಡೆಯಾಗಲಿದ್ದ ಅವರೇ ರಚಿಸಿದ ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ 'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕದ ಕುರಿತು ಮಾಹಿತಿ ನೀಡಿದರು. ಶ್ರೀ ಕವಿ ಸುರೇಶ್ ಸಂಪಾದಿಸಿದ ಹಾಗೂ ಸಮಾರಂಭದಲ್ಲಿ ಅರ್ಪಿತಗೊಳ್ಳಲಿದ್ದ 'ಕವಿ ಕುಟುಂಬಗಳ ಮತ್ತು ಬಂಧುಗಳ ದೂರವಾಣಿ ಮತ್ತು ವಿಳಾಸಗಳ ಕೈಪಿಡಿ' ಸಿದ್ಧಪಡಿಸಲು ಅವರು ಪಟ್ಟ ಶ್ರಮಕ್ಕಾಗಿ ಅಭಿನಂದಿಸಿದರು. ವಾರ್ಷಿಕ ಸಮಾವೇಶಗಳನ್ನು ರಚನಾತ್ಮಕವಾಗಿ ನಡೆಸಲು ಸಲಹೆಗಳನ್ನು ನೀಡಿದರು.

     'ಕವಿಕಿರಣ' ಪತ್ರಿಕೆಯನ್ನು ಬಿಡುಗಡೆಗೊಳಿಸಿದ ೯೪ ವರ್ಷಗಳ ವಯೋವೃದ್ಧ, ಜ್ಞಾನವೃದ್ಧರಾದ ಶ್ರೀ ಹೆಬ್ಬೈಲು ಕೃಷ್ಣಮೂರ್ತಿಯವರು ಸಮಾರಂಭದಲ್ಲಿ ಭಾಗವಹಿಸಿ ಪತ್ರಿಕೆ ಬಿಡುಗಡೆಗೊಳಿಸುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷಪಟ್ಟು ಇಂತಹ ಒಳ್ಳೆಯ ಕಾರ್ಯಗಳು ನಿರಂತರವಾಗಿ ಮತ್ತು ಚೆನ್ನಾಗಿ ನಡೆಯಲೆಂದು ಹರಸಿದರು.

'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕ ಬಿಡುಗಡೆ
     'ಕವಿ ಸುಬ್ರಹ್ಮಣ್ಯಯ್ಯ' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಕವಿ ವೆಂಕಟಸುಬ್ಬರಾಯರು ತಮ್ಮ ತಂದೆಯ ಬಗ್ಗೆ ತಮ್ಮ ಮಗ ನಾಗರಾಜ ಬರೆದು, ತಮ್ಮ ಮೊಮ್ಮಕ್ಕಳು ಬಿಂದು ಮತ್ತು ವಿನಯ ಪ್ರಾಯೋಜಿಸಿದ ಪುಸ್ತಕವನ್ನು ತಮ್ಮಿಂದ ಬಿಡುಗಡೆಗೊಳಿಸಿದ್ದಕ್ಕೆ ಸಂತೋಷಿಸಿ, ತಮ್ಮ ಮಕ್ಕಳಿಂದ ಇಂತಹ ಇನ್ನೂ ಹೆಚ್ಚು ಒಳ್ಳೆಯ ಕೆಲಸಗಳಾಗಲಿ ಎಂದು ಆಶೀರ್ವದಿಸಿದರು. ಕುಟುಂಬದ ಕೊಡುಗೆಯಾಗಿ ಪುಸ್ತಕವನ್ನು ಉಚಿತವಾಗಿ ಎಲ್ಲರಿಗೂ ನೀಡಲಾಯಿತು.
 


 ಕವಿ ಕುಟುಂಬಗಳ ದೂರವಾಣಿ ಕೈಪಿಡಿ ಬಿದುಗಡೆ    

     ಕವಿ ಕುಟುಂಬಗಳ ಮತ್ತು ಬಂಧು ಬಳಗದವರ ವಿಳಾಸ ಮತ್ತು ದೂರವಾಣಿ ವಿವರಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ. ಕೆ. ಕೃಷ್ಣಾಜೋಯಿಸರು ಸ್ವಂತ ಖರ್ಚಿನಲ್ಲಿ ಕೈಪಿಡಿ ಸಿದ್ಧಪಡಿಸಿ ಎಲ್ಲರಿಗೂ ಉಚಿತವಾಗಿ ನೀಡಿದ ಶ್ರೀ ಕವಿ ಸುರೇಶ್‌ರವರ ಕಾರ್ಯವನ್ನು ಮನತುಂಬಿ ಶ್ಲಾಘಿಸಿದರು. 



     ನಂತರದಲ್ಲಿ ಹಿಂದಿನ ಸಮಾವೇಶಗಳಿಗೆ ಬರದೆ ಇದೇ ಪ್ರಥಮವಾಗಿ ಬಂದ ಬಂಧುಗಳ ಪರಿಚಯವನ್ನು ಸಭೆಗೆ ಮಾಡಿಕೊಡಲಾಯಿತು. ಹಲವರಿಗೆ ಇದು ಅವಿಸ್ಮರಣೀಯ ಅನುಭವ ನೀಡಿತು. ನಿರಂಜನ, ಕಾಶೀಬಾಯಿ, ದೀಪಕ್, ಮತ್ತು ಹಲವರು ತಮ್ಮ ಗಾನಸುಧೆ ಹರಿಸಿದರು. ರಚಿಸಿದ್ದ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.

     ಬೆಂಗಳೂರಿನ ಶ್ರೀ ಶ್ರೀಕಂಠ ಕುಟುಂಬದವರು ಬಂದಿದ್ದ ಎಲ್ಲಾ ಮಹಿಳಾ ಸದಸ್ಯರಿಗೆ ಅರಿಶಿನ-ಕುಂಕುಮ,ಬಳೆ, ರವಿಕೆಕಣಗಳನ್ನು ನೀಡಿ ಶುಭ ಕೋರಿದರು.
                                                   ಶ್ರೀಮತಿ ಪದ್ಮಾವತಮ್ಮ ಸುಬ್ಬರಾಯರಿಗೆ ಗೌರವ
     ಮಧ್ಯಾಹ್ನದ ಅಚ್ಚುಕಟ್ಟಾದ ರುಚಿಯಾದ ಭೋಜನದ ನಂತರದಲ್ಲಿ ಸದಸ್ಯರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಕವಿಕಿರಣದ ಮುಂದಿನ ಸಂಚಿಕೆಯನ್ನು ಪ್ರಾಯೋಜಿಸಲು ಶ್ರೀ ಪುಟ್ಟರಾಜು, ಜಾವಗಲ್ ರವರು ಮುಂದೆ ಬಂದರು. ಮುಂದಿನ ವಾರ್ಷಿಕ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ದಿನಾಂಕ ೨೭-೧೨-೨೦೦೯ ರಂದು ಆಯೋಜಿಸುವುದಾಗಿ ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ಪರವಾಗಿ ಅವರ ಸಹೋದರರಾದ ಶ್ರೀ ಸುಬ್ರಹ್ಮಣ್ಯ ದೀಕ್ಷಿತ್ ರವರು ಘೋಷಿಸಿದರು. ಸಭೆ ಇವರುಗಳನ್ನು ಅಭಿನಂದಿಸಿತು.

                                  ಸನ್ಮಾನಿತರು: ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ, ಬೆಂಗಳೂರು
     ಸಮ್ಮೇಳನದ ಆಯೋಜಕರಾದ ಶ್ರೀಮತಿ ಪದ್ಮಾವತಮ್ಮ ಸುಬ್ಬರಾವ್, ಶ್ರೀಮತಿ ಮತ್ತು ಶ್ರೀ ಎಂ.ಎಸ್. ನಾಗೇಂದ್ರ ಕುಟುಂಬದವರು ಸಮ್ಮೇಳನಕ್ಕಾಗಿ ಮಾಡಿದ್ದ ಅಚ್ಚುಕಟ್ಟಾದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಭಿನಂದನೆ ಮತ್ತು ವಂದನೆಗಳೊಂದಿಗೆ ಸಭೆ ಸಂಪನ್ನವಾಯಿತು.

***************

ಬನ್ನಿ ತೀರ್ಥಹಳ್ಳಿಗೆ

   ಕವಿಕುಟುಂಬಗಳ ಮತ್ತು ಬಂಧುಬಳಗದವರ ನಾಲ್ಕನೆಯ ವಾರ್ಷಿಕ ಸಮಾವೇಶ ದಿನಾಂಕ ೨೭-೧೨-೨೦೦೯ರ ಭಾನುವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆಯಲಿದ್ದು, ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮತ್ತು ಸಹೋದರರು ಆಯೋಜಿಸಲಿರುವ ಈ ಸಮಾವೇಶಕ್ಕೆ ತಪ್ಪದೆ ಎಲ್ಲರೂ ಭಾಗವಹಿಸಲು ಕೋರಿದ್ದಾರೆ. ಅವರಿಗೆ ಅಭಿನಂದನೆಗಳು.
**************

ದೊಡ್ಡತನದ ದೊಡ್ಡಮ್ಮ
    
     ನನ್ನ ಮದುವೆಯಾಗಿ ಮೂರು ವರ್ಷಗಳಾಗಿತ್ತು. ಗರ್ಭಿಣಿಯಾಗಿದ್ದೆ. ನನ್ನ ಪತಿ ಗ್ರಾಮಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದ ಹಳ್ಳಿಯಲ್ಲಿದ್ದೆವು. ನನಗೆ ಸತ್ಯನಾರಾಯಣ ಪೂಜೆ ಮಾಡಬೇಕೆಂದು ಬಯಕೆಯಾಯಿತು. ಹಳ್ಳಿಯಲ್ಲಿ ಅನುಕೂಲವಿಲ್ಲದ ಪ್ರಯುಕ್ತ ನನ್ನ ಪತಿಯ ಅಣ್ಣನ ಮನೆಯಲ್ಲಿ ಮಾಡೋಣವೆಂದು ಹೋದಾಗ ಗರ್ಭಿಣಿಯಾದ್ದರಿಂದ ಧರ್ಮಶಾಸ್ತ್ರ ಅಡ್ಡಬರುತ್ತದೆಂದು ಮಾಡಿಸಲಿಲ್ಲ. ಅಲ್ಲಿದ್ದ ನನ್ನತ್ತೆಯ ತಾಯಿ ಮೂಕಾಂಬಿಕಮ್ಮನವರು (ಗುಂಡಾಜೋಯಿಸರ ತಾಯಿ) ನನ್ನ ಮನಸ್ಥಿತಿ ಅರಿತು ಕೆಳದಿಯಲ್ಲಿ ನನ್ನ ಮನೆಯಲ್ಲೇ ಮಾಡು. ಕೃಷ್ಣಭಟ್ಟರು ಪೂಜೆ ಮಾಡಿಸುತ್ತಾರೆ, ನಾನು ಹೇಳ್ತೀನಿ ಎಂದು ಹೇಳಿ ಅವರ ಸೊಸೆ ಶಾರದಮ್ಮನಿಂದ ಪ್ರಸಾದ ಮಾಡಿಸಿ, ಪೂಜೆ ಪರಿಕರಗಳನ್ನು ಅವರೇ ಸಿದ್ಧಪಡಿಸಿ ನನ್ನಿಂದ ಪೂಜೆ ಮಾಡಿಸಿದರು. ಮೂಕಾಂಬಿಕಮ್ಮನವರನ್ನು ನಾವೆಲ್ಲರೂ ದೊಡ್ಡಮ್ಮ ಎಂದೇ ಕರೆಯುತ್ತಿದ್ದೆವು. ಅವರ ದೊಡ್ಡತನದಿಂದ ನನ್ನ ಮನದ ದುಗುಡ ದೂರವಾಯಿತು.
-ಹೆಚ್.ಎಸ್. ವಿಮಲಮ್ಮ, ಶಿವಮೊಗ್ಗ.

************************
-ಪುಟಗಳು 3,4-
^^^^^^^^^^^^^^^^^^^^^^^^^^^^^^

ಕೆಳದಿ ಕವಿ ಮನೆತನದ ಪೂರ್ವಜರು -೨
ವೆಂಕಭಟ್ಟ (ವೆಂಕ ಕವಿ)/ ಕವಿ ವೆಂಕಣ್ಣ  
-ಸಂಗ್ರಹ ಮತ್ತು ಪ್ರಸ್ತುತಿ: ಕವಿ ವೆಂ. ಸುರೇಶ್

      ಸುಮಾರು ಕ್ರಿ.ಶ. ೧೭೭೦ರಲ್ಲಿದ್ದ ವೆಂಕ ಕವಿ, ಕವಿ ಲಿಂಗಣ್ಣನ ಮಗ.  ಈತನ ಪತ್ನಿಯ ಹೆಸರು  ದೇವಮ್ಮ. ಇವರಿಗೆ ಚೆನ್ನಯ್ಯ ಮತ್ತು ಸುಬ್ಬಾಭಟ್ಟ ಎಂಬ ಇಬ್ಬರು ಮಕ್ಕಳು. ಈತನೂ ಕೆಳದಿಯಲ್ಲಿಯೇ ವಾಸವಾಗಿದ್ದಿರಬಹುದು. ಈತನ ವೈಯುಕ್ತಿಕ ಜೀವನದ ಬಗ್ಗೆ ಯಾವುದೇ ನಿಖರವಾದ ಮಾಹಿತಿಗಳು ಲಭ್ಯವಿಲ್ಲದಿದ್ದರೂ ಈತ ರಚಿಸಿದ ಅನೇಕ ಕೃತಿಗಳ ಬಗ್ಗೆ ಮಾಹಿತಿ ಇರುವುದು ಸುದೈವ. ಈತನ ಪ್ರಮುಖ ಕೃತಿಗಳು: ೧) ಗಣಸಹಸ್ರನಾಮ, ೨) ಪಾರ್ವತಿವಲ್ಲಭ ಶತಕ, ೩)ನರಹರಿ ವಿಜಯ ಮತ್ತು ೪)ಕೆಳದಿ ರಾಮೇಶ್ವರರನ್ನು ಕುರಿತ ಭಕ್ತಿ ಗೀತೆಗಳು.
ಗಣ ಸಹಸ್ರನಾಮ:
 ಇದು ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಷಟ್ಪದಿಗಳು ೧೦೦ ಮತ್ತು ೧ ವಚನ - ಒಟ್ಟು ೧೦೧ ಪದ್ಯ ಸಂಖ್ಯೆಯುಳ್ಳ ಕಿರುಕೃತಿ.  ಕೆಳದಿ ರಾಮೇಶ್ವರನಿಗೂ ಮತ್ತು ಇತರೆ ದೇವರುಗಳಿಗೂ ವಂದಿಸಿ ಆರಂಭವಾಗುವ ಈ ಕೃತಿಯಲ್ಲಿ ಒಟ್ಟು ೧೦೨೪ ನಾಮಾವಳಿಗಳಿವೆ. ಕೃತಿಯಲ್ಲಿ ತನ್ನ ಸ್ವವಿವರ ಇರುವ ಈ ಸಾಲುಗಳು ಗಮನಾರ್ಹ:
      ಧರಣಿದೇವ ಲಲಾಮನೆನಿಸಿದ
      ವರ ಕೆಳದಿ ಲಿಂಗಾರ್ಯ ತನುಭವ
      ಗರುವ ವೆಂಕಪನೀ ಗಣಾಧೀಶ್ವರರ ನಾಮಗಳು ||
      ಹರುಷದಿಂ ಶಿವನಿತ್ತ ಮತಿಯಿಂ
      ವಿರಚಿಸಿದನೇ ಪದವನನಿಶಂ
      ಸರಸದಿಂ ಬರೆದೋದಿ ಕೇಳ್ದರ ಪೊರೆವನಾ ಶಿವನು ||

ಪಾರ್ವತೀ ವಲ್ಲಭ ಶತಕ :
 ಇದೊಂದು ನೀತಿ ಶತಕ -ದೈವಭಕ್ತಿ, ಗುರುಭಕ್ತಿ, ಗುರು-ಹಿರಿಯರಲ್ಲಿ ಶ್ರದ್ಧೆ, ಧರ್ಮದಲ್ಲಿ ಒಲವು ಹಾಗೂ ನಿಷ್ಠೆಯ ನಿಲುವನ್ನು ನಿರೂಪಿಸುವ ಒಂದು ತಾತ್ವಿಕ ಕೃತಿ. ಇದರಲ್ಲಿ ೧೦೧ ಪದ್ಯಗಳಿವೆ. ಗಣಸಹಸ್ರನಾಮ ಷಟ್ಪದಿಗಳ ರಚನೆಯಾದರೆ ಇದು ವೃತ್ತಗಳ ರಚನೆ  (ಶಾರ್ದೂಲ, ಚಂಪಕ, ಮತ್ತೇಭವಿಕ್ರೀಡಿತ ಇತ್ಯಾದಿ.) (ಪಾರ್ವತಿ ವಲ್ಲಭ ಶತಕ ಕೃತಿಯನ್ನು    ಕೆಳದಿಯ ಡಾ: ವೆಂಕಟೇಶ್ ಜೊಯಿಸ್‌ರವರು ಸಂಪಾದಿಸಿ ೨೦೦೭ ರಲ್ಲಿ ಪ್ರಕಟಿಸಿದ್ದಾರೆ).
ನರಹರಿ ವಿಜಯ: 
ಭಾಮಿನಿ ಷಟ್ಪದಿಯಲ್ಲಿರುವ ಈ ಕೃತಿ ಗಮನಾರ್ಹ. ಇದರಲ್ಲಿ ೮೫ ಪದ್ಯಗಳು ಮತ್ತು ೭ ಗರಿಗಳಿದ್ದು, ಇದು ನೃಸಿಂಹಾವತಾರಕ್ಕೆ ಸಂಬಂಧಿಸಿದ ಕಾವ್ಯ.  ಈ ಕೃತಿಯ ಬಗ್ಗೆ ವಿಮರ್ಶಿಸುತ್ತಾ ಸಾ.ಶಿ.ಮರುಳಯ್ಯನವರು ತಮ್ಮ ಕೆಳದಿ ಅರಸರು ಮತ್ತು ಕನ್ನಡ ಸಾಹಿತ್ಯ ಎಂಬ ಪುಸ್ತಕದಲ್ಲಿ ಕವಿಯ ಬಗ್ಗೆ ....ವೆಂಕಣ್ಣ ಬಹಳ ಸಂಗ್ರಹಶೀಲನಾದ ವ್ಯಕ್ತಿ. ಅಪ್ಪನಂತೆ ಅನಗತ್ಯ ವರ್ಣನೆಯಲ್ಲೇ ಕಾಲಹರಣ ಮಾಡುವವನಲ್ಲ..... ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಕಾವ್ಯದ ಮುಕ್ತಾಯ ಇಂತಿದೆ:
     ನರಹರಿಯ ವಿಜಯವನು ಕೇಳುವ |
     ನರರಿಗಷ್ಟೈಶ್ವರ್ಯಸಿದ್ಧಿಯ |
     ಸರಸದಿಂದಲಿ ಶತ್ರು ವಿಜಯವ ಪುತ್ರ ಪೌತ್ರನು ||
     ಪರಮಸಂತೋಷದಲಿ ವೋದುವ |
     ಬರವ ಸ್ಮರಿಸುವವರಭಿಮತಂಗಳ |
     ಕರುಣಿಸುವ ಲಕ್ಷ್ಮಿನ್ರುಸಿಂಹನು ಪೂರ್ಣ ಕೃಪೆಯಿಂದ||
_________________________________________________________
ಕೆಳದಿ ಕವಿ ಮನೆತನದ ಸಂಬಂಧ ಮಾಲೆಯ ಕಳಚಿದ ಮೊದಲ ಕೊಂಡಿ - ಶ್ಯಾಮಭಟ್ಟ   
      ಕೆಳದಿ ನೃಪವಿಜಯವೆಂಬ ಐತಿಹಾಸಿಕ ಕಾವ್ಯ, ದಕ್ಷಾಧ್ವರ ವಿಜಯ, ಶಿವಪೂಜಾ ದರ್ಪಣ, ಮುಂತಾದ ಕೃತಿಗಳನ್ನು ರಚಿಸಿದ ಮತ್ತು ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಲಿಂಗಣ್ಣ ಕವಿಯ ಪರಿಚಯವನ್ನು ಕಳೆದ ಸಂಚಿಕೆಯಲ್ಲಿ ಮಾಡಿಕೊಡಲಾಗಿದೆ. ಕೆಳದಿ ನೃಪವಿಜಯದಲ್ಲಿ ಮತ್ತು ಇತರ ಕೃತಿಗಳಲ್ಲಿ ಕವಿಯೇ ತಿಳಿಸಿದಂತೆ ಈತನ ತಂದೆಯ ಹೆಸರು ವೆಂಕಪ್ಪ ಎಂದು ಗೊತ್ತಾಗುತ್ತದೆ. ಈತನ ತಾಯಿಯ ಮತ್ತು ಪತ್ನಿಯ ವಿವರ ತಿಳಿದಿಲ್ಲ. ಈತನಿಗೆ ಶ್ಯಾಮಭಟ್ಟ ಮತ್ತು ವೆಂಕಭಟ್ಟ ಎಂಬ ಇಬ್ಬರು ಮಕ್ಕಳು ಇದ್ದುದು ತಿಳಿಯತ್ತದೆ. ಇಬ್ಬರಿಗಿಂತ ಹೆಚ್ಚು ಮಕ್ಕಳು ಇದ್ದರೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಹಿರಿಯನಾದ ಶ್ಯಾಮಭಟ್ಟನ ಕುರಿತು ಪ್ರಸ್ತುತ ವಿವರ ಲಭ್ಯವಿಲ್ಲ. ಈತ ಕ್ರಿ.ಶ. ೧೭೫೦-೭೦ರ ಸುಮಾರಿಗೆ ಇದ್ದಿರಬಹುದು. ಈತನ ವಂಶಸ್ಥರ ಕುರಿತೂ ಸಹ ಗೊತ್ತಾಗುತ್ತಿಲ್ಲ. ಹಿರಿಯರಾದ ಸಂಶೋಧನಾ ರತ್ನ ಗುಂಡಾಜೋಯಿಸರು,  ಅವರ ಮಗ ಡಾ. ವೆಂಕಟೇಶಜೋಯಿಸರು ಹಾಗೂ ಆಸಕ್ತರು ಈ ಕುರಿತು ಸಂಶೋಧನೆ ನಡೆಸಿದರೆ ಉಪಯುಕ್ತ ಮಾಹಿತಿ ಸಂಗ್ರಹಿಸಬಹುದು.
     ಲಿಂಗಣ್ಣಕವಿಯ ಎರಡನೆಯ ಮಗ ವೆಂಕಣ್ಣನ ಪರಿಚಯವನ್ನು ಶ್ರೀ ಗುಂಡಾಜೋಯಿಸರು, ಡಾ. ವೆಂಕಟೇಶಜೋಯಿಸರು ನೀಡಿದ ವಿವರಗಳು ಹಾಗೂ ವೆಂಕಣ್ಣನ ಕೃತಿಗಳನ್ನು ಆಧರಿಸಿ ಕವಿ ಸುರೇಶ್ ಈ ಲೇಖನ ಪ್ರಸ್ತುತ ಪಡಿಸಿದ್ದಾರೆ. ಕೆಳದಿ ವೆಂಕಣ್ಣಕವಿಯ ಕೀರ್ತನೆಗಳ ಸೊಗಸು ಎಂಬ ಶೀರ್ಷಿಕೆಯಲ್ಲಿ ಹಾಸನದ ವಿಪ್ರವಾಹಿನಿಯ ಜುಲೈ, ೨೦೦೭ರ ಸಂಚಿಕೆಯಲ್ಲಿ ಸಹ ಈ ಲೇಖಕರ ಲೇಖನ ಪ್ರಕಟವಾಗಿದೆ.                           --ಸಂಪಾದಕ

----------------------------------------------------------
ಶ್ರೀ ರಾಮೇಶ್ವರರ ಮೇಲಿನ ಭಕ್ತಿ ರಚನೆಗಳು:
      ಕೆಳದಿ ಶ್ರೀ ರಾಮೇಶ್ವರ ದೇವರನ್ನು ಮತ್ತು ಕುಲದೇವರಾದ ಕೊಲ್ಲೂರು ಮೂಕಾಂಬಿಕೆಯನ್ನು ಅಂಕಿತನಾಮವನ್ನಾಗಿಟ್ಟುಕೊಂಡು ವೆಂಕಣ್ಣ ಕವಿ ಭಕ್ತಿಯಿಂದ ರಚಿಸಿದ ಹಲವಾರು ಕೀರ್ತನೆಗಳು ತಾಡವೋಲೆಯಲ್ಲಿ ದೊರೆತಿದ್ದು, ಕೆಳದಿ ಗುಂಡಾಜೊಯಿಸರು ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು ಎಂಬ ಪುಸ್ತಕದಲ್ಲಿ ಸಂಪಾದಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಿಸಿದ್ದಾರೆ (೧೯೭೭). ಅನೇಕ ಹಾಡುಗಳಿಗೆ ಸಂಗೀತ ಶಾಸ್ತ್ರದಲ್ಲಿ ಹೇಳಿದ ರಾಗಗಳನ್ನು ತಾಳೆಗರಿಯಲ್ಲಿ ಕವಿಯು ಸೂಚಿಸಿದ್ದು, ಇದರಿಂದ ಕವಿಗೆ ಸಂಗೀತ ಶಾಸ್ತ್ರದಲ್ಲಿ ಸಾಕಷ್ಟು ಜ್ಞಾನವಿತ್ತೆಂದು ತಿಳಿಯಬಹುದಾಗಿದೆ.
    
ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳ ಸೊಗಸು:    

 ವೆಂಕಣ್ಣನ ಅನೇಕ ಕೃತಿಗಳು ಭಕ್ತಿಭಾವದ ಜೊತೆಗೆ ಪುರಂದರ ದಾಸರ ಹಾಗೂ ಕನಕದಾಸರ ಕೀರ್ತನೆಗಳಂತೆ ಪಾಮರರನ್ನು ಸನ್ಮಾರ್ಗಕ್ಕೆ ಒಯ್ಯುವಲ್ಲಿ ಅತ್ಯಂತ ಸಹಕಾರಿಯಾಗಿವೆ. ಬದುಕಿನಾರ್ಥದ ಬಗ್ಗೆ ಹಾಗೂ ಹಲವು ದೇವರ ಮಹಿಮೆಯ ಬಗ್ಗೆ ವಿವರಣೆಗಳು ಬಲು ಮನೋಜ್ಞವಾಗಿದ್ದು, ಅಂತಹ ಕೆಲವು ರಚನೆಗಳಿಂದ ಆಯ್ದ ಕೆಲವುಸಾಲುಗಳನ್ನು ಇಲ್ಲಿ ಪ್ರಸ್ತುತ ಪಡಿಸುವ, ತನ್ಮೂಲಕ ಆ ರಚನೆಗಳ ಒಂದು ಸೂಕ್ಷ್ಮ ಪರಿಚಯವನ್ನೂ ಮಾಡಿಕೊಡುವ ಪ್ರಯತ್ನ ಇದಾಗಿದೆ.
     ಹೂವ ಕೊಡೇ ದೇವಿ ಎಂಬ ಕೀರ್ತನೆಯಲ್ಲಿ ಸುಮಂಗಲಿಯರು ದೇವಿಯನ್ನು ಸ್ತುತಿಸಿ ಬೇಡುವ ಈಸಾಲುಗಳು ಅತ್ಯಂತಸುಂದರವಾಗಿವೆ:
         ಮುತ್ತೈದೆತನವನು ನಿತ್ಯ ಸೌಬಾಗ್ಯವ
         ಉತ್ತಮ ಧನಕನಕಾಂಬರವ
         ಪುತ್ರ ಸಂತಾನವ ಕೊಡುವೆನೆನುತ ಕರ-
         ವೆತ್ತಿ ಅಭಯವಿತ್ತು | ಹೂವ ಕೊಡೆ | ಹೂವ...

         ಎಂದೆಂದೂ ಈ ಮನೆಗೆ ಕುಂದದ ಭಾಗ್ಯವ
         ಚಂದವಾಗಿಹ ಛತ್ರ ಚಾಮರವ
         ಚಂದ್ರ ಸೂರ್ಯರ ಪೊಲ್ವ ನಂದನರನುದಯ
         ದಿಂದಲಿ ಕೊಟ್ಟು ರಕ್ಷಿಪೆನೆಂದು ಸೂಡಿದ ಹೂವ...
ಕಮಾಚ್ ರಾಗದಲ್ಲಿರುವ ಈ ಹಾಡು ಶಾಸ್ತ್ರೀಯ  ಸಂಗೀತದಲ್ಲೂ ಹಾಗೂ ಸುಗಮ ಸಂಗೀತದಲ್ಲೂ ಪ್ರಸ್ತುತ   ಪಡಿಸಲು ಬಲು ಸೊಗಸಾಗಿದೆ. ಅದೇ ರೀತಿ ನೀಲಾಂಬರಿ ರಾಗದಲ್ಲಿ ರಚಿತವಾದ ಮಕ್ಕಳಿಗೆ ಆಶೀರ್ವಾದವ ಕೋರುವ ಕೀರ್ತನೆಯಲ್ಲಿ ಮಕ್ಕಳು ಮುಂದೆ ಯಾವ ರೀತಿ ಆಗಬೇಕೆಂಬುದನ್ನು ಕವಿ ಈರೀತಿ ವಿವರಿಸಿದ್ದಾನೆ.
     ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
      ಶ್ಚಂದ್ರನಾಗು ಪಾಲನೆಯ ಮಾಡುವದರೊಳಗೆ ಉ-
      ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-
      ಗೇಂದ್ರ ನೀನಾಗು
ಇದಕ್ಕಿಂತ ಮಕ್ಕಳಿಗೆ ಹೆಚ್ಚಿನ ಆಶೀರ್ವಾದ/ಹಾರೈಕೆ ಬೇಕೇ?  ಇಡೀ ಕೀರ್ತನೆ ಆಶೀರ್ವಾದದ ಜೊತೆಗೆ ಮಕ್ಕಳಿಗೆ ಮುಂದೆ ಜೀವನದಲ್ಲಿ ಹೇಗೆ ಬದುಕಬೇಕು; ನಡೆದುಕೊಳ್ಳಬೇಕು ಎಂಬ ಬಗ್ಗೆ ಕೂಡಾ ಸಾಕಷ್ಟು ಮಾರ್ಗದರ್ಶನವನ್ನೂ ಒಳಗೊಂಡಿರುವುದು ಗಮನಾರ್ಹ.
ಮತ್ತೊಂದು ಕೃತಿಯಲ್ಲಿ ಗೃಹಿಣಿಯನ್ನು ಉದ್ದೇಶಿಸಿ ಬರೆದ ಈ ಸಾಲುಗಳು ಸ್ವಯಂ-ವೇದ್ಯವಾಗಿವೆ:
  ಪರಿಮಳಿಸುವ ಪುಷ್ಪ ಸರಗಳ ಮುಡಿದು
  ಗುರು ಹಿರಿಯರ ಆಶೀರ್ವಾದವ ಪಡೆದು
  ಹರುಷದಿ ಪುತ್ರ ಪೌತ್ರರ ಸಲಹುತ ಪತಿ
  ಚರಣ ಸೇವೆಯ ಮಾಡಿ ಸುಖವಿರು ಕುಕ್ಕೆಯ
         ವರ ಸುಬ್ರಹ್ಮಣ್ಯನ ಕೃಪೆಯಿಂದಾ
     ಪೂರ್ವಿಕಲ್ಯಾಣಿ ರಾಗದಲ್ಲಿ ರಚಿತವಾದ ಮತ್ತೊಂದು ಅಪೂರ್ವ ಕೀರ್ತನೆ ಆಧ್ಯಾತ್ಮ ಚಿಂತನೆಯತ್ತ ನಮ್ಮನ್ನು ಸೆಳೆಯುತ್ತದೆ. ಅದರಲ್ಲಿ ಬರುವ ಈ ಸಾಲುಗಳು ಅತ್ಯಂತ ನೀತಿ ಬೋಧಕವೂ, ಅನುಕರಣೀಯವೂ ಆಗಿವೆ:
    ತನ್ನ ತಾನೇ ತಿಳಿಯಬೇಕು | ತೋರುವ ಲೋಕ-
      ವನ್ನು ದೃಶ್ಯವೆಂದಿರಬೇಕು
      ತನ್ನಂತೆ ಸಕಲರ ನೋಡಲು ಬೇಕು
     ಮಾನ್ಯರ ಕಂಡರೆ ಮನ್ನಿಸಬೇಕು
      ಅನ್ಯನಾದರು ಹಿತವನೆ ಮಾಡಬೇಕು
     ಪ್ರಸನ್ನ ರಾಮೇಶನ ನೆನಹಿರಬೇಕು ||
ಭಗವದ್ಗೀತೆಯಲ್ಲಿ ಬರುವಂತೆ ನಾವು ಈ ಸಂಸಾರ ಬಂಧದಲ್ಲಿದ್ದರೂ ಕೂಡ ಮಾನಸಿಕವಾಗಿಯಾದರೂ ಆ ಜಂಜಾಟಕ್ಕೆ ಸಿಲುಕಬಾರದು. ನಾವು ಮಾಡಬೇಕಾದ ಕರ್ತವ್ಯಗಳನ್ನು ಯಾವುದೇಫಲಾಪೇಕ್ಷೆಯಿಲ್ಲದೇ, ನಿರ್ವಿಕಾರ ಭಾವದಿಂದ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು; ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವ ಹಾಗೂ ಪೂಜ್ಯರನ್ನು ಗೌರವಭಾವದಿಂದ ಕಾಣುವ ಪರಿ ನಮದಾಗಬೇಕು; ಅನ್ಯರಿಗೆ ಹಿತವಾಗುವಂತೆ - ಅದಿಲ್ಲದಿದ್ದರೆ - ನೋವಾಗದಂತೆ ನಮ್ಮನಡೆ-ನುಡಿಯಿರಬೇಕು; ಹಾಗೂ ರಾಮೇಶ್ವರನ (ಭಗವಂತನ) ಸ್ಮರಣೆ ಸದಾ ಇರಬೇಕೆಂಬ ಕವಿವಾಣಿ ಜೀವನ್ಮುಕ್ತಿಯೆಡೆಗೆ ನಮ್ಮನ್ನು ಕರೆದೊಯ್ಯುವ ಹಾಯಿ ದೋಣಿಯೆಂದರೂ ತಪ್ಪಾಗಲಾರದು.   ಪುರಂದರದಾಸರು ರಚಿಸಿದ ರಾಮ ಮಂತ್ರವ ಜಪಿಸೋ ಹೇ   ಮನುಜ... ಎಂಬ ಧಾಟಿಯಲ್ಲಿಯೇ ಕವಿ ವೆಂಕಣ್ಣನು   ಮಧ್ಯಮಾವತಿ ರಾಗದಲ್ಲಿ ಶಿವ ಮಂತ್ರವ ಜಪಿಸೋ ಮೂಢ ಎಂಬ ಸುಂದರ ಕೀರ್ತನೆಯನ್ನು ಸಹ ರಚಿಸಿದ್ದಾನೆ. ಸದಾ ಭಗವಂತನ ನಾಮಸ್ಮರಣೆಯೇ ಜೀವನದ ತಾರಕ ಮಂತ್ರ ವೆಂಬ ನಿತ್ಯಸತ್ಯ ಇದರಲ್ಲಡಗಿದೆ. ಸುಶ್ರಾವ್ಯವಾಗಿ ಹಾಡಲು    ಕೂಡ ಈ ಕೀರ್ತನೆ ಪ್ರಶಸ್ತವಾಗಿದೆ.
       ತುಳಸಿ ನಮ್ಮೆಲ್ಲರಿಗೂ   ಅತ್ಯಂತ   ಪೂಜನೀಯವಾದ ಗಿಡ. ಆಯುರ್ವೇದದ ದೃಷ್ಟಿಯಲ್ಲಿ ಇದೊಂದು ಸಂಜೀವಿನಿ. ತುಳಸಿ ಮಹಿಮೆ ಸಾರುವ ಕೀರ್ತನೆಯ ಪರಿ ಇಂತಿದೆ:
        ತುಳಸಿಯ ವೃಕ್ಷಗಳ ದಳದಳಗಳ ಮೇಲೆ
          ನೆಲಸಿಹನು ಹರಿಯು ಮುದದಿಂದ
         ಮುದದಿ ತುಲಸಿಯ ಪೂಜೆಗಳ
          ಮಾಡಬೇಕು ಸುಜನರು ||

          ತುಲಸಿಯ ಮೂಲದೆ ನದಿಗಳು
           ತುಲಸಿಯ ದಳದೊಳೆ ಶ್ರೀ ಹರಿಯು
           ತುಲಸಿಯ ಶಾಖೆಯೊಳೆ ಸುರರೆಲ್ಲಾ
           ನೆಲಸಿಹರು ಶ್ರೀ ತುಲಸಿಯ
           ಮಹಿಮೆಗೆಣೆಯುಂಟೆ ||
     ಕೆಳದಿ ಕವಿ ಮನೆತನದ ಆರಾಧ್ಯದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕುರಿತು ರಚಿಸಿದ ಕೃತಿ ಇರುವ ತಾಳೆಗರಿಯು ಈಗಲೂ ಕೆಳದಿ ವಸ್ತು ಸಂಗ್ರಹಾಲಯದಲ್ಲಿದ್ದು, ಆ ಕೃತಿಯಿಂದ ಆರಿಸಿದ ಕೆಲವು ಸಾಲುಗಳಿವು:
            ಮಂಗಲಂ ಜಯ ಮಂಗಲಂ
       ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ) ||
       ಗೌರಿಗೆ ಗುಜನನಿಗೆ ಗಿರಿಜಾತೆಗೆ
             ಧೀರಮಹಿಷ ದೈತ್ಯಮರ್ಧಿನಿಗೆ
             ಕಾರುಣ್ಯನಿಧಿಗೆ ಕಾಮಿತಫಲದಾತೆಗೆ
             ನಾರದನುತೆಗೆ ನಾರಾಯಣಿಗೆ || ....
     ಲಭ್ಯವಿರುವ ಓಲೆಗರಿಗಳಲ್ಲಿ ಹೀಗೆ ಹಲವಾರು ಮನೋಜ್ಞ ರಚನೆಗಳನ್ನು ವೆಂಕಣ್ಣ ಕವಿಯು ಮಾಡಿದ್ದು, ಬಹುಶ: ಸೂಕ್ತ ಪ್ರಚಾರದ ಕೊರತೆಯಿಂದ ಹೆಚ್ಚು ಪ್ರಚಲಿತವಾಗಿಲ್ಲವೆಂದು ತೋರುತ್ತದೆ.  ಅನೇಕ ಕೀರ್ತನೆಗಳು ಸಂಗೀತ ಕಛೇರಿಗಳಲ್ಲಿ ಪ್ರಸ್ತುತ ಪಡಿಸಲು ಅತ್ಯಂತ ಪ್ರಶಸ್ತವಾಗಿವೆ. ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಗೀತ ವಿದ್ವಾಂಸರುಗಳು ಈ ಕೃತಿಗಳನ್ನು ಹೆಚ್ಚು ಪ್ರಚುರ ಪಡಿಸಿ ಮತ್ತು ಪ್ರಸ್ತುತ ಪಡಿಸಿ, ತನ್ಮೂಲಕ ಭಕ್ತಿ-ಸನ್ಮಾರ್ಗದ ಪಥದಲ್ಲಿ ಎಲ್ಲರನ್ನೂ ಮುನ್ನಡೆಸುವತ್ತ ಸೂಕ್ತ ಶ್ರಮ ವಹಿಸಿದಲ್ಲಿ ಕವಿ ವೆಂಕಣ್ಣನ ಸಾಧನೆ ಮತ್ತು ಶ್ರಮ ಸಾರ್ಥಕವಾಗುತ್ತದೆ.

  ಒಟ್ಟಾರೆ ನೋಡಿದಾಗ ವೆಂಕ ಕವಿ ತನ್ನ ತಂದೆಯ ಹಾದಿಯಲ್ಲೇ ನಡೆದು ತನ್ನ ಅನುಪಮ ಕೃತಿಗಳಿಂದ ಮತ್ತು ಭಕ್ತಿ ರಚನೆಗಳಿಂದ ಕವಿ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿಗೆ ಮತ್ತು ಎಲ್ಲರ ಗೌರವಾದರಗಳಿಗೆ ಭಾಜನನಾಗಿರುವುದರಲ್ಲಿ ಸಂಶಯವಿಲ್ಲ.
           * * * * * * * * *


ಕೆಳದಿ ವೆಂಕಣ್ಣ ಕವಿಯ ಒಂದು ಭಕ್ತಿ ಸ್ತುತಿ
ರಾಗ|| ಮಧ್ಯಮಾವತಿ           ತಾಳ|| ಆದಿ ||
 ಶಿವಮಂತ್ರವ ಜಪಿಸೋ | ಮೂಢ |
 ಶಿವಮಂತ್ರವ ಜಪಿಸೋ
 ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||
 ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
 ಧ್ಯಾನ ಬೇಡ ಧಾರಣೆ ಬೇಡ
 ಮೌನ ಬೇಡ ಮಣಿಮಾಲಿಕೆ ಬೇಡ
 ಧ್ಯಾನ ಬೇಡ ಪಶುವಧೆಗಳು ಬೇಡ || ೧ ||
 ದೇಶಕಾಲ ಪಾತ್ರವ ನೋಡಬೇಡ
 ಕಾಷಾಯಾಂಬರ ಧಾರಣೆ ಬೇಡ
 ಭಾಸುರ ಜಡೆಯನು ಬೆಳೆಸಲು ಬೇಡ
 ಈ ಶರೀರವನೆ ದಂಡಿಸಬೇಡ  || ೨ ||
 ಕಾಲನ ದೂತರು ಎಳೆಯುವ ಮುನ್ನ
 ನಾಲಿಗೆ ತನ್ನಾಧೀನವಾಗಿರುವಾಗ
 ಏಳುಕೋಟಿ ಮಂತ್ರಕೆ ಮಣಿಯಾದ ವಿ
 ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು|| ೩ ||

********
ಪುರುಸೊತ್ತಿಲ್ಲ. . .?
     ಸಮಯವಿಲ್ಲವೆನ್ನುವವರು ಮತ್ತು ಸಮಯಪಾಲನೆ ಮಾಡದವರು ಪ್ರಗತಿ ಸಾಧಿಸಲಾರರು. ಸಮಯಪಾಲನೆ ಮಾಡುವವರನ್ನು ಆಡಿಕೊಳ್ಳುವವರು ಪ್ರಗತಿಗೆ ಅಡ್ಡಗಾಲಾಗುವರು.
**************

ಅಜ್ಜಿಯ ಹುಟ್ಟಿದ ಹಬ್ಬ ಮಾಡಿದ್ದು
    
     ನಾನು ಆಗ ಹಳೇಬೀಡಿನಲ್ಲಿ ೮ನೆಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ಅಮ್ಮ ಯಾವುದೋ ಕೆಲಸದ ಮೇಲೆ ಊರಿಗೆ ಹೋಗಿದ್ದರು. ನನಗೆ ಅಡುಗೆ ಕೆಲಸ ಬರುತ್ತಿತ್ತು. ಅವತ್ತು ಮೊದಲ ಬಾರಿಗೆ ರವೆ ಉಂಡೆ ಮಾಡುವುದನ್ನು ಕಲಿತಿದ್ದೆ. ಅಪ್ಪನ ಹತ್ತಿರ ರವೆ ಉಂಡೆ ಮಾಡುತ್ತೇನೆಂದು ಹೇಳಿದಾಗ ಬೇಡ ಎಂದು ಹೊರಟುಹೋದರು. ನನಗೆ ತುಂಬಾ ಬೇಜಾರಾಯಿತು. ಆದಿನ ಮಾತಿನ ಮಧ್ಯದಲ್ಲಿ ನಮ್ಮ ಅಜ್ಜಿ (ದಿ. ಲಕ್ಷ್ಮಮ್ಮ ಸುಬ್ಬರಾಯರು) ಇವತ್ತು ನನ್ನ ಹುಟ್ಟಿದ ಹಬ್ಬ ಅಂದಾಗ ನನಗೆ ಖುಷಿಯಾಯಿತು. ರವೆ ಉಂಡೆ ಮಾಡಿ ಅಜ್ಜಿಯ ಹುಟ್ಟಿದ ಹಬ್ಬಕ್ಕೆ ಸ್ವೀಟ್ ಮಾಡಿದೆ ಎಂದರೆ ಅಪ್ಪ ಏನೂ ಅನ್ನುವುದಿಲ್ಲ ಎಂದುಕೊಂಡು ರವೆ ಉಂಡೆ ಮಾಡಿದೆ. ನನಗೆ ರವೆ ಉಂಡೆಯನ್ನು ಶುಭದಿವಸಗಳಲ್ಲಿ ಮಾಡುವುದಿಲ್ಲ ಎಂದು ಗೊತ್ತಿರಲಿಲ್ಲ. ಅಜ್ಜಿಗೂ ಕೊಟ್ಟೆ. ಖುಷಿಪಟ್ಟು ತಿಂದರು. ಅದೇ ದಿನ ನಮ್ಮ ದೊಡ್ಡಮ್ಮ ವೈದೀಕ ಎಂದು ಹೇಳಿ ಪ್ರಸಾದವೆಂದು ಉದ್ದಿನ ವಡೆ, ಪಾಯಸ ಬೇರೆ ತಂದುಕೊಟ್ಟರು. ನಮ್ಮ ಮುದ್ದಿನ ಅಜ್ಜಿ ರವೆ ಉಂಡೆ ಮಾಡಿದ್ದು ತಪ್ಪು ಎಂದು ನನಗೆ ಹೇಳಲಿಲ್ಲ. ನನ್ನ ಮೊಮ್ಮಗಳು ನನ್ನ ಹುಟ್ಟಿದ ಹಬ್ಬ ಮಾಡಿದಳು ಎಂದು ಅಜ್ಜಿ ಎಲ್ಲರಿಗೂ ಖುಷಿಯಿಂದ ಹೇಳಿಕೊಂಡು ಬಂದರು. ಕೊನೆಗೆ ವಡೆ, ಪಾಯಸ ಬಂದಿದ್ದೂ ಹೇಳಿ ಬಿದ್ದು ಬಿದ್ದು ನಗುತ್ತಿದ್ದರು. ನನಗೂ ಸಂತೋಷವಾಯಿತು. ಈ ಸಂಗತಿ ಈಗಲೂ ನನಗೆ ನೆನಪಾಗುತ್ತಿರುತ್ತದೆ.

-ಹೆಚ್.ಪಿ. ರಶ್ಮಿ, ಬೆಂಗಳೂರು.

-ಪುಟಗಳು ೫,೬,೭-
***************
ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ
ಗದ್ಯಾನುವಾದ: ಕೆ. ಗುಂಡಾಜೋಯಿಸ್

ಪ್ರಥಮಾಶ್ವಾಸಂ
-೨-

(ಹಿಂದಿನ ಸಂಚಿಕೆಯಿಂದ ಮುಂದಕ್ಕೆ. . . .)
     ಮೇನಾಧಾರಂ ವಿನತಾ
     ಸೂನುವಿನೊಲ್ಸತ್ಪಥಾಶ್ರಯಂ ಸುಜನನೊಲಾ
     ಯ್ತಾನಗಮಸ್ತ್ರೀಕೃತ ಜಿತ
     ದಾನವನೊಲನಂತಕಟಕಭೂಷಿತಪಾದಂ          | ೯ |

     ಆ ಹಿಮಾಲಯ ಪರ್ವತವು ವೈನತೇಯನಂತೆ ಮೇನಾಧಾರವಾಗಿ (ಮೇನೆಯೆಂಬವಳ ಪತಿ, ಮತ್ತು ಮಾ+ಇನ= ಲಕ್ಷ್ಮೀಪತಿಯಾದ ವಿಷ್ಣುವಿನ ವಾಹನ) ಸಜ್ಜನನ ಹಾಗೆ ಸತ್ಪಥಾಶ್ರಯ (ದೇವತೆಗಳಿಗೆ ಮತ್ತು ಸಜ್ಜನರಿಗೆ ಆಶ್ರಯ). (ತ್ರಿಪುರಾಸುರಸಂಹಾರ ಕಾಲದಲ್ಲಿ ಶಿವನ) ಅಸ್ತ್ರವಾದ ವಿಷ್ಣುವಿನಂತೆ ಅಸಂಖ್ಯವಾದ ತೊಪ್ಪಲುಗಳಿಂದ ಭೂಷಿತವಾದ ಸಮೀಪವರ್ತಿ ಬೆಟ್ಟಗಳುಳ್ಳವನು. ವಿಷ್ಣುಪಕ್ಷದಲ್ಲಿ- ಆದಿಶೇಷನೆಂಬ ಕಾಲ್ಗಡಗದಿಂದ ಭೂಷಿತವಾದ ಪಾದವುಳ್ಳವನು.
ವ|| ಇಂತು ಹಿಮಾಚಲಂ ವಿರಾಜಿಸುತ್ತುಮಿರಲ್
     ಆ ಗಿರಿಯ ದಕ್ಷಿಣಾಶಾ
     ಭಾಗದೊಳುರೆ ಕರ್ಮಭೋಮುಸಂಜ್ಞೆಯಿನಧಿಕ
     ಶ್ರೀಗೆಡೆಯೆನಿಸಿ ಮನೋಹರ
     ಮಾಗಿರ್ಪುದು ಭರತಖಂಡಮನಘಕರಂಡಂ   | ೧೦ |

     ವ|| ಈ ರೀತಿ ಹಿಮಾಚಲ ಪರ್ವತವು ಶೋಭಿಸುತ್ತಿರಲಾಗಿ
     ಆ ಪರ್ವತದ ದಕ್ಷಿಣ ದಿಕ್ಕಿನಲ್ಲಿ ಕರ್ಮಭೂಮಿಯೆಂದೆನಿಸಿ ಹೆಚ್ಚು ಸಂಪತ್ತಿಗೆ ಆಶ್ರಯವಾಗಿ ಭರತಖಂಡವು ಪುಣ್ಯದ ಪೆಟ್ಟಿಗೆಯೆನಿಸಿ ಮನೋಹರವಾಗಿದೆ.
                                          
ವ|| ಇಂತೆಸೆವ ಭರತಖಂಡದ ತೆಂಕಣಾಶಾಭಾಗದೊಳ್          ನಾನಾವಿಧವರ್ಣಾಶ್ರಮಸುಖಸಂಪತ್ಸಮಾಜಕಾಸ್ಪದಮೆನಿಸಿ ಮೆರೆವ ಕನ್ಯಾಖಂಡಪ್ರದೇಶದೊಳ್
     ಅಗಣಿತತೀರ್ಥ ನದೀಜದ
     ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮೂ
     ಹಗಳಿಗೆಡೆಯೆನಿಸಿ ಮೆಗೆ ಝಗ
     ಝಗಿಪುದು ಸಹ್ಯಾಚಲಂ ಮಹಾಸುಖಮೂಲಂ     | ೧೧

     |ವ|| ಈ ರೀತಿ ಶೋಭಿಸುವ ಭರತಖಂಡದ ದಕ್ಷಿಣಭಾಗದಲ್ಲಿ ಅನೇಕ ವರ್ಣಧರ್ಮಾಶ್ರಮಗಳ ಜನಸಮಾಜಕ್ಕೆ ಆಶ್ರಯವಾಗಿ ಮೆರೆಯುವ ಕನ್ಯಾಖಂಡ ಪ್ರದೇಶದಲ್ಲಿ
ಲೆಕ್ಕವಿಲ್ಲದ ತೀರ್ಥಗಳು, ನದಿಗಳು, ಪರ್ವತಗಳು, ಪುಣ್ಯಾರಣ್ಯಗಳಿರುವ ಪವಿತ್ರಕ್ಷೇತ್ರಗಳಿಗೆ ಆಶ್ರಯಭೂತವಾಗಿರುವ ಸಹ್ಯಾಚಲವು ಹೆಚ್ಚಿನ ಸುಖಕ್ಕೆ ಕಾರಣೀಭೂತವಾಗಿ ಮೆರೆಯುತ್ತಿದೆ.
ಆ ಸಹ್ಯಾದ್ರಿಯೊಳೊಪ್ಪುವ
     ದೇಶಂಗಳೊಳಧಿಕಮೆನಿಸಿ ನಿರುಪಮಲಕ್ಷ್ಮೀ
     ಕೋಶಂ ವಿಲತ್ಪುಣ್ಯನಿ
     ವೇಶಂ ಕರ್ಣಾಟಕದೇಶಮುರೆ ರಂಜಿಸುಗುಂ        | ೧೨ |

     ಆ ಸಹ್ಯಾದ್ರಿ ಭಾಗದಲ್ಲಿ ಮೆರೆಯುತ್ತಿರುವ ಅನೇಕ ದೇಶಗಳಲ್ಲಿ ಹೆಚ್ಚಿನದಾದ, ಅಸಮಾನ ಸಂಪತ್ತಿನಿಂದ ಕೂಡಿದ ಪುಣ್ಯದ ನೆಲೆಯಾದ ಕರ್ನಾಟಕ ದೇಶವು ಅಧಿಕವಾಗಿ ಕಂಗೊಳಿಸುತ್ತಿದೆ.
ಕೆರೆಯಿಂ ಕಾಳ್ಪುರದಿಂ ಕನತ್ಕುವಲಯಾಂಭೋಜಂಗಳಿಂ ಶೋಭಿಪೊ
ಳ್ಸರದಿಂ ಪುಷ್ಪಲತಾಪ್ರತಾನ ಲಸದಾರಾಮ ಪ್ರದೇಶಂಗಳಿಂ
ತೊರೆಯಿಂ ರಾಜಿಪ ಗಂಧಶಾಲಿವನದಿಂ ಕ್ರೀಡಾದ್ರಿಯಿಂ ಕಣ್ಗೆ ಭಾ
ಸುರಮಾಗಿರ್ದುದು ದೇಶಮುನ್ನತಸುಖಾವಾಸಂ ದಲೇಂ ವರ್ಣಿಪೆಂ                          | ೧೩ |

     ಆ ದೇಶವು ಕೆರೆಯಿಂದಲೂ, ಹಳ್ಳದಿಂದಲೂ, ನೈದಿಲೆ ತಾವರೆಯುಳ್ಳ ಸರೋವರದಿಂದಲೂ, ಹೂಬಳ್ಳಿಗಳಿಂದ ಮೆರೆಯುವ ಉದ್ಯಾನವನಗಳಿಂದಲೂ, ಹೊಳೆಯಿಂದಲೂ, ಭತ್ತದ ಹೊಲದಿಂದಲೂ, ಆಟದ ಬೆಟ್ಟಗಳಿಂದಲೂ, ಹೆಚ್ಚಿನ ಸುಖದ ನೆಲೆಯಾಗಿದೆ. ಇದನ್ನು ಏನೆಂದು ವರ್ಣಿಸಲಿ?
ವ|| ಮತ್ತಮದಲ್ಲದಾದೇಶಂ ಸ್ವರ್ಲೋಕದಂತೆ ಸುರಚಿರ ಸುರಭಿ ಸುಮನೋವೃಕ್ಷ ಪರಿಶೋಭಿತಮುಂ ಸುತ್ರಾಮನೋಲಗಶಾಲೆಯಂತೆ ಸುಧರ್ಮಾನ್ವಿತಮುಂ, ವಧೂಪಯೋಧರದಂತಗ್ರಹಾರ-ಮಾಲಾಲಂಕೃತಮುಂ, ಗಗನಮಂಡಲದಂತೆ ಭಾಸ್ವದ್ದ್ವ್ವಿಜರಾಜಾಭಿ ರಾಮಮುಂ, ಅಳಕಾನಗರದಂತಗಣ್ಯಪುಣ್ಯಜನಾದಿಷ್ಠಿತಮುಂ, ಸಮಾಸಚಕ್ರದಂತೆ ಬಹುವ್ರೀಹಿಸಮಾವೃತಮುಂ, ಪದ್ಮಪೀಠ-ನಂತನಂತನಿಗಮಾಶ್ರಯಮುಂ, ನಾರಾಯಣನಂತೆ ಸುದರ್ಶನೋ-ಪಸೇವ್ಯಮುಂ, ಮಹಾದೇವನಂತಚಲಿತದುರ್ಗಾಸ್ಪದಮುಮೆನಿಸಿ ವಿರಾಜಿಸುತಿರ್ದುದಂತು ಮಲ್ಲದೆಯುಂ-
     ಪುಸಿ ಕಳವು ಪಾದರಂ ಬೇ
     ವಸಮಟ್ಟುಳಿ ದಾಳಿ ಠೌಳಿಯಪಹೃತಿ ಮೋಸಂ
     ಪಿಸುಣನ್ಯಾಯಮೆನಿಪ್ಪೀ
     ಪೆಸರ್ಗಳ್ ಪೆಸರ್ಗೊಂಬೊಡಿಲ್ಲವಂತಾ ನಾಡೊಳ್   | ೧೪ |

     ವ|| ಇಷ್ಟು ಮಾತ್ರವಲ್ಲದೆ ಆ ದೇಶವು ಸುಂದರವಾದ ಪರಿಮಳಭರಿತವಾದ ಮನೋಹರ ವೃಕ್ಷಗಳಿಂದ ಕೂಡಿದ, ಸುಧರ್ಮ ಎಂಬ ಹೆಸರುಳ್ಳ ಇಂದ್ರನ ಓಲಗಶಾಲೆಯ ಹಾಗೆ ಸುಧರ್ಮದಿಂದ ಕೂಡಿದೆ. (ಸುಧರ್ಮ- ದೇವಸಭೆ ಮತ್ತು ಧರ್ಮ) ಮೇಲುಬದಿಯ ಹಾರ-ಮಾಲೆಗಳಿಂದ ಶೋಭಿಸುವ ವಧೂಸ್ತನದಂತೆ ಅಗ್ರಹಾರಗಳ ಸಾಲಿನಿಂದ ಶೋಬಿಸುತ್ತಿದೆ. ಹೊಳೆಯುವ ಚಂದ್ರನಿಂದ ಸುಂದರವಾದ ಆಕಾಶಮಂಡಲದಂತೆ ಪ್ರಕಾಶಿಸುವ ಬ್ರಾಹ್ಮಣಶ್ರೇಷ್ಠರ ವಿಹಾರಸ್ಥಾನವಾಗಿದೆ. ಅಸಂಖ್ಯಾತ ಯಕ್ಷರಿಂದ ಕೂಡಿದ ಅಲಕಾಪಟ್ಟಣದ ಹಾಗೆ ಲೆಕ್ಕವಿಲ್ಲದಷ್ಟು ಪುಣ್ಯಾತ್ಮರಿಂದ ಕೂಡಿದೆ. ಬಹುವ್ರೀಹಿ ಸಮಾಸವುಳ್ಳ ಸಮಾಸಚಕ್ರದ ಹಾಗೆ ತುಂಬಾ ಭತ್ತದಿಂದ ಕೂಡಿದೆ. ಅನಂತ ವೇದಗಳಿಗೆ ಆಶ್ರಯನಾದ ಬ್ರಹ್ಮನಂತೆ ಅನೇಕ ಆಶ್ರಯನೀಯವೂ ಆಗಿದೆ. ದುರ್ಗಾವಲ್ಲಭನಾದ ಮಹದೇವನಂತೆ ಸ್ಥಿರವಾದ ಕೋಟೆಗಳಿಂದ ಕೂಡಿದೆ. ಇಷ್ಟು ಮಾತ್ರವಲ್ಲದೆ
     ಸುಳ್ಳು, ಕಳ್ಳತನ, ಹಾದರ, ದಬ್ಬಾಳಿಕೆ, ಆಕ್ರಮಣ, ಮುತ್ತಿಗೆ, ಸೆಣಸಾಟ, ಅಪಹರಣ, ಮೋಸ, ಚಾಡಿ, ಅನ್ಯಾಯ ಎಂಬವುಗಳು ಹೆಸರು ಹೇಳುವುದಕ್ಕೂ ಆ ನಾಡಿನಲ್ಲಿಲ್ಲ.
ವ|| ಮತ್ತಮಂತುಮಲ್ಲದೆ
     ಪೊಡೆಯೆಂಬರ್ಶಾಲಿಯನಾ
     ರಡಿಯೆಂಬರ್ಷಟ್ಟದಾಳಿಯಂ ಕರಿಣಿಯುಮಂ
     ಪಿಡಿಯೆಂಬರಲ್ಲದೀಪರಿ
     ನುಡಿಯಾಲಿಪೊಡಿಲ್ಲ ಜನರೊಳಂತಾ ನಾಡೊಳ್     | ೧೫ |

     ವ|| ಮತ್ತೆ ಮಾತ್ರವಲ್ಲದೆ
    ಭತ್ತವನ್ನು ಪೊಡೆ ಎನ್ನುತ್ತಾರೆಯೇ ಹೊರತು, ಜನರನ್ನು ಹೊಡೆ ಎಂಬರ್ಥದಲ್ಲಿ ಆ ಶಬ್ದವನ್ನು ಬಳಸುವುದೇ ಇಲ್ಲ. ದುಂಬಿಗಳ ಸಮೂಹವನ್ನು ಆರಡಿ ಎನ್ನುತ್ತಾರೆ. ಹೆಣ್ಣಾನೆಯನ್ನು ಪಿಡಿ ಎನ್ನುತ್ತಾರೆ. ಈ ಶಬ್ದಗಳು ಬೇರೆ ಅರ್ಥದಲ್ಲಿ ಆ ನಾಡಿನಲ್ಲಿ ಇರುವುದಿಲ್ಲ.
     ಕಡೆಯೆಂಬರ್ದಧಿಮಥನದೊ
     ಳೊಡೆಯೆಂಬರ್ಭಕ್ಷ್ಯಭೇದದೊಳ್ ಕಬರಿಗಳೊಳ್
     ಮುಡಿಯೆಂಬರಲ್ಲದೀ ಬಿರು
     ನುಡಿ ಕನಸಿನೊಳಾದೊಡಂ ವಿಚಾರಿಪೊಡಿಲ್ಲಂ       | ೧೬ |

     ಮೊಸರು ಕಡೆಯುವುದನ್ನು ಕಡೆ ಎನ್ನುತ್ತಾರೆ. ಒಡೆ ಎಂಬುದು ಒಂದು ಭಕ್ಷ್ಯದ ಹೆಸರು. ಮುಡಿ ಎಂದರೆ ತುರುಬು ಮಾತ್ರ. ಇದರ ಹೊರತು ಕಡೆ, ಒಡೆ, ಮುಡಿ ಎಂಬ ಬಿರುನುಡಿಗಳು ಆ ನಾಡಿನಲ್ಲಿ ಕನಸಿನಲ್ಲಿಯೂ ಇಲ್ಲ.
     ಅಳಿಯಿಲ್ಲದಬ್ಜಮಬ್ಜಾ
     ವಳಿಯಿಲ್ಲದ ಸರಸಿ ಸರಸಿಯಿಲ್ಲದ ಸನ್ಮಂ
     ಜುಳನಂದನ ಮುರುನಂದನ
     ಕುಳಮಿಲ್ಲದ ಪೊಳಲ್ಗಳಿಲ್ಲವಂತಾ ನಾಡೊಳ್        | ೧೭ |

     ದುಂಬಿಯಿಲ್ಲದ ತಾವರೆ, ತಾವರೆಗಳಿಲ್ಲದ ಸರೋವರ, ಸರೋವರಗಳಿಲ್ಲದ ಉದ್ಯಾನವನ, ಉದ್ಯಾನವನಗಳಿಲ್ಲದ ಪಟ್ಟಣಗಳು ಆ ನಾಡಿನಲ್ಲಿಲ್ಲ.
ವ|| ಮತ್ತಮದಲ್ಲದೆ
     ಎಳಎಲರಿಂದೊಡೆದೊಸರ್ವು
     ಜ್ಜ್ವಲ ಧವಳೇಕ್ಷುಗಳ ಪಾಳಿ ಕಾಲ್ಗಳಿನೆತ್ತಂ
     ಬೆಳದಾ ಶಾಲಿವನಂ ಕಂ
     ಗೊಳಿಪುದು ಭೂವನಿತೆಯುಟ್ಟ ಪೊಂಬಟ್ಟೆಯವೋಲ್ | ೧೮ |

     ವ|| ಮತ್ತೆ ಅದಲ್ಲದೆ
     ಎಳೆಗಾಳಿಯಿಂದಲೇ ಒಡೆದು ರಸ ಸುರಿಸುವ ಬಿಳಿಕಬ್ಬುಗಳ ಸಾಲು ಅಲ್ಲಿದೆ. ನೀರ್ಗಾಲುವೆಗಳಿಂದ ಸುತ್ತಲೂ ಬೆಳೆದಿರುವ ಭತ್ತದ ಹೊಲವು, ಭೂಮಿ ಎಂಬ ಹೆಂಗಸು ಉಟ್ಟ ಬಂಗಾರದ ಬಟ್ಟೆಯ ಹಾಗೆ ಇದೆ.
ನೆರೆ ತಿಳಿದು ನಿಂದ ನೀರೊಳ್
     ತರದಿಂ ಮಾರ್ಪೊಳೆವ ಶಾಲಿಮಂಜರಿ ನಿಕರಂ
     ವರಭೂಸಾರತೆಯಿಂ ತಾ
     ನುರೆ ಬೇರೊಳ್ ಬೇರೆ ಫಲಿಸಿತೆಂಬವೊಲೆಸಗುಂ | ೧೯ |

     ತಿಳಿಯಾದ ನೀರಿನಲ್ಲಿ ಪ್ರತಿಬಿಂಬಿಸಿದ ಬತ್ತದ ತೆನೆಗಳ ಸಮೂಹವು ಸಾರವತ್ತಾದ ಭೂಮಿಯಲ್ಲಿ ಬೇರಿನಲ್ಲಿಯೂ ತೆನೆಬಂದ ಹಾಗೆ ಕಾಣುತ್ತದೆ.
ವ|| ಮತ್ತಮದಲ್ಲದೆ
     ಜಲಜಜನಮರ್ದಂ ಬೆಳ್ಳಿಯ
     ಕೊಳವಿಗಳೊಳ್ ತುಂಬಿ ಗಂಟನೊಂದಿಸಿ ಗರುಡಂ
     ತಿಳಿಯದೊಲವನಿಳೆಯೊಳ್ನೆಲೆ
     ಗೊಳಿಸಿದನೆನೆ ಮೆರೆದುದಮಳಪುಂಡ್ರೇಕ್ಷುವನಂ | ೨೦ |

     ವ|| ಮತ್ತೆ ಅದಲ್ಲದೆ           ಬ್ರಹ್ಮನು ಅಮೃತವನ್ನು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿ, ಗಂಟು ಮುಚ್ಚಿ, ಅಪಹರಿಸಲು ಬರುವ ಗರುಡನಿಗೆ ತಿಳಿಯದ ಹಾಗೆ ಈ ಭೂಮಿಯಲ್ಲಿ ಇಟ್ಟ ರೀತಿಯಲ್ಲಿ ಪಟ್ಟೆ ಕಬ್ಬುಗಳ ಹೊಲ ಅಥವಾ ತೋಟ ಕಾಣಿಸುತ್ತಿದೆ.
     ಹರಿಯೊರ್ಮೆಯಮರ್ದನಮರ
     ರ್ಗೆರೆದೊಡೆ ನವಸುಧೆಯನೆರೆದಪೆವು ನಿಮಗನಿಶಂ
     ನರರಿತ್ತ ಬನ್ನಿಮೆನುತುಂ
     ಕರೆವಂತಿರೆ ಮೊರೆವುವಿಕ್ಷುಯಂತ್ರಪ್ರಚಯಂ  | ೨೧ |

     ಹರಿಯು ಒಂದು ಸಲ ಮಾತ್ರ ದೇವತೆಗಳಿಗೆ ಅಮೃತವನ್ನು ನೀಡಿದ್ದಾನೆ, ನಿಮಗೆ ನಿತ್ಯವೂ ಹೊಸ ಅಮೃತವನ್ನು ಹೊಯ್ಯುತ್ತೇವೆ; ಮನುಷ್ಯರೆಲ್ಲರೂ ಬನ್ನಿ ಎಂದು ಕರೆಯುತ್ತಿರುವ ಹಾಗೆ ಕಬ್ಬಿನ ಗಾಣಗಳು ಶಬ್ದ ಮಾಡುತ್ತವೆ.
ವ|| ಮತ್ತಮದಲ್ಲದೆ
     ಮಿಂಚುವ ಪೊಸ ನೆಲ್ದೆನೆಗಳ
     ಗೊಂಚಲ್ಗಳನಡಸಿ ಬಾಯ್ಗಳೊಳ್ ನಲಿಯುತ್ತುಂ
     ಚಂಚುಗಳಿನಲೆವ ಗಿಳಿಗಳ
     ಸಂಚಯಮಂ ಸೋವುತಿರ್ಪರುರೆ ಪಾಮರಿಯರ್ | ೨೨ |

     ವ|| ಮಾತ್ರವಲ್ಲದೆ
     ಹೊಳೆಯುವ ಹೊಸಭತ್ತದ ತೆನೆಗಳ ಗೊಂಚಲುಗಳನ್ನು ಬಾಯೊಳಗೆ ಕಚ್ಚಿಕೊಂಡು ಹಾರಾಡುವ ಗಿಳಿಗಳ ಸಮೂಹವನ್ನು ಹಳ್ಳಿಯ ಹೆಂಗಸರು ಓಡಿಸುತ್ತಿರುತ್ತಾರೆ.
    ಸಲೆ ಸೋವ ಪಾಮರಿಯರು
     ಜ್ಜ್ವಲಿಪಧರವನೀಕ್ಷಸುತ್ತೆ ಪಣ್ತುರುಬಿಂಬೀ
     ಫಲವೆಂದು ಕರ್ದುಕಬಗೆದವ
     ರ್ಗಳ ಸಿರಿಮೊಗಕೆರಪುವಲ್ಲಿ ಗಿಳಿಗಳ ಬಳಗಂ        | ೨೩ |

     ಹಕ್ಕಿಗಳನ್ನು ಓಡಿಸುವ ರೈತಹೆಂಗಸರ ಹೊಳೆಯುವ ತುಟಿಯನ್ನು ನೋಡಿ ಮಾಗಿದ ತೊಂಡೆಹಣ್ಣೆಂದು ಭ್ರಮಿಸಿ, ಗಿಳಿಗಳ ಬಳಗವು ಕಚ್ಚುವುದಕ್ಕಾಗಿ ಅವರ ಸುಂದರಮುಖಕ್ಕೆ ಎರಗುತ್ತದೆ.
. . . . . . .ಮುಂದುವರೆಯುವುದು.

*****************************
-ಪುಟಗಳು 8,9-
*****************************
*****************

UÀªÀÄ£ÀPÉÌ
     PÀ«QgÀtzÀ ¸ÀzÀÄzÉñÀ, ¸ÀzÁ±ÀAiÀÄUÀ½UÉ ¥ÀÆgÀPÀªÁzÀ PÀxÉ , PÀªÀ£À, ¯ÉÃR£À, EvÁå¢UÀ½UÉ DºÁ£À«zÉ. ¸ÀPÁ®zÀ°è PÀ¼ÀÄ»¹PÉÆqÀ®Ä PÉÆÃjzÉ. ¹Ã«ÄvÀ ¥ÀÄl¸ÀASÉåUÀ¼À PÁgÀt QgÀħgÀºÀUÀ½UÉ DzÀåvɬÄzÉ.
******************

¥ÁAiÉÆÃdPÀvÀé
      ¥ÀwPÉAiÀÄ ¸ÀAaPÉUÀ¼À£ÀÄß ¥ÁAiÉÆÃf¸À®Ä CªÀPÁ±À«zÉ. gÀÆ. 5000/- ªÀÄvÀÄÛ ªÉÄîlÄÖ ªÉƧ®UÀÄ ¤ÃrzÀ°è CªÀgÀ£ÀÄß ¸ÀAaPÉAiÀÄ ¥ÁAiÉÆÃdPÀgÉAzÀÄ ¥ÀjUÀt¹ ¥ÀwæPÉAiÀİè CªÀgÀ PÀÄlÄA§zÀ ¥ÀÆtð  ¥ÀÄlzÀ ¨ÁªÀavÀæ ¥ÀPÀn¹ ¸Àäj¸À¯ÁUÀĪÀÅzÀÄ. ¥ÁAiÉÆÃdPÀgÀÄ ªÀÄÄAzÉ §gÀ®Ä PÉÆÃjzÉ.
¥ÀxÀªÀÄ ¸ÀAaPÉAiÀÄ ¥ÁæAiÉÆÃdPÀgÀÄ:
PÉ.«. C£ÀAvÀ ªÀÄvÀÄÛ PÀÄlÄA§,
£ÉÆÃj¸ï mË£ï, ¦J- 19403,
CªÉÄjPÁ ¸ÀAAiÀÄÄPÀÛ ¸ÀA¸Á£À.

F ¸ÀAaPÉAiÀÄ ¥ÁAiÉÆÃdPÀgÀÄ:
ºÉZï. J¸ï. ¥ÀÄlgÁdÄ ªÀÄvÀÄÛ PÀÄlÄA§,
²æÃ PÀȵÀÚ ¨ÉÃPÀj, eÁªÀUÀ¯ï, CgÀ¹PÉgÉ vÁ., ºÁ¸À£À f¯Éè.
ªÀÄÄA¢£À ¸ÀAaPÉAiÀÄ ¥ÁAiÉÆÃdPÀgÀÄ:
¤ÃªÉà EgÀ§ºÀÄzÉ?
* * * * *

ªÀÄ£À«
     EzÀÄ PÀ« ªÀA±À¸ÀgÀ PÀÄlÄA§zÀ ºÁUÀÆ §AzÀÄ §¼ÀUÀzÀªÀgÀ ¥ÀwPÉAiÀiÁVzÀÄÝ, F ¥ÀwPÉUÉ PÀÄlÄA§zÀªÀgÉà DzÁgÀ. FUÁUÀ¯Éà ¤zÁðgÀªÁVgÀĪÀAvÉ ¥Àw PÀÄlÄA§zÀ ¥Àw WÀlPÀ¢AzÀ ªÁ¶ðPÀ gÀÆ. 500/- C£ÀÄß ªÀAwPÉAiÀiÁV ¸ÀAUÀ»¸À®Ä GzÉò¹zÀ «µÀAiÀÄ w½zÀzÉà DVzÉ.  F ºÀtªÀ£ÀÄß ¥ÀwPÉUÉ ªÀiÁvÀªÀ®zÉ PÀÄlÄA§UÀ¼À ªÁ¶ðPÀ ¸ÀªÉÄäüÀ£À £ÀqɸÀ®Ä AiÀiÁgÀÆ ªÀÄÄAzÉ §gÀ¢zÀÝ ¸ÀAzÀ¨ÀðzÀ°è ¸ÀºÀ §¼À¸À®Ä GzÉò¹gÀĪÀÅzÀjAzÀ J®gÀ ¸ÀºÀPÁgÀ PÉÆÃjzÉ. ªÁ¶ðPÀªÁV gÀÆ. 500/- ¤ÃqÀĪÀÅzÀÄ PÀµÀªÁUÀ¯ÁgÀzÁzÀgÀÆ, EµÉà PÉÆqÀ¨ÉÃPÉAzÀÄ MvÁAiÀÄ«gÀĪÀÅ¢®è. ¥ÁªÀwUÉ gÀ¹Ã¢ ¤ÃqÀ¯ÁUÀĪÀÅzÀÄ.
     PÀ«ªÀÄ£ÉvÀ£ÀzÀ ºÉtÄÚ ªÀÄPÀ¼ÀÄ ¸ÉÃjgÀĪÀ §¼ÀUÀzÀ PÀÄlÄA§UÀ¼ÀªÀgÀÄ ºÁUÀÆ »vÉʶUÀ¼ÀÄ ¸Àé EZɬÄAzÀ ¸ÀºÀPÁgÀ ¤ÃrzÀ°è ¸ÁUÀvÀ«zÉ.
     ¸ÀAUÀºÀªÁzÀ ªÉƧ®UÀ£ÀÄß ²æÃ ¸Á.PÀ. PÀȵÀªÀÄÆwð ªÀÄvÀÄÛ ²æÃ PÀ«¸ÀÄgÉñÀgÀ ºÉ¸Àj£À°è ¨ÉAUÀ¼ÀÆj£À §£À±ÀAPÀj 2£ÉAiÀÄ ºÀAvÀzÀ ¹ArPÉÃmï ¨ÁåAPï£À ±ÁSÉAiÀİè dAn SÁvÉAiÀÄ°è  dªÀiÁ Ej¹, ¸À«Äw ¤zÁðgÀ ¥ÀqÉzÀÄ ªÉZÀÑ ªÀiÁqÀ¯ÁUÀĪÀÅzÀÄ. SÁvɸÀA. 04782010037650   DVzÀÄÝ, F SÁvÉUÉ £ÉÃgÀªÁV dªÀiÁ ªÀiÁqÀ®Æ CªÀPÁ±À«zÉ. DzÁAiÀÄ ªÉZÀzÀ «ªÀgÀUÀ¼À£ÀÄß ¥ÀwPÉAiÀÄ°è ¥ÀPÀn¸À¯ÁUÀÄwzÉ. ¥Àj²Ã®£ÉUÀÆ CªÀPÁ±À«zÉ.
     ¸ÀAUÀºÀªÁUÀĪÀ ªÉƧ®UÀÄ ¸ÀzÀÄzÉñÀPÉÌ/ ¸ÀªÀiÁdPÁAiÀÄðPÉÌ ªÀiÁvÀæ §¼ÀPÉAiÀiÁUÀĪÀÅzÀjAzÀ ªÀÄ£ÉUÀ¼À°è ±ÀĨÀPÁAiÀÄð £ÀqÉAiÀÄĪÀ ªÀÄvÀÄÛ  EvÀgÀ ¸ÀAzÀ¨ÀðUÀ¼À°è ºÁUÀÆ »jAiÀÄgÀ £É£À¦UÁV ‘ªÀÄAUÀ¼À¤¢ü’ ºÉ¸Àj£À°è zÉÃtUÉ ¤ÃqÀ§ºÀÄzÀÄ.
* * * * *

¸ÁxÀðPÀ
     °AUÀtÚ PÀ«AiÀĪÀjAzÁgÀA©¹ CªÀgÀ ªÀA±ÀzÀ EzÀĪÀgÉV£À ¸ÁzÀPÁ PÀÈwUÀ¼À£ÀÄß, ¸ÁzÀ£ÉUÀ¼À£ÀÄß D¸ÀPÀÛ NzÀÄUÀjUÉ ¤gÀAvÀgÀªÁV ¤ÃqÀÄvÁÛ- PÀ«ªÀA±ÀzÀ vÀ¯ÉªÀiÁgÀÄUÀ¼À ¥ÀgÀ¸ÀgÀ ¥ÀjZÀAiÀÄ C£ÀħAzÀUÀ¼À£ÀÄß ¨É¼É¸ÀÄvÀÛ §gÀĪÀ F µÁuÁä¹PÀ ¥ÀwPÉAiÀÄ ¥ÀæPÀluÉ vÀÄA¨Á OavÀå¥ÀÆtðªÁzÀÄzÀÄ. “gÀ« PÁtzÀ£ÀÄß PÀ« PÀAqÀ”; ¸ÀÆAiÀÄð£À «±ÀéªÁå¦ QgÀtUÀ¼ÀÄ J®ªÀ£ÀÆß PÁt§®ªÀÅ. DzÀgÉ PÀ«AiÀÄ HºÁvÀäPÀ zÀȶAiÀiÁzÀgÉÆÃ gÀ«AiÀÄÄ PÁt¯ÁUÀzÀ£ÀÄß PÀÆqÁ PÀAqÀÄ ಪ್ರPÁ±ÀPÉÌ vÀgÀ§ಲ್ಲುzÀÄ. F zÀȶ¬ÄAzÀ F ¥ÀwPÉUÉ “PÀ«QgÀt” vÀÄA§ ¸ÁxÀðPÀªÁzÀ ºÉ¸ÀgÀÄ.
     PÀ« ªÉA. £ÁUÀgÁeï ªÀÄvÀÄÛ PÀ« ªÉA.¸ÀÄgÉñïgÀªÀgÀ F PÀ£ÀßqÀ ¸Á»vÀå ¸ÉÃªÉ ¤gÀAvÀgÀªÁV ªÀÄÄ£ÀßqÉAiÀÄÄvÁÛ AiÀıÀ¹éAiÀiÁUÀ°.
       -ºÀjºÀgÀ¥ÀÄgÀ ©. ¸ÀħæºÀätåA, ¸ÀA¥ÁzÀPÀgÀÄ,
¸ÀAiÀÄA ಪ್ರPÁ±À, DzÁåwäPÀ-zÁ«ÄðPÀ ªÀiÁ¸À¥ÀwæPÉ.

***

ಅಭಿನಂದನೆ
     GvÀÛªÀÄ Gದ್ದೇñÀPÉÌ §¼À¸À®Ä ¸ÀÆa¹ ²æÃ J¸ï.PÉ. gÁªÀÄgÁAiÀÄgÀ ªÀÄUÀ ²æÃ C±ÀévÀÜ¥Àæ¸Ázï, ¨ÉAUÀ¼ÀÆgÀÄ EªÀgÀÄ gÀÆ. 10000/- ªÀÄvÀÄÛ ²æÃªÀÄw ¸Àħâ®PÀëöäªÀÄä ¸ÀħâgÁAiÀÄgÀÄ, ¨ÉAUÀ¼ÀÆgÀÄ EªÀgÀÄ gÀÆ. 5000/- ¤ÃrzÀÄÝ SÁvÉUÉ dªÀiÁ ªÀiÁqÀ¯ÁVzÉ. F ªÉƧ®UÀ£ÀÄß AiÉÆÃUÀå GzÉÝñÀPÉÌ zÁ¤UÀ½UÉ w½¹ «¤AiÉÆÃV¸À¯ÁUÀĪÀÅzÀÄ. EªÀgÀÄUÀ¼À ¸ÀªÀiÁdªÀÄÄT PÀ¼ÀPÀ½UÉ Cಭಿ£ÀAzÀ£ÉUÀ¼ÀÄ. -¸ÀA.

**********************************  
-ಪುಟ10-   
**********************************                                     

ಕೆಳದಿ ಕವಿಮನೆತನದ ಸಮಕಾಲೀನರು-೨ 
ಸಾಗರದ ಕವಿ ಕೃಷ್ಣಮೂರ್ತಿ - ಅನಸೂಯಮ್ಮ

----------------------------------------------------------
     ಶ್ರೀ ಸಾ.ಕ. ಕೃಷ್ಣಮೂರ್ತಿಯವರು ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಹಿರಿಯರು. ಸಾತ್ವಿಕ ಜೀವನ ನಡೆಸುತ್ತಿರುವ ಈ ಹಿರಿಯರು ಕವಿ ಕುಟುಂಬಗಳ ಒಳ್ಳೆಯ ಕಾರ್ಯಗಳಿಗೆ ಪ್ರೇರಕ ಮತ್ತು ಮಾರ್ಗದರ್ಶಕರಾಗಿದ್ದಾರೆ.  ೧೧-೦೩-೦೯ರಂದು ೮೨ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿರುವ  ಇವರ ಪರಿಚಯ ಲೇಖನ ಬರೆದಿರುವರು ವಿದ್ವಾನ್ ಡಾ. ಕೆ. ಕೃಷ್ಣಜೋಯಿಸ್, ಎಂ.ಎ., ಬಿ.ಎಡ್.ರವರು ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಇವರು ಉತ್ತಮ ಬರಹಗಾರರು, ವಾಗ್ಮಿಗಳು. ಇವರ ತಾಯಿಯ ತಮ್ಮನವರೇ ಶ್ರೀ ಕೃಷ್ಣಮೂರ್ತಿಯವರು. 
ಶ್ರೀ ಕೃಷ್ಣಮೂರ್ತಿಯವರ ವಿಳಾಸ: ಶಶಿಕಿರಣ, ನಂ. ೧೦೦೧, ೧೫ನೆಯ ಅಡ್ಡರಸ್ತೆ, ಬನಶಂಕರಿ- ೨ನೆಯ ಹಂತ, ಬೆಂಗಳೂರು -೫೬೦೦೭೧. ದೂ. ೦೮೦- ೨೬೭೧೦೨೦೫
ಲೇಖಕರ ವಿಳಾಸ: ಡಾ. ಕೆ.ಕೃಷ್ಣಾಜೋಯಿಸ್,   ನಂ. ೧೨೨೦, ಶ್ರೀವತ್ಸ, ೧೨ನೆಯ ಅಡ್ಡರಸ್ತೆ, ಗಿರಿನಗರ- ೨ನೆಯ ಹಂತ, ಬೆಂಗಳೂರು- ೫೬೦೦೮೫. (ದೂ. ೦೮೦-೨೬೪೨೧೦೭೪). -ಸಂ.

------------------------------------------------------------
     ಕೆಳದಿ ಸಂಸ್ಥಾನದಲ್ಲಿ ಪ್ರಸಿದ್ಧವಾದವುಗಳು ಜೋಯಿಸರ ಮತ್ತು ಕವಿ ಮನೆತನಗಳು. ಜೋಯಿಸರ ಮನೆತನ ಕೆಳದಿನಾಯಕರ ರಾಜ್ಯ ಕಟ್ಟಲು ಸಹಾಯಕವಾಗಿದ್ದರೆ ಕವಿ ಮನೆತನ ಕಲೆ, ಸಾಹಿತ್ಯ, ಸಂಗೀತ, ಕವಿತ್ವರಚನೆ ಮೊದಲಾದ ಕೆಳದಿ ಸಂಸ್ಥಾನದ ಸಂಸ್ಕೃತಿಯನ್ನು ಬೆಳಸುವುದಾಗಿದೆ. ಇದಕ ಕೆಳದಿ ನೃಪವಿಜಯ ವೆಂಬ ಗ್ರಂಥವನ್ನು ರಚಿಸಿದ ಲಿಂಗಣ್ಣ ಕವಿಯೇ ಮೂಲ. ಈ ಮನೆತನದಲ್ಲಿ ಕವಿ ರಾಮಣ್ಣ, ವೆಂಕಣ್ಣ ಹಾಗೂ ಲಿಂಗಣ್ಣ ಇವರುಗಳು ಪ್ರಸಿದ್ಧರಾದವರು. ಯದ್ಯಪಿ ಇವರುಗಳು ಸಂಸ್ಥಾನದ ಪ್ರಸಿದ್ಧ ಸ್ಥಳವಾದ ಸಾಗರದವರಾಗಿದ್ದರೂ (ಕೆಳದಿ ನೃಪವಿಜಯದಲ್ಲಿ ಸಾಗರವು ಸದಾಶಿವಸಾಗರವೆಂದು ಉಲ್ಲೇಖಿಸಲಾಗಿದೆ) ಕಾಲಕ್ರಮೇಣ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯಿಂದಾಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಸಿದರು. ಶ್ರೀ ರಾಮಣ್ಣನವರು ಹಾಗೂ ಮಕ್ಕಳು ಕೆಳದಿಯಲ್ಲಿಯೂ, ಶ್ರೀ ವೆಂಕಣ್ಣಯ್ಯನವರ ಮಕ್ಕಳು ಶಿವಮೊಗ್ಗ, ಕೊಪ್ಪಗಳಲ್ಲಿಯೂ, ಶ್ರೀ ಲಿಂಗಣ್ಣನವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ್ದರಿಂದಲೂ, ಕಾಲಕ್ರಮೇಣ ಸರ್ಕಾರಿ ಕೆಲಸದಲ್ಲಿದ್ದುದರಿಂದ ಅವರ ಮಕ್ಕಳೂ ಸಹ ಬೆಂಗಳೂರಿನಲ್ಲಿಯೇ ನೆಲೆಸಿದರು. ಶ್ರೀ ಲಿಂಗಣ್ಣಯ್ಯವರು ಚಿತ್ರರಾಮಾಯಣ, ಚಿತ್ರಭಾಗವತ, ಭಗವದ್ಗೀತೆ ಲಲಿತಾತ್ರಿಶತಿ, ಮಾರುತೀಸ್ತುತಿ ಇವುಗಳನ್ನು ಚಿತ್ರಪಟದಲ್ಲಿ ದೇವನಾಗರೀ ಲಿಪಿಯಲ್ಲಿ ಕಲಾತ್ಮಕವಾಗಿ ರಚಿಸಿದ್ದಾರೆ. ಈಗಲೂ ಇವುಗಳನ್ನು ನೋಡಬಹುದು. ಅಲ್ಲದೆ ಇನ್ನೂ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ವೀಣೆ ಹಾಗೂ ಸಂಗೀತದಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
     ಶ್ರೀ ಲಿಂಗಣ್ಣಯ್ಯನವರ ಸಂಸಾರ ದೊಡ್ಡದು. ಅವರಿಗೆ ಶ್ರೀಯತರಾದ ಎಸ್.ಕೆ. ನಾರಾಯಣರಾವ್, ಎಸ್.ಕೆ. ಕೃಷ್ಣಮೂರ್ತಿ, ಎಸ್.ಕೆ. ರಾಮರಾವ್ ಎಂಬ ಮೂವರು ಗಂಡು ಮಕ್ಕಳು ಹಾಗೂ ಶ್ರೀಮತಿಯರಾದ ಮುತ್ತಮ್ಮ, ಮೂಕಮ್ಮ, ಜಾನಕಮ್ಮ, ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ನಾಗರತ್ನಮ್ಮ, ಪದ್ಮಾವತಮ್ಮ ಮತ್ತು ಗಿರಿಜಮ್ಮ ಎಂಬ ಎಂಟು ಜನ ಹೆಣ್ಣುಮಕ್ಕಳೂ ಇದ್ದರು. ಲಿಂಗಣ್ಣಯ್ಯನವರ ಅಕ್ಕ ಮತ್ತು ಮಗಳು ಕೆಳದಿ ಜೋಯಿಸರ ಸಂಬಂಧ ಮಾಡಿದ್ದು, ಕವಿ ಹಾಗೂ ಜೋಯಿಸರ ಸಂಬಂಧ ಹಿಂದಿನಿಂದಲೂ ಮುಂದುವರೆಯುತ್ತಿದೆ. ಗಂಡುಮಕ್ಕಳಲ್ಲಿ ಮೊದಲಿನ ಇಬ್ಬರೂ ತಂದೆಯಂತೆ ವೀಣಾಭ್ಯಾಸಮಾಡಿ ಸಂಗೀತದಲ್ಲಿ ಪ್ರೌಢಿಮೆ ಪಡೆದಿದ್ದಾರೆ. ಮೂರನೆಯವರು ವೇದಾಂತಿಗಳು.
     ಇವರ ಎರಡನೇಮಗನೇ ಸಾಗರದ ಕವಿ ಕೃಷ್ಣಮೂರ್ತಿ. ಇವರು  ದಿನಾಂಕಃ ೧೧-೩-೧೯೨೮ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ್ದು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಇವರ ತಂದೆಯಿಂದ ರಚಿಸಲ್ಪಟ್ಟ ಭೂಪಟಗಳು ಹಿಂದಿನ ಮೈಸೂರು ರಾಜ್ಯದ ಎಲ ಶಾಲೆಗೂ ಸರ್ಕಾರದ ವತಿಯಿಂದ ವಿತರಿಸಲ್ಪಡುತ್ತಿದ್ದು ಆ ವೃತ್ತಿಯಲ್ಲಿಯೇ ಮಗನು ಮುಂದುವರೆಯಬೇಕೆಂಬ ಆಸೆ ಅವರ ತಂದೆಯದಾಗಿತ್ತು. ಅಲ್ಲದೆ ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದರು. ಮನೆಯ ದೊಡ್ಡ ಸಂಸಾರ, ತಂದೆಯ ಆಸೆ ಇವುಗಳಿಂದಾಗಿ ಕೃಷ್ಣಮೂರ್ತಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ತಂದೆ ಸುಮಾರು ೬೩ ರ ವಯಸ್ಸಿನಲ್ಲಿ ಕಾಲವಾದರು.  ಮನೆಯ ಜವಾಬರಿಯನ್ನು ಸ್ವಲ್ಪ ಮಟ್ಟಿಗಾದರೂ ನಿರ್ವಹಿಸಬೇಕೆಂದು ಬಿನ್ನಿಮಿಲ್ಲಿನಲ್ಲಿ ಕೆಲಸಕ್ಕೆ ಸೇರಿ, ಬೆರಳಚ್ಚುಗಾರರು, ಶೀಘ್ರಲಿಪಿಕಾರರು, ಸೆಕ್ರೆಟರಿ, ಮ್ಯಾನೇಜ್‌ಮೆಂಟ್ ಸ್ಟ್ಯಾಫ್, ಸ್ಟೋರ್ಸ್ ಆಫೀಸರ್, ಹೀಗೆ ನಾನಾ ಹುದ್ದೆಗಳಲ್ಲಿ ಕೆಲಸನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ನಿವೃತ್ತರಾಗಿದ್ದರೂ ಯುವಕರಂತೆ ಬನಶಂಕರಿಯ ದೇವಗಿರಿ ಶ್ರೀವೆಂಕಟೇಶ್ವರ ದೇವಾಲಯದ ಲೈಫ್‌ಟ್ರಸ್ಟಿಯಾಗಿದ್ದಾರೆ. ಅಲ್ಲದೆ ಇದೇ ದೇವಸ್ಥಾನದಲ್ಲಿ ಖಜಾಂಚಿಯಾಗಿಯೂ ಕೆಲಸನಿರ್ವಹಿಸಿದ್ದಾರೆ. ಚಿನ್ಮಯ ಮಿಷನ್ನಿನ ಬೋಡ್ ಸದಸ್ಯರಾಗಿಯೂ, ಸಂಗೀತದಲ್ಲಿ ಆಸಕ್ತಿ ಇರುವುದರಿಂದಲೂ, ವೀಣೆಯ ಅಭಸವಾಗಿರುವುದರಿಂದಲೂ ದೇವಗಿರಿ ಶ್ರೀವೆಂಕಟೇಶ್ವರ ದೇವಸ್ಥಾನದ ಸಂಗೀತ ಕಮಿಟಿಯಲ್ಲಿದ್ದು ಸುತ್ತಮುತ್ತಲ ಜನರಿಗೆ ಇಂಪಾದ ಸಂಗೀತವನ್ನು ದೇವಸ್ಥಾನದ ಮೂಲಕ ಒದಗಿಸುತ್ತಿರುತ್ತಾರೆ.
     ಅಲ್ಲದೆ ಇವರಿಗೆ ಆಧ್ಯಾತ್ಮಿಕದಲ್ಲಿಯೂ  ವಿಶೇಷವಾದ ಆಸಕ್ತಿ ಇರುವುದರಿಂದ ಸಂಗೀತದ ಜೊತೆಗೆ ದೇವಸ್ಥಾನದ ಮೂಲಕ ವೇದಾಂತದ ಉಪನ್ಯಾಸಗಳನ್ನೂ ಏರ್ಪಾಟು ಮಾಡುವ ಜವಾಬ್ದಾರಿ ಹೆತ್ತಿದ್ದಾರೆ. ಇವರ ಎರಡು ಕಣ್ಣುಗಳೋ ಎಂಬಂತೆ ಇಬ್ಬರು ಗಂಡುಮಕ್ಕಳೂ (ಚಿ|| ಪ್ರಕಾಶ್ ಮತ್ತು ಚಿ|| ಗೋಪಿನಾಥ್) ಹಾಗೂ ಮನೆಯವರೆಲ್ಲರೂ ಅವರ ಕಾರ್ಯದಲ್ಲಿ ಉತ್ಸಾಹ ತುಂಬುತ್ತಿರುತ್ತಾರೆ.
     ಇವರ ಧರ್ಮಪತ್ನಿ ಶ್ರೀಮತಿ ಅನಸೂಯಾರವರು ಹೆಸರಿಗೆ ಅನ್ವರ್ಥರಾಗಿದ್ದು ೧೯೩೩ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಶ್ರೀ ವೆಂಕಟಾಚಲಯ್ಯ ಹಾಗೂ ಶ್ರೀಮತಿ ಮೀನಾಕ್ಷಮ್ಮನವರ ಚತುರ್ಥಪುತ್ರಿಯಾಗಿ ಜನ್ಮ ತಾಳಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬನಶಂಕರಿ ಎರಡನೇಹಂತದ ಮಹಿಳಾಮಂಡಳಿಯ ಸಂಸ್ಥಾಪಕರಲ್ಲೊಬ್ಬರಾಗಿ ಮಹಿಳೆಯರ ಉನ್ನತಿಗಾಗಿ ದುಡಿದರು. ಮಂಡಳಿಗೆ ಸಾರ್ವಜನಿಕರ ಸಹಕಾರದಿಂದ ಒಂದು ನಿವೇಶನ ದೊರಕಲು ಸಾಹಸ ಮಾಡಿ ಯಶಸ್ವಿಯಾದರು. ಬಹಳಕಾಲ ಮಂಡಳಿಯ ಖಜಾಂಚಿಯಾಗಿ ಕಟ್ಟಡ ಕಟ್ಟಿಸಿ ಹೆಲಿಗೆ, ಸಂಗೀತ ಮೊದಲಾದವುಗಳನ್ನು ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಮಂಡಳಿಯ ಮೂಲಕ ಸಹಾಯ ಮಾಡಿದರು, ಹೀಗೆ ಸಮಾಜ ಸೇವಾಕರ್ತೆಯಾಗಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜೀವನ ಪರ್ಯಂತ ದುಡಿದು  ೨೮-೨-೨೦೦೬ ರಂದು ಕೀರ್ತಿಶೇಷರಾದರು.
     ಈ ದಂಪತಿಗಳು ತಮ್ಮ ಹಿರಿಯರ ಆಧ್ಯಾತ್ಮಿಕ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದರು. ಶ್ರೀ ಕೃಷ್ಣಮೂರ್ತಿಯವರು ತಂದೆಯಂತೆಯೇ ಇಳಿವಯಸ್ಸಿನಲ್ಲಿ ಅವರು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಆ ಪ್ರಾರ್ಥನೆಯ ಸಾರಾಂಶವನ್ನು ಹೀಗೆ ಸಂಗ್ರಹಿಸಲಾಗಿದೆ:
     "ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆಮಾಡು, ಪ್ರತಿ ವಿಷಯದಲ್ಲೂ ತಲೆಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಎಲ್ಲರ ವಿಚಾರಗಳನ್ನು ತಿಳಿದುಕೊಳ್ಳುವುದೂ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಯೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು, ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳುತ್ತೇನೆ. ಅನೇಕವೇಳೆ ನನ್ನ ಅಭಿಪ್ರಾಯಗಳೂ ತಪ್ಪಾಗಬಹುದೆಂಬ ಅರಿವೂ ನನಗಾಗಲಿ, ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ, ಆದರೆ ಇತರರನ್ನು ವತ್ತಾಯ ಮಾಡುವುದಿಲ್ಲ, ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ಇತರರಿಗಿಂತ  ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟುದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ".   
      ಈ ಮೇಲಿನಂತೆ ನಡೆಯುತ್ತಿದ್ದ ತಂದೆಯಂತೆಯೇ ಇವರೂ ನಡೆದುಕೊಳ್ಳುತ್ತಿದ್ದು, ಈ ಮಾತುಗಳು ಎಲ್ಲರಿಗೂ ಮಾರ್ಗದರ್ಶಕವಾಗಲಿ. ಇದರಿಂದ ಎಲ್ಲರಿಗೂ ಸಂತೋಷವಾದರೆ ಅದೇ ಒಂದು ಪೂಜೆ.    ಸಂತೋಷಂ ಜನಯೇತ್ ಪ್ರಾಜ್ಞಃ ತದೇವೇಶ್ವರ ಪೂಜನಂ ಎಂದು ಈಗಲೂ ಹೇಳುತ್ತಿರುತ್ತಾರೆ. ಇವರ ಸ್ಪೂರ್ತಿದಾತರೆಂದರೆ ತೀರ್ಥರೂಪುರವರು ಮತ್ತು ಸ್ವಾಮಿ ಚಿನ್ಮಯಾನಂದರು. ಇವರಿಗೆ ಒಬ್ಬ ಮೊಮ್ಮಗ ಮತ್ತು ಒಬ್ಬ ಮೊಮ್ಮಗಳು ಇದ್ದು ಅವರೊಡನೆ ಯಾವಾಗಲೂ ಸಂತೋಷವಾಗಿ ಕಾಲಕಳೆಯುತ್ತಾ ಪದ್ಮಪತ್ರ  ಮಿವಾಂಭಸಾ ಎಂಬಂತೆ ನಿರ್ಲಿಪ್ತತೆಯ ಜೀವನವನ್ನು ನಡೆಸುತ್ತಿದ್ದಾರೆ. ಇವರ ಮಕ್ಕಳೂ ಹಾಗೂ ಸೊಸೆಯರೂ ಕೂಡ ಇವರ ಮನಸ್ಸಿಗೆ ಯಾವ ವಿಧವಾದ ನೋವೂ ಉಂಟಾಗದಂತೆ ನಡೆದುಕೊಳ್ಳುತ್ತಿರುವುದು ಈಗಿನ ಕಾಲಕ್ಕೆ ವಿಶೇಷವೇ ಸರಿ.
     ಇವರ ದಾಂಪತ್ಯ ಜೀವನವು ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸುತ್ತಾ ಅವರ ಚರಣಕಮಲಗಳಿಗೆ ಈ ಚಿಕ್ಕ ಲೇಖನವನ್ನು ಅರ್ಪಿಸುತ್ತೇನೆ. 
             
         -  ಡಾ|| ಕೆಳದಿ ಕೃಷ್ಣಜೋಯ್ಸ್
 * * * * *

ಸಂಪ್ರದಾಯ
ಹಸೆಮಣೆ
     ವ್ರತ ಮಾಡುವಾಗ, ಎಣ್ಣೆಶಾಸ್ತ್ರ ಮಾಡುವಾಗ, ಮಡಿಲು ತುಂಬುವಾಗ, ಮದುವೆ, ಮುಂಜಿ, ಮಕ್ಕಳ ಹುಟ್ಟಿದಹಬ್ಬ ಇತ್ಯಾದಿ ಯಾವುದೇ ಮಂಗಳಕಾರ್ಯ ಮಾಡುವಾಗ ಹಸೆಮಣೆ ಬೇಕೇ ಬೇಕು. ಸೂಕ್ತ ಜಾಗದಲ್ಲಿ ರಂಗೋಲೆ ಹಸೆಯಿಟ್ಟು ಅದರ ಮೇಲೆ ಮಣೆಯಿಡಬೇಕು. ಮಣೆಯ ಮೇಲೆ ಶುಭ್ರವಾದ ವಸ್ತ್ರ -ಶಾಲು, ಶಲ್ಯ, ಇತ್ಯಾದಿ- ಹಾಸಬೇಕು. ಹಸೆಮಣೆಯಿಡುವ ಸ್ಥಳದಲ್ಲಿ ಸಾಮಾನ್ಯವಾಗಿ ಹಾಕುವ ರಂಗೋಲಿ ಈ ರೀತಿ ಇರುತ್ತದೆ.
-ಸಂಗ್ರಹ ಮತ್ತು ಪ್ರಸ್ತುತಿ: ಭಾರತಿ ನಾಗರಾಜ್, ಹಾಸನ.

**********************
-ಪುಟಗಳು 11,12-
**********************
ಕೆಳದಿ ವಸ್ತುಸಂಗ್ರಹಾಲಯ
-ಡಾ.ಕೆ.ವೆಂಕಟೇಶ ಜೋಯಿಸ್.

     ಕ್ರಿ.ಶ ೧೪೯೯ ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸ ಕೊನೆಯ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತಗಳಲ್ಲಿ ಈ ಮನೆತನವು ಪ್ರಮುಖವಾದುದು. ಕ್ರಿ. ಶ. ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಇವರು ಸ್ವತಂತ್ರರಾದರೂ ವಿಜಯನಗರದವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರಿವರು. ತಮ್ಮ ೨೬೩ ವರ್ಷ ಆಡಳಿತದ ಅವಧಿಯಲ್ಲಿ ರಾಜಕೀಯ. ಆಡಳಿತ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ವಿಜಯನಗರದ ಸಂಸ್ಕೃತಿಗೆ ಕುಂದು ಬಾರದಂತೆ ನಡೆದು ಬಂದರು.
ಕೆಳದಿ ಅರಸರ ಮೊದಲ ರಾಜಧಾನಿ ಕೆಳದಿ. ಎರಡನೇ ರಾಜಧಾನಿ ಇಕ್ಕೇರಿ. ಮೂರು ಮತ್ತು ನಾಲ್ಕನೇ ರಾಜಧಾನಿಗಳು ಕ್ರಮವಾಗಿ ವೇಣುಪುರ, ಭುವನಗಿರಿ ದುರ್ಗ. ಸುಮಾರು ಕ್ರಿ. ಶ. ೧೪೯೮ ರಿಂದ ೧೭೬೩ ರವರೆಗೆ ೧೬ ರಾಜರು, ೨ ರಾಣಿಯರು ಈ ರಾಜ್ಯವನ್ನು ಆಳಿದ್ದಾರೆ. ವಿಜಯನಗರ ಪತನದ ನಂತರದಲ್ಲಿಯೂ ವಿಜಯನಗರವನ್ನು ಮತ್ತೊಮ್ಮೆ ಕಟ್ಟಿ ನಿಲ್ಲಿಸುವ ಕೆಲಸವನ್ನು ಇವರು ಮಾಡಿದರು. ಪೊರ್ಚುಗೀಸರು, ಇಂಗ್ಲಿಷರ ಜೊತೆಗೆ ಇವರು ಇಟ್ಟುಕೊಂಡ ಸಂಪರ್ಕ ಗಮನಾರ್ಹವಾದುದು. ವಿದೇಶಿ ಪ್ರವಾಸಿಗರು ಈ ರಾಜ್ಯಕ್ಕೆ ಭೇಟಿ ಇತ್ತಿದ್ದಾರೆ. ಹಿರಿಯ ವೆಂಕಟಪ್ಪನಾಯಕ, ಕೆಳದಿ ಶಿವಪ್ಪನಾಯಕ, ಕೆಳದಿ ರಾಣಿ ಚೆನ್ನಮ್ಮಾಜಿ ಮೊದಲಾದ ನಾಯಕರನ್ನು ಕೊಟ್ಟ ರಾಜ್ಯ ಕೆಳದಿ ರಾಜ್ಯ. ಕೆಳದಿ ಮನೆತನದ ವೈಭವದ ಪ್ರತೀಕವಾಗಿ ಇಂದು ಕೆಳದಿ, ಇಕ್ಕೇರಿ, ವೇಣುಪುರ, ಭುವನಗಿರಿದುರ್ಗ ಮುಂತಾದ ಸ್ಥಳಗಳು ಉಳಿದಿವೆ. ಅಲ್ಲಲ್ಲಿ ಗುಡಿ, ಆಲಯ, ಕೊಳ, ಕೋಟೆ, ಕೆರೆಗಳು ಪಾಳು ಬಿದ್ದಿವೆ.

     ಕೆಳದಿ ರಾಜ್ಯದ ಉದಯದಿಂದ ಅದರ ಅವಸಾನದವರೆಗಿನ ಬಗೆಗೆ ನಮಗೆ ಕೆಳದಿ ನೃಪ ವಿಜಯ,  ಶಿವತತ್ವ ರತ್ನಾಕರ ಮೊದಲಾದ ಪ್ರಾಚೀನ ಗ್ರಂಥಗಳು ತಿಳಿಸುತ್ತವೆ. ಶಿಲಾ ಶಾಸನಗಳು, ಕಾಗದ ಪತ್ರಗಳು ಕೆಳದಿ ಇತಿಹಾಸ ಮತ್ತು ಸಮಕಾಲೀನ ಇತಿಹಾಸ ರಚನೆಗೆ ಪ್ರಮುಖ ಆಕರವಾಗಿದೆ. ಈ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸುವ. ಸಂಶೋಧನೆಗೆ ಒಳಪಡಿಸುವ ಕೆಳದಿ ಮತ್ತು ಸಮಕಾಲೀನ ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸಲುವಾಗಿ ಕ್ರಿ. ಶ. ೧೯೬೦ ರಲ್ಲಿ ಕೆಳದಿ ವಸ್ತುಸಂಗ್ರಹಾಲಯ ತಲೆ ಎತ್ತಿತು. ಈ ವಸ್ತುಸಂಗ್ರಹಾಲಯ ಸ್ಥಾಪನೆಯಲ್ಲಿ ಏಕ ವ್ಯಕ್ತಿಯಾಗಿ ತಂದೆ ಶ್ರೀ ಕೆಳದಿ ಗುಂಡಾಜೋಯಿಸ್‌ರವರ ಶ್ರಮ ಉಲ್ಲೇಖಾರ್ಹ. ನನ್ನಜ್ಜಿ ಮೂಕಾಂಬಿಕಮ್ಮನವರು     ಈ ವಸ್ತುಸಂಗ್ರಹಾಲಯದ ಸ್ಥಾಪನೆ ಸಂದರ್ಭದಲ್ಲಿ ನನ್ನ ಗುಂಡ ಒಂದು ಆನೆಯನ್ನು ಕಟ್ಟಲು ಹೊರಟಿದ್ದಾನೆ. ಅದನ್ನು ಕಟ್ಟುವುದು ಸುಲಭ. ಆದರೆ ಅದನ್ನು ಸಾಕುವುದು ಕಷ್ಟ" ಎಂದು ಹೇಳುತ್ತಿದ್ದ ಮಾತು ಇಂದೂ ನನ್ನ ಕಿವಿಯಲ್ಲಿ ಆಗಾಗ್ಗೆ ಗುಯ್‌ಗುಡುತ್ತಿರುತ್ತದೆ. ಕ್ರಿ. ಶ. ೧೯೮೭-೮೯ ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಶ್ರೀ ಜೋಯಿಸರು ಭೂಮಿ ದಾನ ಮಾಡಿದ್ದಾರೆ. ೨೦೦೦ದ ಸುಮಾರಿನಲ್ಲಿ ಇನ್ನೊಂದು ನಿವೇಶನವನ್ನು ಕೊಂಡುಕೊಂಡಿದ್ದು ಅಲ್ಲಿ ಪುನಃ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.


     ವಸ್ತುಸಂಗ್ರಹಾಲಯವೊಂದು ಗ್ರಾಮಾಂತರ ಕ್ಷೇತ್ರದಲ್ಲಿ ಅಪೂರ್ವವೆನಿಸಿದುದು ಕೆಳದಿಯಲ್ಲಿದೆ. ಹಿಂದುಳಿದ ಜನತೆಗೆ ಅಧ್ಯಯನಾಸಕ್ತರಿಗೆ ಇದು ವರದಾನವಾಗಿದೆ. ಇದು ೧೯೬೨ ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಈಗ ಬೃಹದಾಕಾರವಾಗಿ ಬೆಳೆದಿದೆ. ತಂದೆಯವರಾದ ಶ್ರೀ ಗುಂಡಾಜೋಯಿಸರು ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು, ಹಸ್ತಪ್ರತಿ, ಶಿಲ್ಪಗಳನ್ನು ಕೆಳದಿ ವಸ್ತುಸಂಗ್ರಹಾಲಯಕ್ಕೆ ಪ್ರತಿಫಲ ಅಪೇಕ್ಷೆ ಪಡದೆ ದೇಣಿಗೆಯಾಗಿ ಕೊಟ್ಟಿದ್ದಾರೆ. ಇಂದು ಕುವೆಂಪು ವಿಶ್ವವಿದ್ಯಾನಿಲಯ ಈ ವಸ್ತುಸಂಗ್ರಹಾಲಯವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಇಲ್ಲಿ ಆ ಕಾಲದ ಕತ್ತಿ, ಪಂಚವಾಳ, ಬಾಚಣಿಗೆ, ಕಂಚಿನ ವಿಗ್ರಹಗಳು ಲೇಖನಿಗಳು, ಬೀಗಗಳು, ಫಿರಂಗಿ ಗುಂಡುಗಳು, ವ್ಯಾಯಾಮ ಸಾಧನಗಳು, ಅವಶೇಷಗಳು, ಮಿರ್ಜಾ ಇಸ್ಮಾಯಿಲ್, ಜಯಚಾಮರಾಜ ಒಡೆಯರ್, ವಿಶ್ವೇಶ್ವರಾಯ ಮೊದಲಾದವರ ಸ್ವ ಹಸ್ತಾಕ್ಷರದ ಕಾಗದ ಪತ್ರಗಳು, ನಾಣ್ಯಗಳು, ತಾಡೆಯೋಲೆ ಹಸ್ತಪ್ರತಿಗಳು, ತಾಮ್ರಶಾಸನ, ಮಹಾಸತಿಕಲ್ಲು, ವೀರಗಲ್ಲು, ಮೊದಲಾದವುಗಳಿವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ.

     ಕೆಳದಿ ಲಿಂಗಣ್ಣ ಕವಿಯ ವಂಶಜರಾದ ಎಸ್. ಕೆ. ಲಿಂಗಣ್ಣಯ್ಯನವರ ತೈಲ ವರ್ಣಚಿತ್ರಗಳು, ರಾಮಾಯಣ, ಭಾಗವತ ಪುಸ್ತಕಗಳು, ಶ್ರೀರಾಮ ಪಟ್ಟಾಭಿಷೇಕ, ಅರ್ಚರಾಧಿಮಾರ್ಗ, ಭಗವದ್ಗೀತೆ, ವೀರಭದ್ರ ಅವತಾರ, ಲಲಿತಾ ತ್ರಿಪುರ ಸುಂದರಿ, ವಾಯುಸ್ತುತಿ ಮೊದಲಾದವು ಗಮನಿಸುವಂತಹವು. ಭಗವದ್ಗೀತೆಯ  ೧೮ ಅಧ್ಯಾಯಗಳನ್ನು ಪಟದಲ್ಲಿ ಬರೆಯಲಾಗಿದೆ. ಲಲಿತಾ ತ್ರಿಪುರ ಸುಂದರಿಯಲ್ಲಿ ಶ್ರೀ ಲಲಿತಾ ಸಹಸ್ರನಾಮವಿದೆ. ವಾಯುಸ್ತುತಿ ಪಟದಲ್ಲಿ ವಾಯುಸ್ತುತಿ ಇದೆ. ಇದು ಕನ್ನಡ ಮತ್ತು ಸಂಸ್ಕೃತದಲ್ಲಿದೆ. ವಿಕ್ಟೋರಿಯಾ ರಾಣಿ, ಇಂಗ್ಲಿಷರು ಭಾರತ  ಆಳುತ್ತಿದ್ದಾಗ ಎಷ್ಟು ವಸಾಹತು ಒಳಗೊಂಡಿತ್ತು ಎಂಬುದಕ್ಕೆ ಅನುಗುಣವಾಗಿ ಎಡಗೈ ಆಸ್ಟ್ರೇಲಿಯಾ, ಬಲಗೈ ಕೆನಡಾ, ತಲೆ ಸ್ಕಾಟ್ಲಾಂಡ್, ಐರ್ಲಾಂಡ್, ಎದೆ ಭಾಗ ಇಂಡಿಯಾ, ತೊಡೆಯ ಭಾಗ ಅಮೇರಿಕಾದ ಹದಿನಾಲ್ಕು ವಸಾಹತುಗಳು ಅಟ್ಲಾಂಟಿಕ್ ಸಾಗರದಲ್ಲಿ ಆಕೆ ನಿಂತಿರುವುದು ಮುಂತಾದವು ನೈಜತೆಯ ಜೊತೆಗೆ ಕಲ್ಪನೆ ಬೆರೆತ ಸುಂದರ ಕಲಾಕೃತಿಯಾಗಿದೆ. ಕೆಳದಿ ಕವಿಮನೆತನದ ವಂಶವೃಕ್ಷವನ್ನು ಸಹ ಈ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.  ಇಲ್ಲಿಯ ಸಂಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಂಡು ರಕ್ಷಣೆ ಮಾಡಲಾಗುತ್ತಿದೆ.
     ಈ ತರಹ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸಿ. ಪ್ರದರ್ಶಿಸಿ ಆ ಮೂಲಕ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಐತಿಹಾಸಿಕ ವಸ್ತುಗಳನ್ನು ಉಳಿಸುವತ್ತ ಗಮನ ಸೆಳೆಯುವ  ಪ್ರಯತ್ನವನ್ನು ಕೆಳದಿ ವಸ್ತು ಸಂಗ್ರಹಾಲಯ ಕಳೆದ ಹಲವು ವರುಷದಿಂದ ಮಾಡುತ್ತ ಬಂದಿದೆ. ಇದರ ಚಟುವಟಿಕೆಯನ್ನು ರಾಜ್ಯ, ಕೇಂದ್ರ ಸರಕಾರ, ರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಕೇಂದ್ರ, ನವದೆಹಲಿ ಮೊದಲಾದವುಗಳು ಗುರುತಿಸಿವೆ. ಶಿವತತ್ವ ರತ್ನಾಕರ - ಎ ಕಲ್ಚರಲ್ ಸ್ಟಡಿ ಮೊದಲಾಗಿ ಹಲವು ಉತ್ತಮ ಪ್ರಕಟಣೆಗಳನ್ನು ವಸ್ತುಸಂಗ್ರಹಾಲಯ ಹೊರತಂದಿದೆ. ಕೆಳದಿ ಮತ್ತು ಆ ಕಾಲದ ಪಾಳೆಯಪಟ್ಟು, ಸಂಸ್ಥಾನಗಳ ಚರಿತ್ರೆಯ ಬಗ್ಗೆ ಸಂಶೋಧನೆ ನಡೆಸಿದೆ.
     ಕೆಳದಿ ವಸ್ತುಸಂಗ್ರಹಾಲಯದಲ್ಲಿ ಹಸ್ತಪ್ರತಿ ಶಾಸ್ತ್ರ, ಲಿಪಿ ಶಾಸ್ತ್ರ, ಶಾಸನ ಶಾಸ್ತ್ರ ಮೊದಲಾದ ಬಗ್ಗೆ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭವಾಗುವುದರಲ್ಲಿದೆ. ಇಂದು ಹೊಸ ಕಟ್ಟಡವನ್ನು ಕುವೆಂಪು ವಿಶ್ವವಿದ್ಯಾನಿಲಯ ನಿರ್ಮಿಸುವುದರ ಜೊತೆಗೆ ಈ ವಸ್ತುಸಂಗ್ರಹಾಲಯವನ್ನು ಮಾದರಿ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುವುದಕ್ಕೆ ಶ್ರಮಿಸುತ್ತಿದೆ. ಆ ಮೂಲಕವಾಗಿ ಕೆಳದಿ ವಸ್ತುಸಂಗ್ರಹಾಲಯ ಕೆಳದಿ ಕವಿ ಮತ್ತು ಜೋಯಿಸ್ ಕುಟುಂಬಗಳ ಅವಿಸ್ಮರಣೀಯ ಸ್ಮಾರಕವಾಗಿ ನಿಲ್ಲುವುದರಲ್ಲಿ ಎರಡು ಮಾತಿಲ್ಲ.
* * * * *

ಗಾಢ ಪ್ರೇಮ 
 ಪ್ರೀತಿಗೂ ಹೊಂದಾಣಿಕೆಗೂ ಎಷ್ಟು ಗಾಢಪ್ರೇಮವೆಂದರೆ ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ಪ್ರೀತಿ ಇರುವಲ್ಲೆಲ್ಲಾ ಹೊಂದಾಣಿಕೆ ಇರುತ್ತದೆ. ಹೊಂದಾಣಿಕೆ ಇಲ್ಲದ ಕಡೆ ಪ್ರೀತಿ ಇರುವುದಿಲ್ಲ.
*********************

ಈ ಚಿತ್ರಕ್ಕೆ ಹೊಂದುವ ಕಿರುಕವನ ಬರೆದು ಕಳುಹಿಸಿ

ಆಯ್ದ೨ ಕವನಗಳನ್ನು ಪ್ರಕಟಿಸಲಾಗುವುದು.
 **********************
 -ಪುಟಗಳು 13,14-
***********************
ಶ್ರೀ ಮೇಲುಕೋಟೆಯ (ಶ್ರೀ ಯದುಗಿರಿ) ಯತಿರಾಜಮಠದ ಶ್ರೀ ಪೀಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯತಿರಾಜ ಸಂಪತ್ಕುಮಾರ ರಾಮಾನುಜ ಜೀಯರ್ ಮಹಾಸ್ವಾಮಿಗಳ ದಿನಾಂಕ ೨೭-೧೦-೧೯೯೯ರ  ಆಶೀರ್ವಾದ ಪತ್ರ
ಧರ್ಮೋ ರಕ್ಷತಿ ರಕ್ಷಿತಃ
     ನಮಗೆ ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು. ಆದರೂ ನಮ್ಮ ಗುರುಗಳು ನಮಗೆ ತಿಳಿಸಿದಷ್ಟನ್ನು ಇಲ್ಲಿ ತಿಳಿಸಿರುತ್ತೇವೆ.
     ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲ ಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
     ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯಾ ಋಷಿಯ, ಪಂಚಾಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.
     ಸೂತ್ರ ಎಂದರೆ- ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: ೧. ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. ೨. ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. ೩. ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
     ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯ ಸೂತ್ರದ ಪ್ರಕಾರ ಷೋಡಷ ಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.
*******************************
ಅರಿಕೆ
     ಈ ಲೇಖನವು ಸರ್ವೋದಯ ಕಾರ್ಯಕರ್ತರಾದ ಶ್ರೀ ಹೆಚ್. ಆರ್. ಸಂಪತ್‌ಕುಮಾರನ್‌ರವರು ಸುಮಾರು ೧೨ ವರ್ಷಗಳ ಕಾಲ ಸಂಶೋಧನೆ ಮಾಡಿ ರಚಿಸಿದ ಗೋತ್ರ, ಪ್ರವರ, ಸೂತ್ರ, ಶಾಖಾ ವಿಚಾರಸೂಚಿ ಎಂಬ ಪುಸ್ತಕಕ್ಕೆ ಶ್ರೀ ಶ್ರೀ ಶ್ರೀಗಳವರು ಬರೆದ ಮುನ್ನುಡಿಯ ಆಯ್ದ ಭಾಗ. ಇದನ್ನು ಪ್ರಕಟಿಸಲು ವಯೋವೃದ್ಧ ಮತ್ತು ಜ್ಞಾನವೃದ್ಧರಾದ ಲೇಖಕರನ್ನು ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಆಶೀರ್ವಾದಪೂರ್ವಕ ಅನುಮತಿ ಪಡೆಯಲಾಗಿದೆ. ಸಂಶೋಧನೆ, ತರ್ಕ, ಕುತೂಹಲಗಳಿಗೆ ಹೆಸರಾಗಿರುವ ಕವಿ ಕುಟುಂಬಗಳವರು ಈ ಪುಸ್ತಕವನ್ನು ಓದಿ ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬಹುದಲ್ಲದೆ ವಿಷಯಕ್ಕೆ ಸಂಬಂಧಿಸಿದ ಇಂತಹ ಇತರ ಗ್ರಂಥಗಳನ್ನು ಅಭ್ಯಸಿಸಿ ಹರಿತಸರ ಬಗ್ಗೆ ತಿಳಿಯುವ ಹೆಚ್ಚಿನ ಸಂಗತಿಗಳನ್ನು ತಿಳಿಸಿದಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತವಿದೆ. ಪೂರ್ವಾಗ್ರಹವಿಲ್ಲದ ಅಭ್ಯಾಸ, ಸಂಶೋಧನೆಗಳು ಸತ್ಯ ತಿಳಿಯಲು ಸಹಕಾರಿ. ಪುಸ್ತಕದ ಕೆಲವೇ ಪ್ರತಿಗಳು ಇದ್ದು ಜೆ.ಪಿ. ನಗರದ ರಾಗಿಗುಡ್ಡದ ಆಂಜನೇಯ ದೇವಸ್ಥಾನದ ಪುಸ್ತಕ ಮಳಿಗೆಯಲ್ಲಿ ಮತ್ತು ಲೇಖಕರಲ್ಲಿ ಲಭ್ಯವಿದೆ. ಪುಸ್ತಕದ ಬೆಲೆ ರೂ.೧೦೦/-.
ಲೇಖಕರ ವಿಳಾಸ: ಶ್ರೀ ಹೆಚ್. ಆರ್. ಸಂಪತ್‌ಕುಮಾರನ್, ಸರ್ವೋದಯ ಕಾರ್ಯಕರ್ತರು, ನಂ. ೧೪೧೦, ಸರ್ವೋದಯ ಸದನ, ಸೌತ್ ಎಂಡ್ ಎ ರಸ್ತೆ, ೯ನೆಯ ಬ್ಲಾಕ್, (ರಾಗಿಗುಡ್ಡದ ಬಳಿ), ಜಯನಗರ, ಬೆಂಗಳೂರು - ೫೬೦೦೬೯.
-ಸಂಪಾದಕ

*****************************************     . . . ತ್ರಯಾಋಷಯ ಅಥವಾ ಪಂಚಾಋಷಯ ಪ್ರವರಾನ್ವಿತ . .  ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶ ಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.     ಪ್ರವರ ಎನ್ನುವುದು ಸಾಧಾರಣವಾಗಿ ೪೫ಕ್ಕೆ ಕಾಣಬರುವುದಿಲ್ಲ. ಒಂದು ವೇಳೆ ಇದ್ದರೂ, ೬೦-೭೦ಕ್ಕೆ ಮೇಲೆ ಇರುವುದಿಲ್ಲ.
    ಗೋತ್ರವೆಂಬ ಋಷಿಯ ಹೆಸರು - ಅಸಂಖ್ಯಾತವು. ಲಕ್ಷ ಸಂಖ್ಯೆಗೆ ಮೇಲ್ಪಟ್ಟಿರುವುದು.

     ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರು ಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ ಸೂತ್ರ ಎನ್ನುವುದು.
     ಈ ಗೋತ್ರ ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. ಗೋತ್ರ ಪ್ರವರ ನಿರ್ಣಯ ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶನವಾಗಿ ಬರೆಯಬೇಕೆಂದು ವಿಜ್ಞಾಪಿಸುತ್ತೇವೆ.

     ಗೋತ್ರ ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. ೧.ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ, ೫.ಪುಲಹ, ೬. ಪೌಲಸ್ತ್ಯ, ೭. ವಸಿಷ್ಠ ಎಂಬುದಾಗಿ ಏಳು ಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹ ಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲ ಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದ ೧. ಭೃಗು, ೨. ಆಂಗೀರಸ, ೩. ಮರೀಚಿ, ೪. ಅತ್ರಿ ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.
     ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:
೧. ಜಮದಗ್ನಿ   - ಭೃಗು ವಂಶಸ್ಥರು (೧)
೨. ಭರದ್ವಾಜ   - ಆಂಗೀರಸ ವಂಶಸ್ಥರು (೨)
೩. ಗೌತಮ    - ಮೇಲಿನಂತೆ
೪. ಕಾಶ್ಯಪ     - ಮರೀಚಿ ವಂಶಸ್ಥರು (೩)
೫. ವಸಿಷ್ಠ     -  ಮೇಲಿನಂತೆ
೬. ಅಗಸ್ತ್ಯ     -  ಮೇಲಿನಂತೆ
೭. ಅತ್ರಿ      -  ಅತ್ರಿಯೇ ಮೂಲಪುರುಷರು ಅಥವಾ ಅವರ
              ವಂಶಸ್ಥರು (೪)
೮. ವಿಶ್ವಾಮಿತ್ರ  - ಅತ್ರಿ ಋಷಿಯ ವಂಶಸ್ಥರು

     ಈ ರೀತಿ ನಾಲ್ಕು ಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.
     ಮೇಲೆ ತಿಳಿಸಿದ ಎಂಟು ಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತು ಋಷಿ ವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯ ಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣ ಕುಲಕ್ಕೆ ಸೇರಿದವರಾದರು. ಎಂದರೆ ಭೃಗು ವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-
೧. ವೀತಹವ್ಯ   - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ  - ಮೇಲಿನಂತೆ
೩, ಶುನಕ     - ಮೇಲಿನಂತೆ
೪, ವೇನ      - ಮೇಲಿನಂತೆ
೫. ರಥೀತರ    - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ    - ಮೇಲಿನಂತೆ
೭. ವಿಷ್ಣವೃದ್ಧ    - ಮೇಲಿನಂತೆ
೮. ಹಾರಿತ     - ಮೇಲಿನಂತೆ
೯. ಕಣ್ವ       - ಮೇಲಿನಂತೆ
೧೦.ಸಂಕೃತಿ     - ಮೇಲಿನಂತೆ

     ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು.
     . . . . ಶ್ರೀಮಠದ ಆರಾಧ್ಯದೇವರು ಶ್ರೀ ಲಕ್ಷ್ಮೀನೃಸಿಂಹನಲ್ಲಿ ಪ್ರಾರ್ಥಿಸಿ ಮಾಡುವ ಮಂಗಳಾಶಾಸನಗಳು.
-ಶ್ರೀ ಯದುಗಿರಿ ಯತಿರಾಜ ಸಂಪತ್ಕುಮಾರ
 ರಾಮಾನುಜ ಜೀಯರ್ ಸ್ವಾಮಿಗಳು

*********************
-ಪುಟಗಳು 15,16-
*********************
ಆರೋಗ್ಯ
ಸ್ವಸ್ಥ ದೇಹಾರೋಗ್ಯಕ್ಕಾಗಿ ಸರಳ ಸೂತ್ರಗಳು
ನಿತ್ಯದ ಪಥ್ಯ
  

  
      ರೋಗ ಪರಿಹಾರಕ್ಕೆ ಮತ್ತು ಆರೋಗ್ಯ ರಕ್ಷಣೆಗೆ ಪಥ್ಯವು ಅತ್ಯಾವಶ್ಯವಾಗಿದೆ. ಪಥ ಎಂದರೆ ದಾರಿ - ಪಥ್ಯವೆಂದರೆ ಆರೋಗ್ಯವಾದ ದಾರಿ. ಆರೋಗ್ಯವಂತರು ಕೂಡ ನಿತ್ಯ ಪಾಲಿಸಬೇಕಾದ ಪಥ್ಯದ ನಿಯಮಗಳನ್ನು ಸಂಕ್ಷಿಪ್ರವಾಗಿ ಕೊಟ್ಟಿದೆ:
೧. ಸೂರ್ಯೋದಯಕ್ಕಿಂತ ಕನಿಷ್ಠ ಒಂದು ಗಂಟೆ ಮುಂಚೆ ಏಳುವ ಮಾತ್ರದಿಂದಲೇ ಎಷ್ಟೋ ಕಾಯಿಲೆಗಳು ಗುಣವಾಗುವುದೆಂಬುದು ಅನುಭವದ ಮಾತು. ಆ ಸಮಯದಲ್ಲಿ ಆಕಾಶದಲ್ಲಿ ಪಾಚನಾತ್ಮಕ ಅಗ್ನಿಶಕ್ತಿಯೂ, ವರ್ಧನಾತ್ಮಕ ಸೋಮ ಶಕ್ತಿಯೂ ಇರುವುದೆಂದು ಆಯುರ್ವೇದ ಹೇಳುತ್ತದೆ.  ಆಗ ಕನಿಷ್ಠ ೩-೪ ಮೈಲು ವೇಗದಿಂದ ತಿರುಗಾಡಿ ಬರುವ ವ್ಯಾಯಾಮ ಮಾಡುವುದು ಒಳ್ಳೆಯದು.
೨. ಚಹಾ-ಕಾಫಿಗಳು ಉತ್ತೇಜಕ ಪೇಯಗಳಾಗಿದ್ದು ಉತ್ತೇಜನವು ಇಳಿದೊಡನೆ ಜೀರ್ಣಶಕ್ತಿಯು ಮಂದಗೊಳ್ಳುತದೆ. ಬಹುತರ ರೋಗಗಳೆಲ್ಲ ಅಜೀರ್ಣದಿಂದಲೇ ಹುಟ್ಟಿಕೊಳ್ಳುವವಾದ್ದರಿಂದ ಬರಿ ಹೊಟ್ಟೆಯಲ್ಲಿ ಅವುಗಳನ್ನು ಕುಡಿಯದಿರುವುದು ಉತ್ತಮ. ಎದ್ದ ಮೇಲೆ ಕನಿಷ್ಠ ಎರಡು ಗಂಟೆ ಯಾವ ಆಹಾರವನ್ನೂ ಸೇವಿಸದಿರುವುದು ಒಳಿತು. ನೀರು ಕುಡಿಯಬಹುದು.
೩. ಊಟ-ತಿಂಡಿಗಳ ನಡುವೆ ಹಸಿವೆಯಾದರೆ ಹಾಲೂ ಸೇರಿ ಯಾವುದೇ ಆಹಾರ ಪೇಯಗಳನ್ನು ಎಷ್ಟೇ ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಮುಂದೆ ಕನಿಷ್ಠ ೩-೪ ಗಂಟೆಗಳವರೆಗೆ ಬೇರೆ ಏನನ್ನೂ ಸೇವಿಸಬಾರದು.
೪. ಅಕಾಲದ ಆಹಾರೋಪಾಹಾರಗಳ ಸೇವನವು ಕೂಡ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಗೊತ್ತುಪಡಿಸಿದ ಸಮಯಕ್ಕೆ ಆಹಾರ ಪಾನಗಳು ಸಿಗದಿದ್ದಾಗ ಇಲ್ಲವೆ ಬಿಡುವಿಲ್ಲದಾಗ ಉಪವಾಸ ಇದ್ದು ಮುಂದಿನ ಆಹಾರ ಕಾಲದವರೆಗೆ ಬರಿಯ ನೀರನ್ನು ಕುಡಿಯುವುದು ಒಳ್ಳೆಯದು.
೫. ಉಣಿಸು ತಿನಿಸುಗಳ ಕಾಲದಲ್ಲಿ ಮತ್ತು ತಿಂದೊಡನೆ ಹೆಚ್ಚು ನೀರನ್ನು ಕುಡಿಯಬಾರದು. ೨-೩ ಗಂಟೆಗಳ ಬಳಿಕ ಮೂರು ಗಂಟೆಗೊಮ್ಮೆ ಬೇಕಾದಷ್ಟು ನೀರನ್ನು ಕುಡಿಯಬೇಕು. ನೀರನ್ನಷ್ಟೆ ಅಲ್ಲ, ಉಣ್ಣುವ ಕಾಲದಲ್ಲಿ ಹಾಲು, ಸಾರು, ಮಜ್ಜಿಗೆ ಪಾಯಸದಂತಹ ದ್ರವಾಹಾರಗಳನ್ನು ಕೂಡ ಹೆಚ್ಚು ಸೇವಿಸಿದಲ್ಲಿ ಪಾಚಕ ರಸಗಳು ದುರ್ಬಲವಾಗುವುವು.
೬. ಆಹಾರವು ಎಷ್ಟೇ ಪೌಷ್ಠಿಕವಾಗಿರಲಿ ಅದರೊಳಗಿನ ಪೋಷಕಾಂಶಗಳು ಶರೀರದಿಂದ ಹೀರಲ್ಪಡಬೇಕಾದರೆ ಅದಕ್ಕೆ ಪಾಚಕ ರಸಗಳ ಸಂಸ್ಕಾರವಾಗಲೇ ಬೇಕು. ಅದಕ್ಕಾಗಿ ಆಹಾರ ವಸ್ತುವು ಬಿರುಸಾಗಿರಲಿ, ಮಿದುವಾಗಿರಲಿ - ಪ್ರತಿಯೊಂದು ತುತ್ತನ್ನು ೩೦-೪೦ ಸಲ ನುರಿಸಬೇಕು. ಅದರಿಂದ ಆಹಾರದೊಡನೆ ಜೊಲ್ಲು ಧಾರಾಳವಾಗಿ ಸೇರಿ ಅದರ ಉತ್ತೇಜನದಿಂದ ಆಹಾರ ಮಾರ್ಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಸ್ರವಿಸಲಿರುವ ಪಾಚಕರಸಗಳಿಗೆ ಉತ್ತೇಜನವು ಸಿಗುವುದು. ಹಾಗೆ ಆಹಾರವನ್ನು ಚೆನ್ನಾಗಿ ಅಗಿಯದಿರುವುದರಿಂದಲೇ ಅನೇಕರಿಗೆ ತುತ್ತು ತುತ್ತಿಗೂ ಬಾಯಿ ಒಣಗಿ ನೀರು ಕುಡಿಯಬೇಕೆನ್ನಿಸುವುದು. ಅಲ್ಲದೇ ಸಾಮಾನ್ಯವಾಗಿ ಹೊಟ್ಟೆ ಉರಿ, ಹುಳಿ ವಾಂತಿಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಬಹುತರರು ಆಹಾರವನ್ನು ಅಗಿಯದೇ ನುಂಗುವವರೆ ಆಗಿದ್ದಾರೆಂದು ತಿಳಿಯುವುದು.
೭. ಕಾಯಿಪಲ್ಲೆಗಳನ್ನು ಸಾಧ್ಯವಾದಷ್ಟು ನಿಜ ಸ್ವರೂಪದಲ್ಲಿ, ಇಲ್ಲವೇ ಅತ್ಯಲ್ಪ ಮಸಾಲೆಯೊಡನೆ ಉಪಯೋಗಿಸಬೇಕಲ್ಲದೆ, ಪಲ್ಲೆಗಳನ್ನು ಹೆಚ್ಚು ಪ್ರಮಾಣದಲ್ಲಿ ನಿತ್ಯದ ಊಟದಲ್ಲಿ ಬಳಸಬೇಕು. ಅದರಿಂದ ಮಲ ಮೂತ್ರಾದಿ ವಿಸರ್ಜನೆಗಳಿಗೆ ಅನುಕೂಲವಾಗುವುದಲ್ಲದೆ ರೋಗ ನಿರೋಧಕ ಶಕ್ತಿ ಬಲಗೊಳ್ಳುವುದು.
೮. ಆಹಾರ ಜೀರ್ಣಿಕೆಯಲ್ಲಿ ತುಂಬ ಸಹಾಯಕವಾಗಿರುವ ಮಜ್ಜಿಗೆಯನ್ನು ನಿತ್ಯದ ಊಟದಲ್ಲಿ ಬಳಸಬೇಕು. ಸಾಮಾನ್ಯರು ತಿಳಿದಿರುವಂತೆ ಮಜ್ಜಿಗೆಯು ಶೈತ್ಯವನ್ನುಂಟು ಮಾಡುವುದಿಲ್ಲ.
೯. ಯಾವುದೇ ಹಣ್ಣುಗಳನ್ನು ಮತ್ತು ಸಿಹಿ ಪದಾರ್ಥಗಳನ್ನು ಊಟಕ್ಕೆ ಮುಂಚೆ ಸೇವಿಸಬೇಕು.
೧೦. ಆರೋಗ್ಯವಾಗಿರುವವರು ಹಗಲಿನ ಸಮಯದಲ್ಲಿ ಮಲಗಬಾರದು. ರೋಗಿಗಳು, ವೃದ್ಧರು ಮತ್ತು ಬಹಳ ಆಲಸ್ಯವುಂಟಾದಾಗ ಪೂರ್ಣ ಮಲಗದೇ ಕುಳಿತಿರುವ ಭಂಗಿಯಲ್ಲಿ ಆರಾಮ ಕುರ್ಚಿಯಲ್ಲಿ ಇಲ್ಲವೇ ದಿಂಬುಗಳನ್ನಿಟ್ಟುಕೊಂಡು ವಿಶ್ರಾಂತಿ/ನಿದ್ದೆ ಮಾಡಬಹುದು.
೧೧. ರಾತ್ರಿ ಊಟವಾಗಿ ಕನಿಷ್ಟ ೨-೩ ಗಂಟೆಗಳಾದರೂ ಎಚ್ಚರವಾಗಿ ಇರಬೇಕಲ್ಲದೆ, ಸ್ವಲ್ಪ ಅತ್ತಿತ್ತ ಓಡಾಡಿಕೊಂಡು ಬರುವುದು ಕೂಡ ಹಿತಕರವಾಗಿದೆ. ಅಜೀರ್ಣದಿಂದ ಮತ್ತು ತಜ್ಜನ್ಯ ಕಾಯಿಲೆಗಳಿಂದ ಬಳಲುವವರಂತೂ ಈ ನಿಯಮವನ್ನು  ಪಾಲಿಸಲೇಬೇಕು.
೧೨. ಹಾಲು ಪುಷ್ಟಿದಾಯಕವಾದ ಆಹಾರ. ರಾತ್ರಿ ಮಲಗುವಾಗ ಹಾಲು ಕುಡಿಯುವ ಅಭ್ಯಾಸ ಸರಿಯಲ್ಲ. ಕೆಮ್ಮು, ನೆಗಡಿ, ಉಬ್ಬಸ, ಅಜೀರ್ಣಗಳುಳ್ಳವರಿಗಂತೂ ಆ ಅಭ್ಯಾಸವು ಅಪಾಯಕರ. ಹಸಿದಾಗ ಹಾಲನ್ನು ಕುಡಿಯುವುದಿದ್ದರೂ ಅದಕ್ಕೆ ಸಕ್ಕರೆಯನ್ನು ಹಾಕಬಾರದು.  ಹಸಿವಾದಾಗ ಇಲ್ಲವೇ ಊಟದ ನಂತರ ೧ ಲೋಟ ಹಾಲು ಸೇವಿಸುವುದು ಉತ್ತಮ.
೧೩. ನಿತ್ಯವೂ ಕಾಲಕಾಲಕ್ಕೆ ಸಾಕಷ್ಟು ಮಲಮೂತ್ರ ಬೆವರುಗಳು ಯಾರಿಗೆ ನೈಸರ್ಗಿಕವಾಗಿಯೇ ವಿಸರ್ಜಿಸಲ್ಪಡುತ್ತಿರುವವೋ ಅವರು ಕಾಯಿಲೆಗೆ ಒಳಗಾಗಲಾರರು. ಅವುಗಳ ಸುಖ ಪ್ರವೃತ್ತಿಗೆ ಅನುಕೂಲವಾಗುವಂತೆ ವ್ಯಾಯಾಮ ಮತ್ತು ಸಾಕಷ್ಟು ನೀರಿನ ಪಾನ ರೂಢಿಸಿಕೊಳ್ಳಬೇಕು. ಹಾಗೆಯೇ ಅವುಗಳು ಪ್ರವೃತ್ತವಾದಾಗ ಬಿಡುವಿಲ್ಲವೆಂಬ ನೆವದಿಂದ ವಿಸರ್ಜನಕ್ಕೆ ತಡ ಮಾಡಬಾರದು. ಬಹುತರ ಎಲ್ಲ ರೋಗಗಳು ಮಲಮೂತ್ರಾದಿಗಳ ತಡೆಯಿಂದಾಗುತ್ತವೆಂದು ಆಯುರ್ವೇದ ಹೇಳುತ್ತದೆ.
೧೪.  ನಮ್ಮ ಆಹಾರ-ವಿಹಾರಗಳಲ್ಲಿಯ  ತಪ್ಪುಗಳಿಂದ ಶರೀರದಲ್ಲಿ ಹುಟ್ಟಿಕೊಳ್ಳುವ ಮಲಾಧಿಕ್ಯವನ್ನು ಹೊರ ನೂಕುವ ಪ್ರಕೃತಿಯ ಪ್ರಯತ್ನವೇ ರೋಗ ರೂಪವನ್ನು ತಾಳುತ್ತದೆಂದು ಆಯುರ್ವೇದವು ಹೇಳುತ್ತದೆ. ಆದ್ದರಿಂದ ಯಾವುದೊಂದು ರೋಗವು ಕಾಣಿಸಿಕೊಂಡೊಡನೆ ಅದನ್ನು ಶರೀರದೊಳಗೆ ಅಡಗಿಸಿಬಿಡುವ ಔಷಧೋಪಚಾರ ಮಾಡಿದರೆ ಆ ಮಲ ಸಂಚಯದಿಂದ ಬೇರೆ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಎಲ್ಲ ರೋಗಗಳು ಪ್ರಾಣ ನಾಶಕವೇ ಆಗಿವೆಯೆಂಬ ಭಯವೇ ಎಲ್ಲಕ್ಕೂ ಡಾಕ್ಟರುಗಳ ಕಡೆಗೆ ಧಾವಿಸಲು ಕಾರಣವಾಗಿದೆ.
೧೫. ಸಿಟ್ಟು, ಹೊಟ್ಟೆಕಿಚ್ಚು, ಹಗೆತನ, ಚಿಂತೆಗಳುಳ್ಳವರಿಗೆ ರೋಗಗಳು ಬೇಗ ಗುಣವಾಗುವುದಿಲ್ಲ. ಆದ್ದರಿಂದ ಅವನ್ನು ವರ್ಜಿಸಿ ಮನಸ್ಸು, ಪ್ರೀತಿ, ಸಹಾನುಭೂತಿ, ಪರೋಪಕಾರೇಚ್ಛೆಗಳಿಂದ ಶಾಂತವಿರಿಸಿಕೊಳ್ಳಬೇಕು. ಮನೋಲ್ಲಾಸಕ್ಕೆ ಮತ್ತು ಆರೋಗ್ಯಕ್ಕೆ ಸಂಗೀತ ಸಹ ಒಂದು ಉತ್ತಮ ಗುಣಕಾರಿ ಸಾಧನ.
ಸಾರಾಂಶ
೧. ಎರಡು ಸಲದ ಊಟದ ಹೊರತಾಗಿ ನಡುವೆ ಏನನ್ನೂ ಸೇವಿಸಬಾರದು. ಹಸಿವಾದಲ್ಲಿ ಮಧ್ಯದಲ್ಲಿ ಒಂದು ಸಲ ಹಾಲು, ಮಜ್ಜಿಗೆ ಅಥವಾ ಹಣ್ಣು ಹಂಪಲುಗಳನ್ನು ಸೇವಿಸಬಹುದು. ನೀರನ್ನು ಕಾಲಕಾಲಕ್ಕೆ ಧಾರಾಳವಾಗಿ ಕುಡಿಯಬೇಕು. ಅರ್ಧ ಹೊಟ್ಟೆ ಘನಾಹಾರ, ಕಾಲುಭಾಗ ದ್ರವಾಹಾರ, ಮಿಕ್ಕ ಕಾಲು ಹೊಟ್ಟೆ ಹಾಗೆಯೇ ತೆರವಾಗಿಟ್ಟುಕೊಳ್ಳುವುದು ಎಲ್ಲರಿಗೂ ಹಿತಕಾರಿ.

೨. ಚಹಾ, ಕಾಫಿ, ಬೀಡಿ, ಸಿಗರೇಟು, ನಶ್ಯ, ಮದ್ಯ, ತಂಬಾಕುಗಳನ್ನು ಪೂರ್ಣವಾಗಿ ವರ್ಜಿಸಬೇಕು. ಉಪ್ಪು, ಕಾರ, ಮಸಾಲೆ, ಕರಿದ ತಿನಿಸು, ಮಿಠಾಯಿಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಬೇಕು.
೩. ಆಹಾರ ಸೇವಿಸುವಾಗ ಪ್ರತಿಯೊಂದು ತುತ್ತನ್ನೂ ಕನಿಷ್ಟ ೩೦-೪೦ ಸಲ ಅಗಿದು (ನುರಿಸಿ) ನುಂಗಬೇಕು. ಹಣ್ಣು,  ಅನ್ನ, ರಾಗಿಮುದ್ದೆ ಮುಂತಾದ ಮೃದು ಪದಾರ್ಥಗಳನ್ನೂ ಚೆನ್ನಾಗಿ ನುರಿಸದೆ ನುಂಗಬಾರದು.
೪. ದಿನಾ ಚೆನ್ನಾಗಿ ಮೈ ಬೆವರುವಂತೆ ತಕ್ಕಷ್ಟು ವ್ಯಾಯಾಮ, ಆಟ ಅಥವಾ ವೇಗದಿಂದ ತಿರುಗಾಟಗಳನ್ನು    (೩-೪ ಮೈಲು) ಮಾಡಬೇಕು.
೫. ಯೋಗ್ಯವಾದದ್ದು:  ಹೊತ್ತಿಗೆ ಸರಿಯಾಗಿ ಆಹಾರ ವಿಹಾರ, ಬಲಕೊಡುವ ಮತ್ತು ಬೇಗನೆ ಜೀರ್ಣವಾಗುವಂತಹ ತಾಜಾ ಆಹಾರ, ಅಕ್ಕಿ, ಗೋಧಿಹಿಟ್ಟು, ಹೆಸರು ಬೇಳೆ, ಜೋಳ, ಸಜ್ಜೆ, ರಾಗಿ, ತೊಗರಿ ಬೆಳೆಯ ಕಟ್ಟು, ಎಳೆಬದನೆಕಾಯಿ, ಪಡವಲಕಾಯಿ, ಸೌತೆಕಾಯಿ, ಮೂಲಂಗಿ, ಗಜ್ಜರಿ, ಕುಂಬಳಕಾಯಿ, ಹೀರೇಕಾಯಿ, ಬಾಳೆಯ ಹೂ-ಕಾಯಿ ದಿಂಡುಗಳು, ಸೊಪ್ಪುಗಳು, ಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ ಬೀಜ, ಅರಿಸಿನ, ಹಾಲು, ತುಪ್ಪ, ತಾಜಾ ಮಜ್ಜಿಗೆ, ಕೆನೆ, ನಿಂಬೆಹಣ್ಣು, ದ್ರಾಕ್ಷಿ, ಕಿತ್ತಲೆ, ದಾಳಿಂಬೆ, ಮೊಸಂಬಿ, ಟೊಮೆಟೋ ಹಣ್ಣು, ಬೆಳಿಗ್ಗೆ ತಣ್ಣೀರಿನ ಅಥವಾ ಬೆಚ್ಚಗಾದ ನೀರಿನ ಸ್ನಾನ, ಕುಡಿಯಲಿಕ್ಕೆ ಚೆನ್ನಾಗಿ ಕಾದು ಆರಿದ ನೀರು ಇಲ್ಲವೇ ಬಾವಿಯ ಸಿಹಿ ತಣ್ಣೀರು.
೬. ಬಿಡತಕ್ಕದ್ದು:  ನಿದ್ದೆ ಕೆಡಬಾರದು, ಹೊಟ್ಟೆಯನ್ನು ಬಹಳವಾಗಿ ತುಂಬಿಸಬಾರದು; ಚಹಾ, ಕಾಫಿ, ಕೊಕೊ, ಸಾರಾಯಿ, ಗಾಂಜಾ, ಅಫೀಮು, ಹೊಗೆಸೊಪ್ಪು, ಮೊಸರು, ಹಸಿಮೆಣಸಿನಕಾಯಿ, ಸಾಸಿವೆ, ಗಡ್ಡೆ ಗೆಣಸುಗಳು ವರ್ಜ್ಯ ಮತ್ತು ರೋಗಾವಧಿಯಲ್ಲಿ ಮಾಂಸ, ಮೊಟ್ಟೆ, ಮೀನುಗಳು ಕೂಡ ಪೂರ್ಣ ವರ್ಜ್ಯ.


ವಿವಿಧ ಮೂಲಗಳಿಂದ ಸಂಗ್ರಹ ಮತ್ತು ಪ್ರಸ್ತುತಿ: 
-ಬಿ.ಎಸ್.ಆರ್. ದೀಪಕ್,ಶಿವಮೊಗ್ಗ

*********************
ಮಿನಿಕಥೆ

ಜಗಳ

     ಸಮಯವಿದ್ದುದರಿಂದ ಮೂಢ ತನ್ನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಆತನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೋ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆದಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆಂದಿದ್ದಾಗ ಅವನನ್ನು ನೋಡಿದ ಗೆಳೆಯ 'ಏಯ್, ಬಾರೋ' ಎಂದು ನಗುತ್ತಾ ಆಹ್ವಾನಿಸಿದ. 'ಊರಗಲ ಬಾಯಿ ಮಾಡಿಕೊಂಡು ಮಾತಾಡಿಸೋದು ನೋಡು' ಎಂದು ಮೂದಲಿಸಿದ ಪತ್ನಿ ಮೂಢನಿಗೆ 'ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತಾಡುತ್ತಾರೆ. ನನ್ನ ಹತ್ತಿರ ಮುಖ ಗಂಟಿಕ್ಕಿಕೊಂಡು ಮಾತಾಡುತ್ತಾರೆ' ಎಂದು ದೂರಿದಳು. ಮೂಢ ಸುಮ್ಮನಿರಲಾರದೆ 'ಊರಿನವರು ನಗುತ್ತಾ ಮಾತಾಡಿಸುವಾಗ ಇವನು ಸಿಟ್ಟು ಮಾಡಿಕೊಂಡು ಮಾತಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ' ಎಂದ. ಮಂಕನ ಪತ್ನಿ 'ಅದಕ್ಕೇ ನಿಮ್ಮನ್ನು ಎಲ್ಲರೂ ಮೂಢ ಅನ್ನುವುದು' ಎಂದು ಹೇಳಿ ಒಳಗೆ ಹೋದರೂ ಅವಳ  ಒಳಮನಸ್ಸು  'ಅದೂ ನಿಜ' ಎಂದು ಹೇಳುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತಾಡಿದವು. ತಿಂಡಿಯ ರುಚಿ ಹೆಚ್ಚಾಯಿತು.
                               -  ರಾಜು.
* * * * *

****************
-ಪುಟಗಳು 17,18-
****************

ಸುದ್ದಿ - ಕಿರಣ !!
     ಸಾಗರ ತಾ. ಇತಿಹಾಸ ಸಮ್ಮೇಳನ: ದಿನಾಂಕ ೧೦-೦೧-೦೯ರಂದು ತಾ. ಇತಿಹಾಸ ವೇದಿಕೆ ಮತ್ತು ಸಹೃದಯ ಬಳಗದ ಆಶ್ರಯದಲ್ಲಿ ನಡೆಯಿತು. ಸಂಶೋಧನಾರತ್ನ ಗುಂಡಾಜೋಯಿಸರು ಸಮ್ಮೇಳನಾಧ್ಯಕ್ಷರಾಗಿದ್ದು  ಡಾ. ವೆಂಕಟೇಶ ಜೋಯಿಸರ ಮರೆಯಲಾಗದ ಕೆಳದಿ ಸಾಮ್ರಾಜ್ಯಪುಸ್ತಕ ಬಿಡುಗಡೆಯಾಯಿತು. ಶ್ರೀ ಗುಂಡಾಜೋಯಿಸ್‌ರವರನ್ನು ಸನ್ಮಾನಿಸಲಾಯಿತು.

ಸಮಾರೋಪ: ನವದೆಹಲಿಯ ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ ಮತ್ತು ಕೆಳದಿಯ ಹಸ್ತಪ್ರತಿ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ೨೦೦೮-೦೯ರ ಹಸ್ತಪ್ರತಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಶಿವಮೊಗ್ಗದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ೨೦-೦೩-೦೯ರಂದು ನಡೆಯಿತು. ಶ್ರೀಮತಿ ಡಾ. ಉಷಾಸುರೇಶ್, ನಿರ್ದೇಶಕರು, ರಾಜ್ಯ ಪತ್ರಾಗಾರ ನಿರ್ದೇಶನಾಲಯರವರು ಶ್ರೀ ಕೆಳದಿ ಗುಂಡಾಜೋಯಿಸರು ಸಂಪಾದಿಸಿದ ಪುಸ್ತಕ ಗೋಕರ್ಣ ಶಾಸನಗಳು- ಸಂಪುಟ೧ರ ಬಿಡುಗಡೆ ಮಾಡಿದರು. ಕೆಳದಿ ವಸ್ತು ಸಂಗ್ರಹಾಲಯದ ಸಂಚಾಲಕ ಡಾ. ರಾಜಾರಾಮಹೆಗಡೆರವರು ಶ್ರೀ ಕವಿ ವೆಂ. ಸುರೇಶ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಪುಸ್ತಕ 'The Unforgettable Keladi Empire' ಪುಸ್ತಕ ಬಿಡುಗಡೆ ಮಾಡಿದರು. ಡಾ. ಗೋಪಾಲಕೃಷ್ಣ ಮತ್ತು ಡಾ. ಹೆಚ್.ಎಸ್. ಗೋಪಾಲರಾವ್‌ರವರು ಮುಖ್ಯ ಅತಿಥಿಗಳಾಗಿದ್ದರು.

ಸದಸ್ಯತ್ವ: ಶ್ರೀ ಕ.ವೆಂ. ನಾಗರಾಜ್‌ರವರು ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಶುಭವಿವಾಹ: (೧)ಹೊನ್ನಾಳಿಯ ಶ್ರೀ ಹೆಚ್. ಕೃಷ್ಣಮೂರ್ತಿಜೋಯಿಸ್ ಮತ್ತು ಶ್ರೀಮತಿ ಜಯಶ್ರೀರವರ ಸುಪುತ್ರಿ ಚಿ.ಸೌ. ಹೆಚ್.ಕೆ.ಮಮತಾರವರ ವಿವಾಹ ಬೆಂಗಳೂರಿನ ಶ್ರೀ ಎಸ್.ಟಿ. ಸತ್ಯನಾರಾಯಣರಾವ್ ಮತ್ತು ಶ್ರೀಮತಿ ಸುಮಿತ್ರರವರ ಸುಪುತ್ರ ಚಿ.ರಾ. ಎಸ್. ಶ್ರೀಕಾಂತ್ ರವರೊಂದಿಗೆ ಶಿವಮೊಗ್ಗದ ಆದಿನಾಥ ಜೈನಭವನದಲ್ಲಿ ದಿನಾಂಕ ೨೨-೧೨-೨೦೦೮ರಂದು ಬಂಧುಮಿತ್ರರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

(೨) ಶ್ರೀ ಎಂ.ಎಸ್.ನಾಗೇಂದ್ರ ಮತ್ತು ಶ್ರೀಮತಿ ನಾಗೇಂದ್ರ, ಬೆಂಗಳೂರು ಇವರ ಪುತ್ರಿ ಡಾ. ರೋಹಿಣಿರವರ ವಿವಾಹ ಡಾ. ನಾಗೇಂದ್ರರವರೊoದಿಗೆ ಬೆಂಗಳೂರಿನ ಜಯನಗರದಲ್ಲಿ ಸಂಭ್ರಮದಿಂದ ನೆರವೇರಿತು.

ಬ್ರಹ್ಮೋಪದೇಶ: (೧)ಬೆಂಗಳೂರಿನ ಶ್ರೀ ಭಾಸ್ಕರ್ ಮತ್ತು ಶ್ರೀಮತಿ ಅನುಪಮಾರವರ ದ್ವಿತೀಯ ಪುತ್ರ ಚಿ.ರಾ. ಸಾಗರನ ಬ್ರಹ್ಮೋಪದೇಶ ಕಾರ್ಯ ಜಯನಗರದ ಜಯರಾಮ ಸೇವಾಮಂಡಳಿಯಲ್ಲಿ ದಿನಾಂಕ ೧೬-೦೨-೦೯ರಂದು ಬಂಧುಮಿತ್ರರ ಸಮ್ಮುಖದಲ್ಲಿ ನೆರವೇರಿತು.

(೨) ಬೆಂಗಳೂರಿನ ಶ್ರೀ ಬಿ.ಎಲ್.ವೆಂಕಟೇಶಮೂರ್ತಿ ಮತ್ತು ಶ್ರೀಮತಿ ಪದ್ಮಲತಾರವರ ಪುತ್ರ ಚಿ.ಶಶಾಂಕನ ಬ್ರಹ್ಮೋಪನಯನ ತ್ಯಾಗರಾಜನಗರದಲ್ಲಿ ದಿನಾಂಕ ೭-೫-೨೦೦೯ರಮದು ನಡೆಯಿತು.

(೩) ಶಿವಮೊಗ್ಗದ ಶ್ರೀಮತಿ ವೀಣಾ ಮತ್ತು ಶ್ರೀ ಸೋಮೇಶ್ವರ ಜೋಷಿರವರ ಪುತ್ರ ಚಿ.ಸುನಿಲನ ಬ್ರಹ್ಮೋಪದೇಶ ದಿನಾಂಕ ೧-೫-೨೦೦೯ರಂದು ನೆರವೇರಿತು.

ಕಾರ್ಯಕ್ರಮ: ೧) ಬೆಂಗಳೂರಿನ ಶೇಷಾದ್ರಿಪುರಂ ರಾಮಸೇವಾ ಸಮಿತಿಯ ಕಾರ್ಯಕ್ರಮದಲ್ಲಿ ದಿನಾಂಕ ೨೪-೪-೨೦೦೯ರಂದು ಕು. ಬಿ.ಎಸ್.ಆರ್. ಅಂಬಿಕಾ ಮತ್ತು ವಿ. ಬಿ.ಎಸ್.ಆ. ದೀಪಕ್ ರವರ ದ್ವಂದ್ವ ವಯೊಲಿನ್ ಕಛೇರಿ ಯಶಸ್ವಿಯಾಗಿ ನಡೆಯಿತು.
೨) ದಿನಾಂಕ ೯-೫-೨೦೦೯ರಂದು ಶ್ರೀ ಕೂಡಲಿ ಜಗನ್ನಾಥಶಾಸ್ತ್ರಿಯವರು ಬರೆದ ಮತ್ತು ಶ್ರೀ ಕವಿಸುರೇಶ್ ರವರು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಕೂಡಲಿ ಕ್ಷೇತ್ರ ಧರ್ಶನ ಪುಸ್ತಕವನ್ನು ಶ್ರೀ ಕೂಡಲಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳವರ ಸನ್ನಿಧಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.

ಬದಲಾದ ವಿಳಾಸ:   ಶ್ರೀ ಎನ್. ವಿನಯ, ನಂ. ೪೨೮, ರಂಗಶ್ರೀ, ೫ನೆಯ ಅಡ್ಡರಸ್ತೆ, ೪ನೆಯ ಮುಖ್ಯರಸ್ತೆ, ಜೆ.ಪಿ. ನಗರ - ೩ನೆಯ ಹಂತ, ಬೆಂಗಳೂರು - ೫೬೦೦೭೮.     ದೂ. ೯೪೪೮೮ ೭೦೯೫೯.


ಶ್ರೀಮತಿ ಸಂಧ್ಯಾ ಪ್ರಹ್ಲಾದರಾವ್, ಫ್ಲಾಟ್ ನಂ.೨೦೩, ೨ನೆ ಮಹಡಿ, ಘರೋಂಡಾ ವೆಂಕಟಾಚಲಪತಿ ಅಪಾರ್ಟ್‌ಮೆಂಟ್, ೮೧ಎ, ಟೀಚರ್ಸ್ ಕಾಲೋನಿ, ಈಸ್ಟ್ ಮರೇದಪಲ್ಲಿ, ಸಿಕಂದರಾಬಾದ್ -೫೦೦೦೨೬, ಆಂಧ್ರಪ್ರದೇಶ.             ದೂ. ೯೯೫೯೫೩೩೦೦೨

ತಿದ್ದುಪಡಿ: ಶ್ರೀ ಬಿ.ವಿ.ಹರ್ಷ  ದಕ್ಷಿಣ ಕೊರಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಮೆರಿಕೆಯ ಕೊಲಂಬೋ ವಿಶ್ವವಿದ್ಯಾನಿಲಯದ M.Tech. ಪದವಿಯನ್ನು on-line ನಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆಂದು ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಿದ್ದು ವಿಶ್ವವಿದ್ಯಾನಿಲಯದ ಹೆಸರು ಕೊಲಂಬೋ ಬದಲಿಗೆ ಕೇಂಬ್ರಿಡ್ಜ್ ಎಂದು ಓದಿಕೊಳ್ಳಲು ಕೋರಿದೆ. ದಕ್ಷಿಣ ಕೊರಿಯಾದಲ್ಲಿನ ನಿಯೋಜಿತ ಕಾರ್ಯ ಮುಗಿಸಿ ಬೆಂಗಳೂರಿನ SAMSUNG ಸಂಸ್ಥೆಯ ಕೆಲಸಕ್ಕೆ ಮರಳಿದ್ದಾರೆ.

ದಾಂಪತ್ಯ ಜೀವನದ ೬೧ನೆಯ ವರ್ಷಕ್ಕೆ:  


  ದಿನಾಂಕ ೨೩-೫-೨೦೦೯ರಂದು ದಾಂಪತ್ಯ ಜೀವನದ ೬೧ನೆಯ ವರ್ಷಕ್ಕೆ ಕಾಲಿರಿಸಿದ ಶ್ರೀ ಕವಿ ವೆoಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮನವರನ್ನು ಗೌರವಿಸಿ, ಶಿವಮೊಗ್ಗದ ಶ್ರೀ ಕವಿಸುರೇಶರವರ ಮನೆಯಲ್ಲಿ ಸರಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
     ಸುದೀರ್ಘ ಆರೋಗ್ಯ ಮತ್ತು ಆಯಸ್ಸನ್ನು ಇವರಿಬ್ಬರಿಗೂ ಭಗವಂತ ಕರುಣಿಸಲಿ ಎಂಬುದು ಕವಿಕಿರಣ ಬಳಗದ ಹಾರೈಕೆ.

********************
ಕವಿ ಪ್ರಕಾಶನದ ಪ್ರಕಟಣೆಗಳು

೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ - ಲೇ: ಕವಿ ವೆಂ. ಸುರೇಶ್, ಪು: ೧೨೬. ಬೆಲೆ: ರೂ. ೧೨೫/-
೨. Karmayogi - Kalavallabha S.K. Lingannaiya - a concise biography of Sri S.K. Lingannaiya - Author: Kavi Suresh. P:114. Price: Rs. 80/- 
೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ - ಲೇ: ಕವಿ ವೆಂ. ಸುರೇಶ್, ಪು:೯೮, ಬೆಲೆ: ರೂ. ೭೫/-
೪. ಕವಿಸಂಪರ್ಕವಾಹಿನಿ (ದೂರವಾಣಿಕೈಪಿಡಿ) - ಸಂ. ಕವಿ ಸುರೇಶ್, ಪು:೨೬, ಬೆಲೆ: ರೂ.೧೫/-
೫. ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ -(ವ್ಯಕ್ತಿಚಿತ್ರಣ)-   ಲೇ: ಕ. ವೆಂ. ನಾಗರಾಜ್, ಹಾಸನ. ಪು.೬೦, ಬೆಲೆ: ರೂ.೪೦/-.
* * * *
(ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಪ್ರಕಟಿಸಿದೆ. -ಸಂ.)
******************

ಸ್ವೀಕರಿಸಿದ ಕೃತಿಗಳು:

೧. ಕೆಳದಿ ರಾಣಿ ಚೆನ್ನಮ್ಮ - ಮಕ್ಕಳ ಐತಿಹಾಸಿಕ ಕಾದಂಬರಿ, ಲೇ: ಮಾರ್ಪಳ್ಳಿ ಆರ್. ಮಂಜುನಾಥ್, ಪು: ೫೨, ಬೆಲೆ: ರೂ. ೩೦/-, ಪ್ರ: ಶ್ರೀ ಮಹಾಗಣಪತಿ ಪ್ರಕಾಶನ, ಶಿವಮೊಗ್ಗ.
೨. ಮರೆಯಲಾಗದ ಕೆಳದಿ ಸಾಮ್ರಾಜ್ಯ - ಸಂಕ್ಷಿಪ್ತ ಚರಿತ್ರೆ- ಲೇ: ಡಾ. ಕೆ. ವೆಂಕಟೇಶ ಜೋಯಿಸ್, ಪು: ೬೪, ಬೆಲೆ: ರೂ. ೩೫/-, ಪ್ರ: ಶ್ರೀ ಸರಸ್ವತಿ ಸೇವಾ ಸಮಿತಿ (ರಿ), ಕೆಳದಿ.
೩. The Unforgettable Keladi Empire - ಮೇಲಿನ ಪುಸ್ತಕದ ಇಂಗ್ಲಿಷ್ ಅನುವಾದ, ಅನುವಾದಕ: ಕವಿಸುರೇಶ್, ಪು: ೬೪, ಬೆಲೆ: ರೂ.೩೫/-, ಪ್ರ: ಶ್ರೀ ಸರಸ್ವತಿ ಸೇವಾ ಸಮಿತಿ (ರಿ), ಕೆಳದಿ.
೪. ಆಚೆ ಈಚೆಗಳಾಚೆ... -ಕವನ ಸಂಕಲನ- ಲೇ: ಯಶೋದಾ ಖಂಡೋಬರಾವ್, ಪು:೧೦೩, ಬೆಲೆ:ರೂ.೮೦ ಪ್ರ: ಮಗರ್ ಪಬ್ಲಿಕೇಶನ್, ಶಿವಮೊಗ್ಗ.
೫. ಕೆಳದಿ ವಸ್ತು ಸಂಗ್ರಹಾಲಯದಲ್ಲಿರುವ ಗೋಕರ್ಣ ಇತಿಹಾಸ ಶಾಸನಗಳು-ಭಾಗ-೧. ಸಂ: ಕೆಳದಿ ಗುಂಡಾಜೋಯಿಸ್, ಪು:೧೫೬, ಬೆಲೆ: ರೂ.೧೩೦/-. ಪ್ರ: ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯ, ಕೆಳದಿ ವ.ಸಂ.ಇ.ಸಂ.ಕೇಂದ್ರ, ಕೆಳದಿ.
೬. ಕೂಡಲಿ ಕ್ಷೇತ್ರ ದರ್ಶನ - ಶ್ರೀ ಕೂಡಲಿ ಜಗನ್ನಾಥಶಾಸ್ತ್ರಿ (ಕನ್ನಡದಲ್ಲಿ) - ಶ್ರೀ ಕವಿ ಸುರೇಶ್ (ಆಂಗ್ಲಭಾಷೆಯಲ್ಲಿ) ಪುಟ:, ಬೆಲೆ -೪೦ರೂ. ಪ್ರ. ಶ್ರೀ ಕೃಪಾ ಪ್ರಕಾಶನ.
***********************

ಶ್ರದ್ಧಾಂಜಲಿ



    ದಿನಾಂಕ ೧೪-೫-೨೦೦೯ರಂದು ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ ರವರು (ಕವಿ ಶ್ರೀಕಂಠಯ್ಯ ಮತ್ತು ಶ್ರೀಮತಿ ಭಾಗೀರಥಮ್ಮನವರ ಪುತ್ರಿ) ವಿಧಿವಶರಾಗಿದ್ದು ಅವರ ಅಪಾರ ಬಂಧುವರ್ಗದವರ ದುಃಖದಲ್ಲಿ ಕವಿಕಿರಣ ಬಳಗ ಭಾಗಿಯಾಗಿರುವುದಲ್ಲದೆ, ಅವರ ಆತ್ಮಕ್ಕೆ ಶಾಂತಿ ಬಯಸುತ್ತದೆ.
*******************

ಪತ್ರಿಕೆಯ ಸಂಚಿಕೆಗಳನ್ನು ಸಂಗ್ರಹಿಸಿಡಿ


 ಕವಿ ಕುಟುಂಬಗಳ ಕುರಿತು ಅಮೂಲ್ಯ ಮಾಹಿತಿಗಳು ಪ್ರತಿ ಸಂಚಿಕೆಯಲ್ಲೂ ಇರುವುದರಿಂದ ಎಲ್ಲಾ ಸಂಚಿಕೆಗಳನ್ನು ಕವಿ ಕುಟುಂಬಗಳವರು ಕುಟುಂಬದ ದಾಖಲೆಯಾಗಿ ಸಂರಕ್ಷಿಸಿಡಲು ಕೋರಿದೆ. ಮುಂದಿನ ಪೀಳಿಗೆಗೂ ಇದು ಉಪಯುಕ್ತವಾಗಲಿದೆ.
-ಸಂ.

**************************************
ನೀವು ಈಗ ಇರುವುದರಲ್ಲಿ ಸಂತೋಷ ಕಾಣಲಾಗದಿದ್ದರೆ ನೀವು ಹೆಚ್ಚು ಪಡೆದಾಗಲೂ ಸಂತೋಷ ಕಾಣಲಾರಿರಿ.
********************
-ಪುಟಗಳು 19,20-


********************


                                                                                  ರಕ್ಷಾಪುಟ - 3

*****************************************************

    

-ರಕ್ಷಾಪುಟ - 4 -
********************************************

ಓದಿದ್ದಕ್ಕೆ ಧನ್ಯವಾದಗಳು.  ಪ್ರತಿಕ್ರಿಯೆಗಳಿಗೆ ಸ್ವಾಗತ.

********************************************




ಗುರುವಾರ, ಏಪ್ರಿಲ್ 14, 2011

ನಮ್ಮನಮ್ಮಲ್ಲಿ

      'ಕವಿಕಿರಣ' - ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ ಹಾಗೂ ಕವಿಕಿರಣ ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ ಈಗ ನಿಮ್ಮ ಮುಂದಿಡಲಾಗಿದೆ. ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ತಮ್ಮ ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ. ನಾಗರಾಜ್.

ಬುಧವಾರ, ಫೆಬ್ರವರಿ 23, 2011

ಕವಿಕಿರಣ - ಡಿಸೆಂಬರ್, 2008.

ಆತ್ಮೀಯರೇ,
'ಕವಿಕಿರಣ' ಡಿಸೆಂಬರ್, 2008ರ ಸಂಚಿಕೆ -ಇಗೋ ನಿಮಗಾಗಿ:
ನಿಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆಗಳಿಗೆ ಸ್ವಾಗತ!
ಮುಖಪುಟ
**********************
ಮೂಢ ಉವಾಚ
       ರಸಭರಿತ ಫಲಮೂಲ ಕೊಂಬೆ ತಾನಲ್ಲ| 
      ಫಲಸತ್ವ ಸಾಗಿಪ ಮಾರ್ಗ ತಾನಹುದು|| 
      ಮಾಡಿದೆನೆನಬೇಡ ನಿನ್ನದೆನಬೇಡ|  
     ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ|| 
**********
ಸಂಪಾದಕರು:
ಕ.ವೆಂ. ನಾಗರಾಜ್,
ನಂ. ೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ, ೨ನೆಯ ಮುಖ್ಯ ರಸ್ತೆ, ಶಾಂತಿನಗರ,  ಹಾಸನ - ೫೭೩೨೦೧.
ಮೊಬೈಲ್ ದೂ: ೯೪೪೮೫ ೦೧೮೦೪
ಸಹ ಸಂಪಾದಕರು:
 ಕವಿ ವೆಂ. ಸುರೇಶ,
ಸೌಪರ್ಣಿಕಾ, ೩ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ, ಅಕ್ಕಮಹಾದೇವಿಪಾರ್ಕ್ ಹತ್ತಿರ, ಬಸವೇಶ್ವರನಗರ, ಶಿವಮೊಗ್ಗ - ೫೭೭೨೦೪. ಮೊಬೈಲ್ ದೂ: ೯೪೪೮೯ ೩೨೮೬೬.
ಪ್ರಕಾಶಕರು:
 ಕವಿ ಪ್ರಕಾಶನ, ಶಿವಮೊಗ್ಗ.
*********
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.
ಮುದ್ರಕರು:
ರಾಯಲ್ ಪ್ರಿಂಟರ್ಸ್, ಶಿವಮೊಗ್ಗ.
*********
ವಂತಿಕೆ ನೀಡಿದ ಮಹನೀಯರು
 ಶ್ರೀ/ ಶ್ರೀಮತಿಯರಾದ:
 ೧.ಕೆ.ವಿ.ಅನಂತ, ನೋರಿಸ್‌ಟೌನ್,ಯು.ಎಸ್.ಎ. ೫೦೦೦.೦೦ 
 ೨. ಸಾ.ಕ. ಕೃಷ್ಣಮೂರ್ತಿಕುಟುಂಬ,ಬೆಂ. ೧೦೧೦.೦೦
.  ೩. ಕೆ. ಶ್ರೀಕಂಠ, ಬೆಂಗಳೂರು  ೧೦೦೦.೦೦ 
೩. ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ ೫೦೦.೦೦ 
೪. ಕ. ವೆಂ. ನಾಗರಾಜ್, ಹಾಸನ ೫೦೦.೦೦ 
೫. ಕವಿ ವೆಂ. ಸುರೇಶ, ಶಿವಮೊಗ್ಗ ೫೦೦.೦೦ 
 ೬. ಎಂ.ಎಸ್. ನಾಗೇಂದ್ರ, ಬೆಂಗಳೂರು ೫೦೦.೦೦
  ೭. ಜಗದೀಶಚಂದ್ರ, ಬೆಂಗಳೂರು ೫೦೦.೦೦
  ೮.ಮಹಾಲಕ್ಷ್ಮಿಮಂಜುನಾಥ,ಬೆಂಗಳೂರು ೫೦೦.೦೦ 
 ೯. ಗಿರಿಜಾಲಕ್ಷ್ಮೀಪತಿ, ಬೆಂಗಳೂರು ೫೦೦.೦೦ 
ಒಟ್ಟು ೧೦೫೧೦.೦೦   
****************
ಜಮಾ ಖರ್ಚು ವಿವರ (೧೩-೧೧-೨೦೦೮ರವರೆಗೆ)
ಒಟ್ಟು ಸಂಗ್ರಹ ೧೦೫೧೦.೦೦
ವೆಚ್ಚ - -
ಆಖೈರು ಶಿಲ್ಕು ೧೦೫೧೦.೦೦
ದಿ.೧೩-೧೧-೨೦೦೮ರ ನಂತರದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
******************
ಕವಿ ಪ್ರಕಾಶನದ ಪ್ರಕಟಣೆಗಳು
೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ - ಲೇ: ಕವಿ ವೆಂ. ಸುರೇಶ, ಪು: ೧೨೬. ಬೆಲೆ: ರೂ. ೧೨೫/-
೨. Karmayogi – kalavallabha S.K. LINGANNAIYA – a concise biography of Sri S.K. Lingannaiya – Author: Kavi Suresh. P:114. Price: Rs. 80/-
೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ - ಲೇ: ಕವಿ ವೆಂ. ಸುರೇಶ, ಪು:೯೮, ಬೆಲೆ: ರೂ. ೭೫/-
****************
ಮುಂದಿನ ಸಂಚಿಕೆ
      ಜೂನ್, ೨೦೦೯ರಲ್ಲಿ ಕವಿಕಿರಣದ ಮುಂದಿನ ಸಂಚಿಕೆ ಪ್ರಕಟ ವಾಗಲಿದೆ. ಈ ಸಂಚಿಕೆಗೆ ನೀಡಿರುವ ಪ್ರೋತ್ಸಾಹ, ಸಹಕಾರಗಳನ್ನು ಮುಂದಿನ ಸಂಚಿಕೆಗಳಿಗೂ ಮುಂದುವರೆಸುವಂತೆ ಎಲ್ಲರನ್ನೂ ಕೋರಲಾಗಿದೆ. -ಸಂ. 
****************
   ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ|
                                                      ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ||
                                                      ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ|
                                                      ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
ಎಲ್ಲರಿಗೂ ಮುಂಬರಲಿರುವ ಸಂಕ್ರಾಂತಿಯ ಶುಭಾಶಯಗಳು!!!
************************
ರಕ್ಷಾಪುಟ -2.
***************************

ಸಂಪಾದಕೀಯ

                                                                           ಅಂತಃಕಿರಣ
      ಸುಪ್ತ ಜಾಗೃತವಾಗಿದೆ. ಅಮೂರ್ತ ಮೂರ್ತವಾಗಿದೆ. ಕೆಳದಿ ಕವಿ ಮನೆತನದ ಪತ್ರಿಕೆ ಕವಿಕಿರಣ ಪ್ರಭೆ ಬೀರಿ  ನಮ್ಮೆಲ್ಲರ ಅಂತಃಕರಣ ತಲುಪಲು ಸಜ್ಜಾಗಿದೆ. ನಮ್ಮದೇ ಆದ, ನಮ್ಮಿಂದಲೇ ಆದ, ನಾವೇ ನಮಗಾಗಿ ಮಾಡುತ್ತಿರುವ ಪ್ರಯತ್ನದ ಫಲ ನಮ್ಮ ಮುಂದಿದೆ. ಸ್ವಾಗತಿಸೋಣ, ಉಳಿಸೋಣ, ಬೆಳೆಸೋಣ.
      ಕೆಳದಿ ಅರಸರು ನಾಡಿನ ಅಭಿವೃದ್ಧಿಯೊಂದಿಗೆ ಕಲೆ, ಸಾಹಿತ್ಯ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದ್ದು ಇತಿಹಾಸ. ನಮ್ಮ ಪೂರ್ವಜರು ಕೆಳದಿ ಸಂಸ್ಥಾನದ ಆಸ್ಥಾನ ಕವಿಗಳಾಗಿದ್ದು ಅವರ ಕೃತಿಗಳಿಂದಲೇ ಕೆಳದಿ ಇತಿಹಾಸ ದಾಖಲೆಯಾಗಿ ಉಳಿದಿರುವುದೂ ಸಹ ಇತಿಹಾಸ. ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳು ಹತ್ತು ಹಲವು ಕಾರಣಗಳಿಂದ ಹಲವೆಡೆ ಹರಡಿ ಹಂಚಿಹೋಗಿದ್ದವರನ್ನು ವರ್ಷಕ್ಕೊಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಂಬಂಧಗಳನ್ನು ಉಳಿಸಿ ಬೆಳೆಸುವ ಕಾರ್ಯ ಕಳೆದ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರನ್ನೂ ನೆನೆಸೋಣ.
      ೧೮ನೆಯ ಶತಮಾನದಲ್ಲಿ ಕೆಳದಿ ಸಂಸ್ಥಾನದ ಆಸ್ಥಾನಕವಿಯಾಗಿ ಕೆಳದಿ ನೃಪವಿಜಯವೆಂಬ ಕೃತಿಯಿಂದ ಕನ್ನಡನಾಡಿನ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆ ನೀಡಿದ ಕವಿ ಲಿಂಗಣ್ಣನಿಂದ ಆರಂಭವಾಗಿ ಮುಂದು ವರೆಯುತ್ತಿರುವ ನಮ್ಮ ಮನೆತನದ ಹತ್ತು ತಲೆಮಾರುಗಳ ವಿವರಗಳಿರುವ ವಂಶವೃಕ್ಷ ಲಭ್ಯವಿದ್ದು ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಇದರ ಪ್ರತಿಯನ್ನು ಈಗ ಕುವೆಂಪು ವಿ.ವಿ.ಗೆ ಹಸ್ತಾಂತರವಾಗಿರುವ ಕೆಳದಿಯ ವಸ್ತು ಸಂಗ್ರಹಾಲಯಕ್ಕೂ ನೀಡಲಾಗಿದ್ದು ಅಲ್ಲಿ ಇದನ್ನು ಸಂರಕ್ಷಿಸಿ ಇಡಲಾಗಿದೆ. ನಮ್ಮ ಪೂರ್ವಜರು ಪ್ರತಿಭಾಸಂಪನ್ನರಾಗಿದ್ದು ಅವರ ಸಾಧನೆಗಳ ಪರಿಚಯ ಮಾಡಿಕೊಳ್ಳುವುದಲ್ಲದೆ ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಿರಿಯ ಸಾಧಕರ ಪರಿಚಯ ಮಾಡಿಕೊಡುವ ಕವಿಕಿರಣದ ಪ್ರಯತ್ನಕ್ಕೆ ಸಹಕರಿಸೋಣ. ನಾವು ಉತ್ತಮವಾದ ಹಿನ್ನೆಲೆಯ ಕುಟುಂಬಗಳಿಗೆ ಸೇರಿದವರೆಂಬ ಹೆಮ್ಮೆಯೊಂದಿಗೆ ಹಿರಿಮೆ ಹೆಚ್ಚಿಸಲು ನಮ್ಮ ಕಾಣಿಕೆಯನ್ನೂ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಶೋಗಾಥೆ ಮುಂದುವರೆಸೋಣ.
     
     ಈ ಪತ್ರಿಕೆ ಮುಂದೆ ಕವಿಕುಟುಂಬಗಳ ಐತಿಹಾಸಿಕ ದಾಖಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಐತಿಹಾಸಿಕ ಸಂಗತಿಗಳಲ್ಲಿ ಆಸಕ್ತಿಯಳ್ಳ ವಿದ್ಯಾರ್ಥಿಗಳಿಗೂ ಇದು ಉಪಯಕ್ತವಾಗಲಿದೆ. ಓದಿ ಎಸೆಯುವ ಪತ್ರಿಕೆಗಳ ಸಾಲಿಗೆ ಸೇರದೆ ಸಂಗ್ರಹಯೋಗ್ಯ ಮೌಲಿಕ ಪತ್ರಿಕೆಯಾಗಿ ಬೆಳೆಯಲು ಭದ್ರ ಅಡಿಪಾಯ ಹಾಕುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸೋಣ.
      ಕವಿ ಕುಟುಂಬಗಳ ನಡುವೆ ಪರಸ್ಪರ ಉತ್ತಮ ಸಂಬಂಧ, ಸಂವಹನ, ಸಜ್ಜನ ಶಕ್ತಿಯ ಜಾಗರಣಕ್ಕೆ ಕವಿಕಿರಣ ಮಾಧ್ಯಮವಾಗಲಿದೆ. ಕುಟುಂಬದ ಸದಸ್ಯರಲ್ಲಿ ಅಡಗಿರುವ ಸುಪ್ತಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಲಿದೆ. ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಲಿದೆ. ಪರಸ್ಪರ ಆರೋಗ್ಯಕರ ಸ್ಪರ್ಧೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಕವಿ ಕುಟುಂಬದ ಸದಸ್ಯರನ್ನು ಸಜ್ಜುಗೊಳಿಸುವ ಘನ ಉದ್ದೇಶ ಹೊಂದಿರುವ ಈ ಪತ್ರಿಕೆಗೆ ಕುಟುಂಬಗಳ ಎಲ್ಲಾ ಸದಸ್ಯರುಗಳೂ ಬೆಂಬಲಿಸಬೇಕಾಗಿದೆ. ಭಾವನೆಗಳು ಬರಡಾಗುತ್ತಿರುವ ಈ ಪುರುಸೊತ್ತಿಲ್ಲದ ಕಾಲದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿದ್ದೀರಾ ಎಂದು ವಿಚಾರಿಸಿದರೆ ನಮ್ಮ ಕರ್ತವ್ಯ ಮುಗಿಯಿತು ಎನ್ನುವ ಪರಿಸ್ಥಿತಿಯಲ್ಲಿ ಭಾವನೆಗಳಿಗೆ ನೀರೆರೆದು ಪೋಷಿಸುವ ಉದ್ದೇಶಕ್ಕೆ ಆಸರೆಯಾಗೋಣ.
      ಕವಿಕಿರಣಕ್ಕೆ ಗುರುಹಿರಿಯರು ಆಶೀರ್ವದಿಸಿದ್ದಾರೆ; ಗಣ್ಯರು ಶುಭ ಹಾರೈಸಿದ್ದಾರೆ; ಕುಟುಂಬಗಳ ಹಿರಿಯರ ಮಾರ್ಗದರ್ಶನವಿದೆ. ಉತ್ತಮ ಸಹಕಾರಿಗಳಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಲೋಚಿಸಿ, ಚರ್ಚಿಸಿ ಪತ್ರಿಕೆಯ ರೂಪು ರೇಷೆಗಳನ್ನು ನಿರ್ಧರಿಸಲಾಗಿದೆ. ನಿರೀಕ್ಷಿತ ಸಹಕಾರ ಸಿಗುತ್ತಿದೆ. ಉದಾತ್ತ ಗುರಿಯಿದೆ. ದಾರಿ ನಿಚ್ಛಳವಿದೆ. ಮುನ್ನಡೆಯುವುದೊಂದೇ ಬಾಕಿ. ಬನ್ನಿ, ಒಟ್ಟಿಗೆ ಹೆಜ್ಜೆ ಹಾಕೋಣ.
      ಅಗಣಿತ ಅತ್ತಣ, ಇತ್ತಣ, ಸುತ್ತಣ, ಎತ್ತೆತ್ತಣದ ಕವಿಗಡಣದ ಸುಗುಣದಾಭರಣವಾಗಿ, ಗುಣವ ಪ್ರಧಾನವಾಗಿಸಿ, ಅವಗುಣವ ಗೌಣವಾಗಿಸಿ, ಬಣಗುಡುವ ದಣಿದ ಮನವ ತಣಿಪ ಹೊಂಗಿರಣವಾಗಿ, ಕವಿಮನೆತನದ ಆಶಾಕಿರಣವಾಗಿ ಕವಿಕಿರಣ ಚಿರಕಾಲ ಬೆಳಗಲಿ ಎಂಬ ಸದಾಶಯದೊಂದಿಗೆ, ಸದುದ್ದೇಶಕ್ಕೆ ಸದಾ ತಮ್ಮೊಂದಿಗೆ ಇರಬಯಸುವ,
                                                                                                           -ಕ.ವೆಂ.ನಾಗರಾಜ್.

                                                  -ಪುಟ-1.
**************************
ಶುಭ ಆಶೀರ್ವಾದ
ಸಂಪಾದಕರಿಗೆ,
     ನೀವು ದಿನಾಂಕ ೧೨-೦೯-೦೮ರಂದು ಬರೆದ ಪತ್ರವು ತಲುಪಿ, ಶ್ರೀ ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಪಾದಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಪೂರ್ವಕ ಸಮರ್ಪಿಸಲಾಯಿತು.
     ಕೆಳದಿ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ಹಿಂದಿನ ಸಾಧಕರುಗಳನ್ನು ಮತ್ತು ಅವರ ಕೃತಿಗಳನ್ನು ಪರಿಚಯಿಸುವ ಹಾಗೂ ಉತ್ತಮ ಸಾಧನೆಯ ಪರಂಪರೆಯ ಮುನ್ನಡೆಯೊಂದಿಗೆ ಸಜ್ಜನ ಶಕ್ತಿಯ ಜಾಗೃತಗೊಳಿಸುವ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆ ಪ್ರಕಟಗೊಳ್ಳಲಿರುವ ವಿಚಾರವನ್ನು ಅರಿತು ಶ್ರೀ ಶ್ರೀ ಗಳವರು ಸಂತೋಷಪಟ್ಟಿರುತ್ತಾರೆ.
     ಶ್ರೀ ಶಾರದಾ ಚಂದ್ರಮೌಳೀಶ್ವರರ ಕೃಪೆಯಿಂದ ಪತ್ರಿಕೆಯು ವಿದ್ವತ್ಪೂರ್ಣ ಲೇಖನಗಳೊಂದೊಡಗೂಡಿ ಪ್ರಕಟಗೊಳ್ಳಲಿ ಹಾಗೂ ಬಹು ಜನಪ್ರಿಯತೆಯನ್ನು ಗಳಿಸುವಂತಾಗಲಿ ಎಂದು ಶ್ರೀ ಶ್ರೀಗಳವರು ಆಶೀರ್ವದಿಸಿ, ಅನುಗ್ರಹಿಸಿರುವ ಆಶೀರ್ಮಂತ್ರಾಕ್ಷತೆ, ಶ್ರೀ ಶಾರದಾ ಅರ್ಚನಾ ಪ್ರಸಾದವನ್ನು ಕಳುಹಿಸಿರುತ್ತೇನೆ.
ವಂದನೆಗಳೊಂದಿಗೆ,
ಗೌರೀಶಂಕರ್,
ಆಡಳಿತಾಧಿಕಾರಿಗಳು, ಶ್ರೀ ಶೃಂಗೇರಿ ಮಠ, ಶೃಂಗೇರಿ .

*******************************                                                   

                                        ಶುಭ ಆಶೀರ್ವಾದ

ಸಂಪಾದಕರಿಗೆ,
     ಕವಿಕಿರಣ ಎಂಬ ನೂತನ ಪತ್ರಿಕೆಯೊಂದನ್ನು ಹೊರತರಲಿರುವ ವಿಚಾರ ತಿಳಿದು ಸಂತೋಷವಾಯಿತು.
     ಕೆಳದಿ ಕವಿ ಮನೆತನದ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯಾತ್ಮಕ ಲೇಖನಗಳಿಂದೊಡಗೂಡಿ ಸಂಚಿಕೆಯು ಆಕರ್ಷಕವಾಗಿ ಪ್ರಕಟವಾಗಲೆಂದು ಆಶಿಸುತ್ತೇನೆ.
     ಈ ದಿಸೆಯಲ್ಲಿ ನಿಮ್ಮೆಲ್ಲ ಪ್ರಯತ್ನ ಪರಿಶ್ರಮ ಸಫಲವಾಗುವಂತೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.
ಇತಿ,
ಡಿ. ವೀರೇಂದ್ರ ಹೆಗ್ಗಡೆಯವರು,
ಶ್ರೀ ಧರ್ಮಸ್ಥಳ.


**********************                                                        

                                                 ಶುಭ ಆಶೀರ್ವಾದ

ಸಂಪಾದಕರಿಗೆ,
     ಸೂರ್ಯಃ ಆತ್ಮಾ ಜಗತಃ. ಈ ಚರಾಚರ ಪ್ರಪಂಚವನ್ನು ಬೆಳಗುವವ ಭಗವಾನ್ ಸೂರ್ಯದೇವ. ಕಿರಣ ಸ್ಪರ್ಷ ಮಾತ್ರದಿಂದ ಈ ಜೀವಜಗತ್ತಿಗೆ ಚೈತನ್ಯೋದಯ ಅರಳಿಸುವ - ಬೆಳಗಿಸುವ - ಬಾಳಿಸುವ ಗುಣವಿಶೇಷ ಕಿರಣಕ್ಕಿದೆ. ನೇರ - ನಿರಂತರತೆಯೇ ಕಿರಣದ ಗತಿ.
     ಕವಿ ಕ್ರಾಂತದರ್ಶಿ. ತನ್ನಂತರಂಗದ ಅನುಭಾವಕ್ಕೆ ಕ್ಷರರಹಿತವಾದ ಅಕ್ಷರರೂಪ ನೀಡಿ ಸಹೃದಯರಲ್ಲಿ ನವ್ಯಲೋಕವನ್ನು ಸೃಷ್ಟಿಸುವ ಅಭಿನವ ಶಬ್ಧಬ್ರಹ್ಮ. ಪ್ರಕೃತ ಕೆಳದಿಯ ಸಂಸ್ಥಾನದಲ್ಲಿ ಅರಳಿದ ಕವಿವಂಶದ ವೃಕ್ಷವಾಹಿನಿ ತನ್ನತನದ ಮೆರಗಿನೊಂದಿಗೆ ಕವಿಕಿರಣ ಎಂಬ ಪತ್ರಿಕೆಯ ಲೋಕಾರ್ಪಣೆಯ ನವವಸಂತವನ್ನು ಆಚರಿಸುತ್ತಿರುವುದು ಸಂತಸದ ಸಂಗತಿ. ಈ ವಿಷಯವರಿತ ಶ್ರೀ ಸಂಸ್ಥಾನದವರು ಸಂತಸ ವ್ಯಕ್ತಪಡಿಸಿರುತ್ತಾರೆ.
     ಭೂತ - ವರ್ತಮಾನ - ಭವ್ಯಭವಿಷ್ಯತ್ತಿನ ಕೊಂಡಿಯಾಗಿ ಬೆಳಗಿದ ಕೆಳದಿಯ ಕವಿ ವಂಶವೃಕ್ಷ ಬಾಳಲಿ, ಬೆಳೆಯಲಿ, ಬೆಳಗಲಿ. ತನ್ನ ಜ್ಞಾನಕಿರಣದಿಂದ ಪ್ರಪಂಚವನ್ನು ಪೂರ್ಣತೆಯೆಡೆಗೆ ಒಯ್ಯುವಂತಾಗಲಿ ಎಂದು ಶ್ರೀ ಮಹಾ ಸಂಸ್ಥಾನದವರು ಹಾರೈಸಿದ ಸಂಗ್ತಿ ಶೃತಪಡಿಸಿದೆ.
ಶ್ರೀ ಮಹಾಸಂಸ್ಥಾನದ ಅಪ್ಪಣೆಯ ಮೇರೆಗೆ
ರಾಘವೇಂದ್ರ ಮಧ್ಯಸ್ಥ, ವ್ಯವಸ್ಥಾಪಕರು,
ಶ್ರೀ ರಾಮಚಂದ್ರಾಪುರ ಮಠ,
ಹನಿಯ ಅಂಚೆ, ಹೊಸನಗರ ತಾ., ಶಿವಮೊಗ್ಗ ಜಿಲ್ಲೆ.
*****************************
ಶುಭ ಹಾರೈಕೆ

     ಇತಿಹಾಸ ಪ್ರಸಿದ್ಧ ಕೆಳದಿ ಸಂಸ್ಥಾನದ ಕವಿ ಮನೆತನದ ಕುಟುಂಬಗಳ ಸಾಧನೆ, ಸಾಧಕರ ಪರಿಚಯಿಸುವುದರೊಂದಿಗೆ ಕವಿಕಿರಣ ಪತ್ರಿಕೆಯನ್ನು ಹೊರತರುತ್ತಿರುವುದು ಸಂತಸದ ಮತ್ತು ಅಭಿನಂದನೀಯ ಸಂಗತಿಯಾಗಿದೆ. ನಾಡಿನ ಇತಿಹಾಸದಲ್ಲಿ ಕೆಳದಿ ಸಂಸ್ಥಾನಕ್ಕೆ ವಿಶಿಷ್ಟ ಸ್ಥಾನ, ಮಾನ ಇದೆ.
ಕವಿಕಿರಣ ಪತ್ರಿಕೆಗೆ ಹಾರ್ದಿಕ ಶುಭ ಕಾಮನೆಗಳು.
ಗೋಪಾಲಕೃಷ್ಣ ಬೇಳೂರು,
ವಿಧಾನ ಸಭಾ ಸದಸ್ಯರು, ಸಾಗರ
-ಪುಟ -೨-
**************************
ಕೆಳದಿ ಕವಿಮನೆತನದ ಪೂರ್ವಜರು -1
ಕೆಳದಿ ಲಿಂಗಣ್ಣ ಕವಿ
     ಕರ್ನಾಟಕದ ಚರಿತ್ರೆಯಲ್ಲಿ ಕೆಳದಿ ನೃಪವಿಜಯ ಕೃತಿಕಾರ ಕವಿ ಲಿಂಗಣ್ಣನ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಚಿರ ಪರಿಚಿತವಾದುದು. ಸುಮಾರು ೧೭೫೦ ರಲ್ಲಿ ಬಾಳಿದ ಈತನು ಕೆಳದಿ ಸಂಸ್ಥಾನದ ಆಸ್ಥಾನ ಕವಿಯಾಗಿದ್ದಾನೆ. ಕವಿ ಸುರೇಶರವರು ತಮ್ಮ ಹಳೆ ಬೇರು ಹೊಸ ಚಿಗುರು ಕೃತಿಯಲ್ಲಿ ಸ್ವಲ್ಪ ಮಟ್ಟಿಗೆ ಲಿಂಗಣ್ಣನನ್ನು ಪರಿಚಯಿಸಿರುವುದರಿಂದ ಚರ್ವಿತ ಚರ್ವಣ ಅನಗತ್ಯ.
     ತಾಳೆಯೋಲೆ ಹಸ್ತಪ್ರತಿಯಲ್ಲಿ    'ತಿಳಿಯಲ್ಕೀ ಕೃತಿನಾಮಂ  ಕೆಳದೀನೃಪವಿಜಯಮೆಂದಿದಕ್ಕಧಿನಾಥಂ   ಕೆಳದಿಪ ರಾಮೇಶ್ವರನಿದನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ' ಎಂಬ ಉಲ್ಲೇಖನವು ಲಿಂಗಣ್ಣನು ವೆಂಕಪ್ಪನ ಮಗನೆಂದು ಉದ್ಗರಿಸಿದೆ. ಈತನ ಕಾಲವು ೧೭೫೦ರ ಸುಮಾರಿನಲ್ಲಿರುತ್ತದೆ. ಸುಸಂಸ್ಕೃತ ಕವಿಯಾಗಿ, ಚಾರಿತ್ರಿಕ ಸಂಶೋಧಕನಾಗಿ ಕೆಳದಿ ಅರಸರ ಆಸ್ಥಾನದಲ್ಲಿ ಶೋಭಿಸಿ ಲಿಂಗಣ್ಣ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಕಿರಿಯ ಬಸವಪ್ಪನ ಕಾಲದ ಕೆಳದಿಯ ಸುವರ್ಣ ಯುಗವನ್ನು ಕಂಡಿದ್ದಾನೆ. ಅದು ನಾಶಗೊಂಡ ದುರಂತ ಚಿತ್ರ ವನ್ನು ಅವಲೋಕಿಸಿದ್ದಾನೆ. ಕಡೆಯಲ್ಲಿ ದಾರುಣ ಬದುಕು ಸವೆಸಿದ್ದಾನೆ. ರಾಜಾಶ್ರಯ ತಪ್ಪಿ ಮಕ್ಕಳೂ ಬೇರೆ ಬೇರೆ ಯಾಗಿ ಲಿಂಗಣ್ಣ ತುಂಬಾ ಕಷ್ಟ ಅನುಭವಿಸಿದುದು ವೇದ್ಯ ವಾಗುತ್ತದೆ. ಏನೇ ಇರಲಿ, ಈತನ ಕೃತಿಗಳು ಚಿರಂತನ ವಾದುವುಗಳು.
ಕೃತಿಗಳುಃ-
೧) ಕೆಳದಿನೃಪವಿಜಯ- ಶ್ರೀ ಗುಂಡಾಜೋಯ್ಸರ ಗದ್ಯಾನುವಾದದೊಂದಿಗೆ ೫ಬಾರಿ ಮರು ಮುದ್ರಣ ವಾಗಿದೆ.
೨)   ಶಿವಪೂಜಾದರ್ಪಣ
೩) ಪಾರ್ವತಿ ಪರಿಣಯ-  ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೪) ದಕ್ಷಾಧ್ವರ ವಿಜಯ- ಡಾ. ವೆಂಕಟೇಶ್ ಜೋಯಿಸ್ ಸಂಪಾದಿತ ತಿರುಪತಿ ದೇವಾಲಯ ಪ್ರಕಟಿಸಿದೆ 
೫)   ಶಿವಕಲ್ಯಾಣ (ಅಪ್ರಕಟಿತ ಓಲೆಗರಿ)
     ಬೆಂಗಳೂರಿನಲ್ಲಿ ನಾನು ಓದುತ್ತಿದ್ದಾಗ ಲಿಂಗಣ್ಣ ಕವಿಯ ತಾಳೆಯೋಲೆ ಹಸ್ತಪ್ರತಿಗಳನ್ನು ಪ್ರೀತಿಯಿಂದ ನನಗಿತ್ತ (ಲಿಂಗಣ್ಣ ಕವಿ ಪೀಳಿಗೆಯ) ಸೋದರ ಮಾವಂದಿರುಗಳಿಗೆ ಕವಿ ಭಾಂಧವರ ಪರವಾಗಿ ವಿನಮ್ರ ಕೃತಜ್ಞತೆಗಳು. ಈ ತಾಳೆಯೋಲೆ ಆಧಾರದಿಂದ ಕೆಳದಿ ಸಂಶೋಧನಾಲಯ ಮುಖಾಂತರ ಪ್ರಕಟಣೆ ಕಂಡಿರುವುದು ಈಗ ತಮ್ಮ ಮುಂದಿರುವುದನ್ನು ಕಾಣಬಹುದಲ್ಲವೇ?.
        ಕೆಳದಿ ನೃಪವಿಜಯವು ಲಿಂಗಣ್ಣನನ್ನು ಸುಪ್ರಸಿದ್ದ ಇತಿಹಾಸ ಸಂಶೋಧಕನನ್ನಾಗಿಸಿದೆ. ಪೂನಾ ವಿಶ್ವ ವಿದ್ಯಾಲಯದ ಪಾಧ್ಯ್ಯಾಪಕ ಡಾಃ ಚಿಟ್ನೀಸ್ ರವರು-
“The literary sources are generally less authentic than either the inscriptions or the accounts of foreign travellers as far as the present work is concerned. The most important literary works are the Keladi Nrpa Vijayam written by Linganna Kavi or poet Linganna. This work seems to have been written between 1763-1804 AD. This literary work, unlike many others, contains more of historical information than of literary praises about the Keladi monarchs. In the work, the poet mainly gives a narration of the rulers one by one. Incidentally he refers to other contemporary dynasties ruling in India, particularly in Karnataka. Much of the information contained in this work is in agreement with the inscriptions and foreign sources. Hence it seems to be more authentic than other literary works. I have  freely drawn upon this work in my thesis corroborating it, wherever possible, by the inscriptions and other sources. It is interesting to note that Linganna Kavi has, in his work, supplemented the main narration by captions, footnotes given usually at the end of every chapter. They contain the names of various officers serving under their respective rulers. This information is useful in writing about the ministers, military generals and other office bearers.”
ಎಂಬುದಾಗಿ ಕೃತಿಯ ಶ್ರೇಷ್ಠತೆಯನ್ನು ಕೊಂಡಾಡಿ Ph.d. ವಿದ್ವಾಂಸರಿಗೆ ಆಕರಗಳ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಕೆಳದಿ ನೃಪ ವಿಜಯದ ಹಸ್ತಪ್ರತಿಯೊಂದು ಲಂಡನ್‌ನಲ್ಲಿ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಇದರ ಚಾರಿತ್ರಿಕ ಮಹತ್ವವನ್ನು ಮನಗಂಡ ಕರ್ನಲ್ ಮೆಕೆಂಝಿಯು ೧೭-೧೮ ನೇ ಶತಮಾನದಲ್ಲಿಯೇ ಇದನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿದ ಪ್ರಾಚೀನ ಹಸ್ತಪ್ರತಿಯೂ ಲಂಡನ್‌ನಲ್ಲಿದೆ. ಯಾವ ವಿಶ್ವವಿದ್ಯಾಲಯ ಹಾಗೂ Ph.d.  ವಿದ್ವಾಂಸನೂ ದಕ್ಷಿಣ ಭಾರತ ಇತಿಹಾಸ ರಚನೆಯಲ್ಲಿ ಲಿಂಗಣ್ಣನ ಈ ಆಕರ ಕೃತಿಯನ್ನು ಆಧರಿಸದಿದ್ದಲ್ಲಿ ಸಂಶೋಧನಾ ಕೃತಿಗೆ ಬೆಲೆ ಬರುವುದಿಲ್ಲವೆಂಬುದು ಕೃತಿ ಹಾಗೂ ವಿದ್ವಾಂಸರ ಹೆಗ್ಗಳಿಕೆ. ಕೆಳದಿ ಸಂಶೋಧನಾಲಯದಲ್ಲಿ ಇದರ ಒಂದೇ ಒಂದು ಓಲೆಗರಿಯಿರುವುದನ್ನು ಮನಗಂಡ ಸರ್ಕಾರ ಗೆಜೆಟೀರ್‌ನಲ್ಲಿ ಇದರ ಛಾಯಾ ಚಿತ್ರವನ್ನು ಪ್ರಕಟಿಸಿದೆ. ಪ್ರಸಿದ್ಧ ಏ.ಆರ್. ಕೃಷ್ಣಶಾಸ್ತ್ರಿ ಆದಿಯಾಗಿ ಖ್ಯಾತ ವಿದ್ವಾಂಸರು ಕೆಳದಿ ಕವಿ ಲಿಂಗಣ್ಣನ ಕವಿತಾ ಸಾಮರ್ಥ್ಯ ವನ್ನು ಮನಸಾರೆ ಕೊಂಡಾಡಿದ್ದಾರೆ.
ಸ ಕವಿಃ ಕಥ್ಯತೇ ಸೃಷ್ಟಾ
  ರಮತೇ ಯತ್ರ ಭಾರತೀ!
   ರಸಭಾವ ಗುಣೀ ಭೂತೈಃ
       ಅಲಂಕಾರೈಃ ಗುಣೋದಯೈಃ!!
ಎಂಬಂತೆ ಕೆಳದಿ ಕವಿ ಲಿಂಗಣ್ಣನು ಆದರ್ಶ ಪ್ರಾಯ ಇತಿಹಾಸ ಸಂಶೋಧಕ ಹಾಗೂ ಕವಿಯಾಗಿರುವುದು ಕನ್ನಡಿಗರ ಹೆಮ್ಮೆ. ಇವನ ಸ್ಮರಣೆ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲರ ಆದ್ಯ ಕರ್ತವ್ಯವಾಗಿದ್ದು, ಶಿವಮೊಗ್ಗ, ಬೆಂಗಳೂರು ಹಾಗೂ ಸಾಗರದ ವೃತ್ತ ಅಥವಾ ಪ್ರಮುಖ ಮಾರ್ಗಗಳಲ್ಲಿ ಈತನ ನಾಮಾಂಕಿತವನ್ನಿಡಲು ಕವಿ ಬಾಂಧವರು ಹೋರಾಡಲು ಮನಸ್ಸು ಮಾಡುವರೇ?
                                     -ಸಂಶೋಧನಾ ರತ್ನ ಕೆಳದಿ ಗುಂಡಾ ಜೋಯಿಸ್
**************************************

ಚಿಂತಿಸಿ:
     ಸಾಧಕರನ್ನು ಅವರ ಕೃತಿಗಳಿಂದ ಜನ ಗುರುತಿಸುತ್ತಾರೆ. ಸಂಬಂಧಿಕರು ಸಾಧಕರ ಮತ್ತು ತಮ್ಮ ಸಂಬಂಧದ ಬಗ್ಗೆ ಹೆಮ್ಮೆ ಪಡುತ್ತಾರೆ. ಇತರರು ಹೆಮ್ಮೆ ಪಡುವಂತಹ ಸಾಧಕರು ನಾವೇ ಆಗಬಾರದೇಕೆ?
********************************

 ಓದುಗರ ಮಾಹಿತಿಗೆ: 
     ಕೆಳದಿಕವಿ ಮನೆತನದ ಪೂರ್ವಜರು ಶೀರ್ಷಿಕೆಯಲ್ಲಿ ಪೂರ್ವಜರ ಮಾಹಿತಿ/ ಪರಿಚಯಗಳ ಲೇಖನ ಮಾಲೆ ಪ್ರಾರಂಭಿಸಿದ್ದು, ಈ ಸಂಚಿಕೆಯಲ್ಲಿ ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಲಿಂಗಣ್ಣ ಕವಿಯ ಕುರಿತು ಕೆಳದಿ ಗುಂಡಾಜೋಯಿಸ್ ಮತ್ತು ಕವಿ ಸುರೇಶರ ಲೇಖನಗಳಿವೆ.  ಲಿಂಗಣ್ಣ ಕವಿಯ ಮೇರು ಕೃತಿ ಕೆಳದಿ ನೃಪವಿಜಯ (ಶ್ರೀ ಗುಂಡಾಜೋಯಿಸರ ಗದ್ಯಾನುವಾದ ಸಹಿತ) ಧಾರಾವಾಹಿಯಾಗಿ ಬರಲಿದೆ.  ಕೆಳದಿ ಕವಿಮನೆತನದ ಸಮಕಾಲೀನರು ಶೀರ್ಷಿಕೆಯಲ್ಲಿ ಸಮಕಾಲೀನ ಕವಿ ಕುಟುಂಬಗಳ ಪರಿಚಯಮಾಲಿಕೆ ಮೂಡಿ ಬರಲಿದ್ದು, ಈ ಸಂಚಿಕೆಯಲ್ಲಿ ಶ್ರೀ ಕೆ. ವೆಂಕಟಸುಬ್ಬರಾವ್ - ಶ್ರೀಮತಿ  ಸೀತಮ್ಮ ದಂಪತಿಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ಸಂಚಿಕೆಯಲ್ಲಿ ಶ್ರೀ ಸಾ.ಕ. ಕೃಷ್ಣಮೂರ್ತಿ - ಶ್ರೀಮತಿ ಅನಸೂಯಮ್ಮರವರ ಕುರಿತು ಪರಿಚಯ ಲೇಖನ ಪ್ರಕಟವಾಗಲಿದೆ.  ಕವಿಕಿರಣದ ಸದುದ್ದೇಶ, ಸದಾಶಯಗಳಿಗೆ ಪೂರಕವಾದ ಕಥೆ , ಕವನ, ಲೇಖನ, ಇತ್ಯಾದಿಗಳಿಗೆ ಆಹ್ವಾನವಿದೆ. ಸಕಾಲದಲ್ಲಿ ಕಳುಹಿಸಿಕೊಡಲು ಕೋರಿದೆ. ಸೀಮಿತ ಪುಟಸಂಖ್ಯೆಗಳ ಕಾರಣ ಕಿರುಬರಹಗಳಿಗೆ ಆದ್ಯತೆಯಿದೆ. 
ಪ್ರಾಯೋಜಕತ್ವ:: ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೫೦೦೦/- ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಪೂರ್ಣ ಪುಟದ ಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಥಮ ಸಂಚಿಕೆಯನ್ನು ಕೆ. ವೆಂಕಟಸುಬ್ಬರಾವ್ - ಸೀತಮ್ಮ ದಂಪತಿಗಳ ಕಿರಿಯ ಪುತ್ರ ಕೆ.ವಿ. ಅನಂತ, ನೋರಿಸ್ ಟೌನ್, ಪಿಎ- ೧೯೪೦೩, ಅಮೆರಿಕಾ ಸಂಯುಕ್ತ ಸಂಸ್ಥಾನ ಇವರು ಪ್ರಾಯೋಜಿಸಿದ್ದು ಅವರಿಗೆ ಅಭಿನಂದನೆಗಳು.      
      ಮುಂದಿನ ಸಂಚಿಕೆಗಳಿಗೆ ಪ್ರಾಯೋಜಕರು ಮುಂದೆ ಬರಲು ಕೋರಿದೆ. 
************************
                                          -ಪುಟಗಳು - 3 ಮತ್ತು 4-
***************************************************************

ಕೆಳದಿ ಕವಿ ಲಿಂಗಭಟ್ಟ       (ಕವಿ ಲಿಂಗಣ್ಣ)                
  - ಕವಿ ವೆಂ. ಸುರೇಶ

     ಕ್ರಿ,ಶ. ೧೭೫೦ ರ ಸುಮಾರಿನಲ್ಲಿದ್ದ ಕವಿ ಲಿಂಗಣ್ಣ ಕೆಳದಿ ಸಂಸ್ಥಾನದ ಆಸ್ಥಾನ ಕವಿ, ಇವರ ನಂತರ ಇವರ ವಂಶಸ್ಥರಿಗೆ ಕವಿ ಎಂಬ ಉಪನಾಮ ಬಂದಿದೆ. ಆದುದರಿಂದ ಕವಿ ವಂಶಕ್ಕೆ ಮೂಲಪುರುಷರು ಈ ಕವಿ ಲಿಂಗಣ್ಣ. ಇವರ ತಂದೆ ವೆಂಕಟಪ್ಪ (ತಾಯಿಯ ವಿವರ ತಿಳಿದಿಲ್ಲ). ಇವರ ವಾಸ ಸಾಗರ - ಕೆಳದಿ ಆಗಿತ್ತೆಂದೂ, ಇವರಿಗೆ ಇದೇ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಜಮೀನು ಇತ್ತೆಂದೂ ಉಲ್ಲೇಖಗಳು ತಿಳಿಸುತ್ತವೆ. ಕೆಳದಿ ಮ್ಯೂಜಿಯಂಬಲ್ಲಿರುವ ನವಾಬ್ ಹೈದರಾಲಿಯ ಸಹಿ ಇರುವ ಈ ಅಪೂರ್ವ ಚಾರಿತ್ರಿಕ ದಾಖಲೆಯಲ್ಲಿ ಕೆಳದಿ ಕವಿ ಸುಬ್ಬಾಭಟ್ಟ - ಶ್ಯಾಂಭಟ್ಟರಿಗೆ ಕೆಳದಿ ಅರಸರು ನೀಡಿದ್ದ ಇನಾಂ ಭೂಮಿಯು ಹೈದರನ ಪರಿವಾರದಲ್ಲಿ ಜಫ್ತಿಯಾಗಿದ್ದುದನ್ನು ಕೆಳದಿ ರಾಜಧಾನಿ ನಗರ (ಬಿದನೂರು) ದಿವಾನ್ ಅವಲ್ ನರಸಪ್ಪಯ್ಯನವರು ತಪ್ಪಿಸಿ ಸದರಿ ಕವಿಗಳಿಗೆ ಪರಿಹಾರ ದೊರಕಿಸಿಕೊಟ್ಟ ಬಗ್ಗೆ ವಿವರಗಳಿವೆ. ಕೆಳದಿ ಕವಿ ಲಿಂಗಣ್ಣನವರ ಗ್ರಂಥಗಳಿಂದ ಇವರು ಎರಡನೇ ಬಸಪ್ಪನಾಯಕನ ಕಾಲದಲ್ಲಿ (೧೭೩೯-೧೭೫೫)ಜೀವಿಸಿರಬಹುದೆಂದು ತೋರುತ್ತದೆ.
     ಒಮ್ಮೆ ಲಿಂಗಣ್ಣನವರು ಕೊಲ್ಲೂರಿನ ಶ್ರೀ ಮೂಕಾಂಬಿಕೆಯ ಸನಿಹದಲ್ಲಿ ಭಕ್ತಿಯಿಂದ ದೇವಿಯನ್ನು ಕುರಿತು ಪ್ರಾರ್ಥಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆಗ ತಾನೇ ಕೊಲ್ಲೂರಿಗೆ ಆಗಮಿಸಿದ್ದ ಕೆಳದಿ ನಾಯಕ ನಿಗೆ ಈತನ ಗಾನಮಾಧುರ್ಯ ಬಹು ಮೆಚ್ಚಿಗೆ ಯಾಯಿತು. (ಕೆಳದಿ ಅರಸರಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕೆಯೂ ಕುಲದೇವರಲ್ಲಿ ಒಂದಾಗಿತ್ತು). ತುಸು ಸಮಯದಲ್ಲಿಯೇ ದೇವಿಯ ಸನಿಹದಿಂದ ಪುಷ್ಪವೊಂದು ಲಿಂಗಣ್ಣನ ಮಡಿಲಿಗೆ ಬಿತ್ತು. ಇದನ್ನು ಕಂಡು ಕೆಳದಿ ನಾಯಕನು ಈತನ ಪೂರ್ವೇತಿಹಾಸವನ್ನು ತಿಳಿದು ತನ್ನ ಆಸ್ಥಾನದಲ್ಲಿ ಆಸ್ಥಾನ ಕವಿಯನ್ನಾಗಿ ಸೇರಿಸಿಕೊಂಡನು.* (ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದ ದಿ. ಜಿ.ವಿ.ಕೆ. ರಾವ್‌ರವರ ಮಾವನವರಾದ ಶ್ರೀ ಮಾಧವರಾಯರು ತೆಗೆದುಕೊಂಡು ಹೋಗಿದ್ದ ಸಾಗರದ ಕವಿ ಲಿಂಗಣ್ಣಯ್ಯನವರು ರಚಿಸಿದ್ದ ವೈದೀಕ ಧರ್ಮದ ಶಾಸ್ತ್ರೀಯ ವಿಚಾರ ಎಂಬ ಹಸ್ತ ಪ್ರತಿಯಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ ಎಂದು ಕೆಳದಿಯ ಶ್ರೀ ಗುಂಡಾಜೋಯಿಸ್ ರವರಿಂದ ತಿಳಿದು ಬರುತ್ತದೆ.) *ಮಾನವಿಕ ಕರ್ನಾಟಕ, ಸಂ.೨, ೧೯೭೩, ಪು.೬೧ - ಮೈಸೂರು ವಿಶ್ವವಿದ್ಯಾಲಯ.  
  ಕವಿ ಲಿಂಗಣ್ಣ ರಚಿಸಿದ ಕೆಲವು ಕೃತಿಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಡಲಾಗಿದೆ.
೧. ಕೆಳದಿ ನೃಪವಿಜಯ: (ಪುನರುಕ್ತಿಯಾಗುವುದರಿಂದ ಈ ಭಾಗ ಕೈಬಿಟ್ಟಿದೆ).
೨. ದಕ್ಷಾಧ್ವರ ವಿಜಯ: ಇದೊಂದು ಖಂಡ ಕಾವ್ಯ. ಸ್ಕಂದ ಪುರಾಣದಲ್ಲಿ ವ್ಯಾಸ ಮಹರ್ಷಿಯ ಶಿಷ್ಯನಾದ ಸೂತನು ಶೌನಕಾದಿ ಮುನಿಗಳನ್ನು ನೈಮಿಷಾರಣ್ಯದಲ್ಲಿ ಸಂಧಿಸಿದಾಗ ಮಹಾದೇವನ ಮಹಾತ್ಮೆಯನ್ನು ಕೇಳುತ್ತಾರೆ. ಆಗ ಅಲ್ಲಿ ದಕ್ಷನ ವಿಷಯ ಬರುತ್ತದೆ. ಬ್ರಹ್ಮಪುತ್ರನಾದ ದಕ್ಷನಿಗೆ ತಾನೇ ಶ್ರೇಷ್ಠನೆಂಬ ಗರ್ವ. ದಕ್ಷನು ಬ್ರಹ್ಮನ ಮಾತಿನಂತೆ ತನ್ನ ಮಗಳಾದ ಸತೀದೇವಿಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಿದನಂತೆ. ಮುಂದೊಮ್ಮೆ ಇಂದ್ರಾದಿಗಳೂ, ಮಹರ್ಷಿಗಳೂ ನೈಮಿಷಾರಣ್ಯಕ್ಕೆ ಬಂದಾಗ ಇವರನ್ನು ಸ್ತುತಿಸಿದರಂತೆ. ಆದರೆ ಶಿವನು ಅವರನ್ನು ಎದ್ದು ಗೌರವಿಸಲಿಲ್ಲ. ಇದರಿಂದ ಸಿಟ್ಟುಗೊಂಡ ದಕ್ಷನು ಶಿವನನ್ನು ಯಜ್ಞಬಾಹ್ಯನನ್ನಾಗಿ ಮಾಡಿರುವುದಾಗಿ ತಿಳಿಸುತ್ತಾನೆ. ತಿಳಿ ಹೇಳಲು ಮುಂದಾದ ನಂದಿಗೂ ಶಾಪವಿತ್ತು ಕನಖಲ ಎಂಬ ಕ್ಷೇತ್ರದಲ್ಲಿ ಯಜ್ಞಕ್ಕೆ ಮುಂದಾಗುತ್ತಾನೆ. ಇದು ಶಿವದ್ರೋಹವಾಗಿ ಪರಿಣಮಿಸಿ ನಡೆಸಿದ ಯಾಗವೇ ದಕ್ಷಾಧ್ವರವೆಂದು ಪುರಾಣ ಪ್ರಸಿದ್ಧವಾಗಿದೆ.
     ದಕ್ಷಾಧ್ವರ ವಿಜಯ ಕಾವ್ಯದ ಕೆಲವು ಸಾಲುಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದ್ದು, ಇವುಗಳು ಸಂಗೀತಾಸಕ್ತರಿಗೆ ಹೆಚ್ಚು ಪ್ರಿಯವಾಗಬಹುದು; ಸಂಗೀತ ಶಾಸ್ತ್ರದಲ್ಲೂ ಕವಿಗೆ ಇದ್ದ ಪ್ರೌಢಿಮೆಯನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ.
ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ| ಮುನಿಭಾವಿತೆ|
ಧರಣೀಧರ ವರಜಾತೆ|
ಬಾಲೆ ಸಕಲ ಜಗನ್ಮೋಹಿನಿ| ಸಿಂಹವಾಹಿನಿ|
ಲಾಲಿತ ಗಣಪ ಸೇನಾನಿ|| . .(ಭೈರವಿ ರಾಗ)
ಕಲ್ಯಾಣಿ ಕುರುವಾಣಿ| ಕಲ್ಯಾಣಂ ಕುರುವಾಣಿ ಸುವೇಣಿ|
ಕಲ್ಯಾಣಿ ವರದೇ ಬ್ರಹ್ಮಾಣಿ|| . .(ಬಿಲಾವರಿ ರಾಗ)
ಸಂತತಮೀಡೇ ಶಂಕರಂ| ಶಂಕರಂ| ಬ್ರಹ್ಮಾದಿದೇವ ಕಿಂಕರಂ|  ವಾರಿಜಭವ ಕಂಕರಂ| ಕುಂಡಲಿತ ದರ್ವೀಕರಂ| ಬಾಲಶೀತಾಂಶೂ ಶೇಖರಂ| ಸಂತತ ಮೀಡೇ ಶಂಕರಂ || (ಮೋಹನಕಲ್ಯಾಣಿ ರಾಗ)
ಲಿಂಗಂ ಭಜೇ ದಿವ್ಯ ಲಿಂಗಂ ಭಜೇ|ಮಹಾಲಿಂಗಂ ಭಜೇ ಶಿವಲಿಂಗಂ ಭಜೇ|| (ಪೂರ್ವಿ ಕಲ್ಯಾಣಿ ರಾಗ)
ಪಾಲಯಮಾಂ ಶಂಕರ| ಪೋಷಿತ ಸುರ|       ಜಾಲ ವ್ಯೋಮ ಗಂಗಾಧರಾ|| ನೀಲಲೋಹಿತ ಭೂರಲೋಲ ಗಾನ ವಿಲೋಲ|| ಕಾಲ ಕಾಲ ಕರುಣಾಲವಾಲ ಧೃತ| ಶೂಲ ನೀಲ ಫಾಲ ವಿಲೋಚನ|| (ತೋಡಿ ರಾಗ)
೩. ಶಿವಪೂಜಾ ದರ್ಪಣ:  ಇದೊಂದು ಖಂಡ ಕಾವ್ಯ. ೫೮೫ ಸಂಖ್ಯೆಯ ಕಂದ, ವೃತ್ತ, ವಚನ, ಗದ್ಯಗಳಿಂದ ಕೂಡಿದ ಕೃತಿ. ಶಿವಪೂಜೆ ಈ ಕಾವ್ಯದ ವಸ್ತು. ಭಕ್ತಿಮಾರ್ಗದ ವೈಶಿಷ್ಟ್ಯ ಇದರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ೧೭ನೇ ಶತಮಾನದಲ್ಲಿ ಪೂಜಾವಿಧಿಯನ್ನು ಕನ್ನಡದಲ್ಲಿ ನಿರೂಪಿಸಿದ ಪ್ರಥಮ ಪ್ರಯತ್ನ ಇದೆನ್ನಬಹುದು, (ಇತ್ತೀಚೆಗೆ ಹಿರೇಮಗಳೂರು ಕಣ್ಣನ್ ರವರೂ ಕೂಡಾ ಪೂಜಾ ಮಂತ್ರಗಳನ್ನು ಕನ್ನಡದಲ್ಲಿ ಅಳವಡಿಸಿರುವುದೂ ಉಲ್ಲೇಖಾರ್ಹ). ಶಿವಪೂಜಾ ದರ್ಪಣ ಆಸ್ತಿಕರ ಕೈಪಿಡಿ; ಶಿವಭಕ್ತರ ಆರಾಧನಾ ಗ್ತಂಥವೆಂದೂ ಬಣ್ಣಿಸಲಾಗಿದೆ.
     ಕವಿಯು ಪ್ರಥಮಾಶ್ವಾಸದಲ್ಲಿ ಶಿವ - ಪಾರ್ವತಿ ಯನ್ನು, ವಿಘ್ನೇಶ್ವರನನ್ನು, ಶಾರದೆಯನ್ನು, ವಾಲ್ಮೀಕಿ, ಕಾಳಿದಾಸ, ಪಂಪ, ರಾಘವಾಂಕರಂಥ ಮಹಾನ್ ಕವಿಗಳನ್ನು ಸ್ಮರಿಸುವ ಪರಿ ಅವರ ಉತ್ತಮ ಸಂಸ್ಕಾರ ವನ್ನು ಹಾಗೂ ದೇವರ ಮತ್ತು ವಿದ್ವಾಂಸರ ಮೇಲಿರುವ ಅಚಲ ಶ್ರದ್ಧಾಭಕ್ತಿಯ ದ್ಯೋತಕವಾಗಿದೆ. ಪೂಜೆಯ ವಿವಿಧ ಹಂತಗಳನ್ನು ಬಲು ಸುಂದರವಾಗಿ ನಿರೂಪಿಸ ಲಾಗಿದ್ದು, ಶಿವನಿಗೆ ನೈವೇದ್ಯವನರ್ಪಿಸುವಾಗ ಕೃತಿಯಲ್ಲಿ ಬರುವ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಕೊಟ್ಟೆಯ ಕಡುಬಂ ಗೋಧಿಯ|
ರೊಟ್ಟಿಯನಾ ಕಡಲೆಗಡುಬ ಪೊಯ್ಗಡುಬಮಂ ನುಂ
ಪಿಟ್ಟ ವೃತ್ತಾಸು ಮುಳುಕಗ|
ಳೊಟ್ಪೊಜೆಗಳನಳಕನೇತ್ರ ಭಕ್ಷಿಪುದೊಲವಿಂ||
ಹೆರೆದುಪ್ಪಂ ತಿಳಿದುಪ್ಪಂ|
ನೊರೆದುಪ್ಪಂ ಕಡಿದುಪ್ಪ ನೀರ್ಮಳಲ್ದುಪ್ಪಂ||
ನೆರೆಯುದಿರ್ದುಪ್ಪಮೆನಿಪ್ಪೀ|
ಪರಿಪರಿದುಪ್ಪಗಳ ಸವಿಯ ನೋಳ್ಪುದುಮೇಶಾ||

     ಶಿವಪೂಜಾ ದರ್ಪಣದ ಪ್ರತಿ ಅಧ್ಯಾಯದ ಅಂತ್ಯದಲ್ಲಿ ಕವಿ ತನ್ನ ಹೆಸರು ಹಾಗೂ ಗೋತ್ರ (ಹರಿತಸ)ಗಳನ್ನು ಹೇಳಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಈ ಕಾವ್ಯದ ಅಂತ್ಯದಲ್ಲಿ ಕವಿ ಬರೆದ ಮುಕ್ತಾಯ ಇಂತಿದೆ. (ಬಹುಶಃ ಶಿವಪೂಜಾದರ್ಪಣದಲ್ಲಿ ವಿವರವಾಗಿ ನಿರೂಪಿಸಿರುವ ಶಿವಪೂಜೆಯ ಪ್ರತಿ ಹೆಜ್ಜೆಗಳ ಸಾರಾಂಶವೇ ಇದರಲ್ಲಿದೆಯೆನ್ನಲಡ್ಡಿಯಿಲ್ಲ).
ಇದಖಿಲ ಸುರನರೋರಗ ನಿಕರ ಮಕುಟ ತಟ ಘಟಿತ ಮಾಣಿಕ್ಯ
ಮಯೂಖಮಂಜರೀಪುಂಜ ಶಬಲೀಕೃತ ಕನತ್ಕನಕ ಪಾದುಕಾ
ವಿರಾಜಮಾನ ಶ್ರೀಮತ್ಸಾಂಬ ಸದಾಶಿವ ಚರಣಾರವಿಂದ ದ್ವಂದ್ವ ಭಕ್ತಿರಸ ಮಕರಂದಮತ್ತ ಮಧುಕರಾಯಣಮಾನಸ ಭೂಸುರ ಕುಲಪ್ರದೀಪ ಹರಿತಸ ಗೋತ್ರೋದ್ಭವ ವೆಂಕಪಾತ್ಮಜ ಲಿಂಗಣಸೂರಿ ವಿರಚಿತ
ಶಿವಪೂಜಾದರ್ಪಣ ಪ್ರಬಂಧದೊಳ್ ರಂಗಪೂಜಾ ದೀಪಾರಾಧನ
ವಿವಿಧ ನೀರಾಜ(ನ) ವಸ್ತ್ರ (ಸಮ)ರ್ಪಣ ಮಂತ್ರಪುಷ್ಪ ಪ್ರದಕ್ಷಿಣ
ನಮಸ್ಕಾರ ಪ್ರಾರ್ಥನ ನಾನಾ ವಿಧ ವಿನಿಯೋಗ ಸೇವಾ ಸಮರ್ಪಣ
ಋಗ್ವೇದಾದಿ ವೇದ ವೇದಾಂಗ ಶಾಸ್ತ್ರಪುರಾಣಾಗಮ ತಂತ್ರೀ ಪಟಹಾದಿ ವಾದ್ಯ ಸುಷಿರ ವಾದ್ಯಾದಿ ವಾದುವಾದನ ಶ್ರವಣ ನೃತ್ಯ ವೃಷಭ ತುರಂಗಾರೋಹಣಾದಿ ನಾನಾ ವಿಧಯಾನೋತ್ಸವ ದೋಲಾರೋಹಣ ಖೇಲನ ಮಣಿಮಂಟಪ ಪ್ರ(ಧಾನ) ಮಂಗಲಾರತಿಕ ಸಮರ್ಪಣ ಕ್ಷೀರ ಪಾನಾತ್ಮಾರೋಪಣಾದಿ ಪೂಜೋಪಚಾರ ಸಮರ್ಪಣ ಕೃತಿ ಪ್ರಶಂಸಾತಚ್ಛ್ರವಣ ಫಲ ವಿವರಣಂ ಪಂಚಮಾಶ್ವಾಸಂ ಸಂಪೂರ್ಣಂ

     ಕವಿ ಲಿಂಗಣ್ಣ ಪಾರ್ವತಿ ಪರಿಣಯ ಮತ್ತು ಶಿವಕಲ್ಯಾಣ (ಯಕ್ಷಗಾನ) ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ.[ದಕ್ಷಾಧ್ವರ ವಿಜಯ (ಮೇಲೆ ಉಲ್ಲೇಖಿಸಿದ ಕೆಲವು ರಚನೆಗಳ ಸಂಪೂರ್ಣ ಸಾಹಿತ್ಯ ಇದರಲ್ಲಿದೆ) ಮತ್ತು ಶಿವಪೂಜಾ ದರ್ಪಣ ಕೃತಿಗಳನ್ನು ಕೆಳದಿಯ ಡಾ: ವೆಂಕಟೇಶ ಜೋಯಿಸರು ಸಂಪಾದಿಸಿ ೨೦೦೨ ರಲ್ಲಿ ಪ್ರಕಟಿಸಿದ್ದಾರೆ.]
     ಒಟ್ಟಿನಲ್ಲಿ ಹೇಳಬೇಕೆಂದರೆ ಕವಿ ಲಿಂಗಣ್ಣ ಓರ್ವ ಉತ್ತಮ ಇತಿಹಾಸಕಾರ, ಶ್ರೇಷ್ಠ ಕವಿ, ಸಂಗೀತಜ್ಞ ಮತ್ತು ಆಸ್ತಿಕ ಪುರುಷ. ಈತ ರಚಿಸಿರುವ ಅನೇಕ ಕೃತಿಗಳು ಸಂಶೋಧನೆಗೆ ಅರ್ಹವಾಗಿದ್ದು, ಚರಿತ್ರೆಯಲ್ಲಿ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದವರೆಲ್ಲರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಇನ್ನೂ ಉತ್ತಮವಾದ ಸಂಗತಿಗಳನ್ನು ಬೆಳಕಿಗೆ ತರಬಹುದಾಗಿದೆ. ಈತನ ನಂತರದ ಪೀಳಿಗೆಯವರಾದ ಸಾಗರದ ಕವಿ ಲಿಂಗಣ್ಣಯ್ಯ (ಶ್ರೇಷ್ಠ ಚಿತ್ರಕಾರ - ರಾಮಾಯಣ ಮತ್ತು ಭಾಗವತವನ್ನು ಚಿತ್ರದಲ್ಲಿ ನಿರೂಪಿಸಿದ್ದಾರೆ. ಚಿತ್ರ ರಚನೆ, ಮುದ್ರಣಕಲೆ, ಛಾಯಾಗ್ರಹಣ ಕಲೆ, ಮುಂತಾದ ವಿಷಯಗಳ ಬಗ್ಗೆ ಪುಸ್ತಕಗಳನ್ನು ರಚಿಸಿದ್ದಾರೆ). ಇವರ ಮೊಮ್ಮಗ ಕೆಳದಿ ಗುಂಡಾಜೋಯಿಸ್ (ಕೆಳದಿ ಮ್ಯೂಜಿಯಂ ಸಂಸ್ಥಾಪಕರು, ಸಂಶೋಧಕರು, ಅನೇಕ ಇತಿಹಾಸ ಕೃತಿಗಳ ರಚನೆಕಾರರು, ರಾಜ್ಯ ಪ್ರಶಸ್ತಿ ವಿಜೇತರು) ಮತ್ತು ಕವಿ ವಂಶದ ಇತರ ಅನೇಕರು ವಿವಿಧ ಕ್ಷೇತ್ರಗಳಲ್ಲಿ (ಸಂಗೀತ, ಸಾಹಿತ್ಯ, ಕಲೆ, ಇಂಜನಿಯರಿಂಗ್, ವೈದ್ಯಕೀಯ, ಆಧ್ಯಾತ್ಮಿಕ. ಇತ್ಯಾದಿ) ತಮ್ಮದೇ ಆದ ಅನುಪಮ ರೀತಿಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದು, ಕವಿ ಲಿಂಗಣ್ಣನ ಹಾದಿಯಲ್ಲಿಯೇ ಸಾಗುತ್ತಿರುವುದು ಬಹುಶಃ ಕವಿ ಲಿಂಗಣ್ಣನ ಮತ್ತು ಕುಲಾರಾಧ್ಯ ದೇವತೆಯಾದ ಕೊಲ್ಲೂರು ಮೂಕಾಂಬಿಕೆಯ ಕೃಪೆಯೆಂದೇ ಹೇಳಬಹುದು. 

   (ಲೇಖಕರ 'ಉತ್ಕೃಷ್ಟದೆಡೆಗೆ' ಪುಸ್ತಕದಿಂದ ಆಯ್ದ ಲೇಖನ)      
                 * * *
                         -ಪುಟಗಳು -5,6-
************************************************************************

ಕೆಳದಿ ಕವಿ ಮನೆತನದ ಬಂಧು-ಬಳಗದ ವಾರ್ಷಿಕ ಸಮ್ಮೇಳನಗಳ ವರದಿ
     ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು ಈಗ ಇದ್ದು ಹನ್ನೊಂದನೆಯ ಪೀಳಿಗೆ ಆಗಮನ ಸನ್ನಿಹಿತವಾಗಿದೆ. ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಈ ಮನೆತನದ ಕುಟುಂಬಗಳ ಸದಸ್ಯರುಗಳು ಹಲವೆಡೆ ಚದುರಿ ಹೋಗಿದ್ದು, ಅವರುಗಳನ್ನು ಗುರುತಿಸಿ ಒಟ್ಟುಗೂಡಿಸಿ ವರ್ಷಕ್ಕೆ ಒಮ್ಮೆಯಾದರೂ ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ ಕಾರ್ಯ ೨೦೦೭ ರಲ್ಲಿ ಚಾಲನೆ ಪಡೆಯಿತು. ಪರಸ್ಪರ ಪರಿಚಯವೇ ಇಲ್ಲದ, ಸಂಪರ್ಕ ಸಹ ಇಲ್ಲದಿದ್ದ ಬಂಧುಗಳನ್ನು  ಒಟ್ಟುಗೂಡಿಸಿ ೨೮-೦೧-೦೭ರಲ್ಲಿ ಕವಿ ಸುರೇಶರ ಮನೆಯಲ್ಲಿ ನಡೆದ ಪ್ರಥಮ ಸಮ್ಮೇಳನ ಅವಿಸ್ಮರಣೀಯ, ಅನುಪಮವಾಗಿದ್ದು, ಇದಕ್ಕಾಗಿ ಕವಿ ಸುರೇಶರವರು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ೨೫-೧೨-೨೦೦೭ರಲ್ಲಿ ಕೆಳದಿಯಲ್ಲಿ ದ್ವಿತೀಯ ವಾರ್ಷಿಕ ಸಮ್ಮೇಳನ ಕೆಳದಿ ರಾಮಮೂರ್ತಿ ಸಹೋದರರ ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಎರಡು ಸಮಾವೇಶಗಳ ಸಂಕ್ಷಿಪ್ತ ವರದಿ ಇಲ್ಲಿದೆ.
ಪ್ರಥಮ ವಾರ್ಷಿಕ ಸಮಾವೇಶ - ೨೮-೦೧-೨೦೦೭
     'ನಾವು - ನಮ್ಮವರು' ಶೀರ್ಷಿಕೆಯಲ್ಲಿ ಕವಿ ಸುರೇಶರ ಶಿವಮೊಗ್ಗದ ಸ್ವಗೃಹದಲ್ಲಿ ಕವಿ ಲಿಂಗಣ್ಣ ವೇದಿಕೆಯಲ್ಲಿ ಬೆಳಿಗ್ಗೆ  ೮-೦೦ ಗಂಟೆಗೆ ಆರಂಭವಾದ ಕಾರ್ಯಕ್ರಮಗಳು ಸಾಯಂಕಾಲ ೬-೦೦ ಗಂಟೆಯವರೆಗೆ ನಡೆದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿತೆಂದರೆ ಉತ್ಪ್ರೇಕ್ಷೆಯಲ್ಲ. ಸುಮಾರು ೧೫೦ ಸದಸ್ಯರುಗಳು ಪೂರ್ಣಕಾಲ ಸಕ್ರಿಯವಾಗಿ ಪಾಲ್ಗೊಂಡ ಈ ಸಮಾವೇಶ ಕೆಳಕಂಡ ಭಾವನಾತ್ಮಕ ಕ್ಷಣಗಳಿಗೆ. ಕಾರ್ಯಗಳಿಗೆ ಸಾಕ್ಷಿಯಾಯಿತು.
೧. ಅರುಣ ಪಾರಾಯಣ: ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಬಂಧುಗಳ ಮಿಲನವಾಗುತ್ತಿರುವ ನಿಮಿತ್ತ ಶ್ರೀ ಸಾ.ಕ. ಕೃಷ್ಣಮೂರ್ತಿ, ಡಾ. ಕೃಷ್ಣಜೋಯಿಸ್ ಮತ್ತು ಶ್ರೀ ರಾಮಾಜೋಯಿಸ್ ರವರು ಅರುಣಪಾರಾಯಣ ಮಾಡಿದರು.
೨. ಪ್ರಾಸ್ತಾವಿಕ: ಸಮಾವೇಶದ ಪ್ರಸ್ತುತತೆ, ಕಾರ್ಯಕ್ರಮಗಳ ವಿವರ ಕುರಿತು ಕ.ವೆಂ. ನಾಗರಾಜರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಗಣ್ಯರ ಪರಿಚಯ
೩. ಗಣ್ಯರು ಹಾಗೂ ಕುಟುಂಬದ ಹಿರಿಯರಿಂದ ಜ್ಯೋತಿ ಬೆಳಗುವುದು - ವೇದಘೋಷದೊಂದಿಗೆ
೪. ಬಂಧುಗಳ ಪರಸ್ಪರ ಪರಿಚಯ 
೫. ಪುಸ್ತಕ ಬಿಡುಗಡೆ: ಕವಿ ಸುರೇಶ ಸಂಪಾದಿಸಿದ 'ಹಳೆ ಬೇರು - ಹೊಸ ಚಿಗುರು' ಪುಸ್ತಕ ಬಿಡುಗಡೆ ಮಾಡಿದ ಶ್ರೀ ಕೂಡಲಿ ಜಗನ್ನಾಥ ಶಾಸ್ತ್ರಿಗಳಿಂದ ಸ್ತುತ್ಯಾರ್ಹ ಕಾರ್ಯದ ಪ್ರಶಂಸೆ
೬. ವಸ್ತು ಪ್ರದರ್ಶನ: ಕೆಳದಿ ಗುಂಡಾ ಜೋಯಿಸರು ಉದ್ಘಾಟಿಸಿದ ಕವಿ ಮನೆತನದ ಹಿಂದಿನ ಮತ್ತು ಈಗಿನ ಪೀಳಿಗೆಗಳ ಸಾಧನೆ ಪರಿಚಯಿಸುವ ಪುಟ್ಟ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪರಸ್ಪರ ಅಂತಃಕರಣ ಮತ್ತು ನಿರಂತರ ಸಂಪರ್ಕದ ಬಗ್ಗೆ ಗುಂಡಾಜೋಯಿಸರ ಮಾತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
೭. ಸನ್ಮಾನ: 'ಹಳೇ ಬೇರು ಹೊಸಚಿಗುರು' ಪುಸ್ತಕ ರಚನೆಗೆ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕವಿ ಕುಟುಂಬಗಳ ಹಿರಿಯರಾದ ಶ್ರೀಯುತರಾದ ಸಾ.ಕ.ಕೃಷ್ಣಮೂರ್ತಿ, ರಾಮರಾವ್, ನಾಗರಾಜಭಟ್ಟ, ರಾಮಾಜೋಯಿಸ್, ವಿನೋದಮ್ಮ, ಸೀತಾಲಕ್ಷ್ಮಮ್ಮ, ಸುಬ್ಬಲಕ್ಷ್ಮಮ್ಮ, ಪದ್ಮಾವತಮ್ಮ, ಗಿರಿಜಮ್ಮ, ರಾಮಮೂರ್ತಿ, ಹರಿಹರದ ರಾಮರಾವ್ ಮೊದಲಾದವರನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು.
     ಕವಿ ಮನೆತನದ ಸದಸ್ಯರ ಪೈಕಿ ಅತ್ಯಂತ ಹಿರಿಯರಾದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳನ್ನು ಅವರ ಮಕ್ಕಳು ಸನ್ಮಾನಿಸಿ ಗೌರವ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಸಲ್ಲಿಸಿದ್ದು ತುಂಬಾ ಭಾವನಾತ್ಮಕ ವಾಗಿತ್ತು. ಸನ್ಮಾನಿತರುಗಳು ಹಾಗೂ ಗಣ್ಯರು ಹೃದಯ ಮುಟ್ಟುವ ಮಾತುಗಳನ್ನಾಡಿದರು.
     ೮. ವಿಚಾರ ವಿನಿಮಯ: ಮುಂದಿನ ಸಮಾವೇಶ, ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಲಾಯಿತು.     ಕಾರ್ಯಕ್ರಮದಲ್ಲಿ ಶ್ರೀಮತಿ ಕಾಶಿಬಾಯಿ, ಅಂಬಿಕಾ, ದೀಪಕ್, ಮುಂತಾದವರು ತಮ್ಮ ಸುಮಧುರ ಗಾಯನದಿಂದ ರಂಜನೆ ನೀಡಿದರು. ಒಳ್ಳೆಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.  ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ ರಂದು ಇದೇ ರೀತಿ ಒಟ್ಟಿಗೆ ಸೇರಬೇಕೆಂದು ನಿರ್ಧರಿಸಲಾಯಿತು. ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು.

ದ್ವಿತೀಯ ವಾರ್ಷಿಕ ಸಮಾವೇಶ - ೨೫-೧೨-೨೦೦೭
     ಕೆಳದಿಯ ಶ್ರೀ ರಾಮಮೂರ್ತಿ ಮತ್ತು ಸಹೋದರರ ಪ್ರಾಯೋಜಕತ್ವದಲ್ಲಿ ಕೆಳದಿಯಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಎರಡನೆಯ ಸಮಾವೇಶ ಸಹ ಅವಿಸ್ಮರಣೀಯ ಅನುಭವವನ್ನು ಭಾಗವಹಿಸಿದ ಎಲ್ಲ ಬಂಧುಗಳಿಗೆ ನೀಡಿತು. ಬಂಧುಗಳು ಸಾಕ್ಷೀಕರಿಸಿದ ನಡಾವಳಿ ಹೀಗಿತ್ತು:
೧. ಶ್ರೀ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭ
೨. ಶ್ರದ್ಧಾಂಜಲಿ: ಕಳೆದ ಸಾಲಿನಲ್ಲಿ ನಿಧನರಾದ ಶ್ರೀ ರಾಮಾಜೋಯಿಸ್, ನಿವೃತ್ತ ತಹಸೀಲ್ದಾರರು (ಶ್ರೀ ಗುಂಡಾಜೋಯಿಸರ ಸಹೋದರ) ಮತ್ತು ಶ್ರೀಮತಿ ರತ್ನಮ್ಮ ಸುಂದರರಾವ್ (ಶ್ರೀ ದಿ. ಸಾ.ಕ. ಲಿಂಗಣ್ಣಯ್ಯನವರ ಮಗಳು, ಖ್ಯಾತ ಸಾಹಿತಿ ದಿ. ಶ್ರೀ ಬ.ನ. ಸುಂದರರಾವ್ ರವರ ಪತ್ನಿ) ರವರಿಗೆ ಮೌನ ಆಚರಿಸಿ ಸ್ಮರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
೩. ಕವಿ ಮನೆತನದ ಹಿರಿಯ ಸಾಧಕ ಸಾಗರದ ಕವಿ ಲಿಂಗಣ್ಣಯ್ಯರ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ಶ್ರೀ ಕವಿ ವೆಂ. ಸುರೇಶರವರು ರಚಿಸಿದ್ದು 'ಕರ್ಮಯೋಗಿ ಕಲಾವಲ್ಲಭ ಎಸ್.ಕೆ. ಲಿಂಗಣ್ಣಯ್ಯ' ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಸೂರ್ಯನಾರಾಯಣರಾವ್‌ರವರು ಕವಿ ಮನೆತನದ ಹಿರಿಮೆಯನ್ನು ಎತ್ತಿಹಿಡಿದ ಸಾಧಕರ ಪರಿಚಯವನ್ನು ಮಾಡಿಕೊಡುವ ಈ ಕೆಲಸ ಸ್ತುತ್ಯಾರ್ಹವೆಂದರು.
೪. ಸ್ವರಚಿತ ಕವನಗಳನ್ನು ರಚಿಸಿ ಹಾಡಿದ ಅನೇಕ ಬಂಧುಗಳು ಸಮಾವೇಶಕ್ಕೆ ಅರ್ಥ ನೀಡಿದರು.
೫. ಆಗಮಿಸಿದ್ದ ಗಣ್ಯರು, ಕುಟುಂಬಗಳ ಹಿರಿಯರು ಸುಯೋಗ್ಯ ಮಾರ್ಗದರ್ಶನ ನೀಡಿದರು.
೬. ಶ್ರೀ ಸಾ.ಕ. ಕೃಷ್ಣಮೂರ್ತಿರವರ ಅಧ್ಯಕ್ಷತೆಯಲ್ಲಿ ಶ್ರೀಯುತರಾದ ಕ.ವೆಂ. ನಾಗರಾಜ್, ಕೆ. ಶ್ರೀಕಂಠ, ಬಿ.ಎನ್. ತ್ಯಾಗರಾಜ್, ಸಾ.ಕ. ಗೋಪಿನಾಥ್, ರಾಮಮೂರ್ತಿ. ಕೆ.ಎನ್. ಶಿವಪ್ರಸಾದ್, ಶ್ರೀಮತಿಯರಾದ ಕೆ.ವಿ. ಲಲಿತಾಂಬ, ಕಾಶೀಬಾಯಿ ಯವರುಗಳು ಒಳಗೊಂಡಂತೆ ಕಾರ್ಯಕಾರಿ ಸಮಿತಿ ರಚನೆಗೆ ಒಪ್ಪಲಾಯಿತು.
೭. ಕವಿ ಕುಟುಂಬದ ಪತ್ರಿಕೆಯೊಂದನ್ನು ಹೊರತರಲು ನಿರ್ಧರಿಸಿ ಶ್ರೀ ಕ.ವೆಂ. ನಾಗರಾಜ್ ಸಂಪಾದಕರು, ಶ್ರೀ ಕವಿ ಸುರೇಶ ಸಹ ಸಂಪಾದಕರಾಗಿರುವಂತೆ ಶ್ರೀಯುತರಾದ ಸಾ.ಕ.ಗೋಪಿನಾಥ್, ಶಿವಪ್ರಸಾದ್, ಎಂ.ಎಸ್. ನಾಗೇಂದ್ರ, ಕೆ. ವೆಂಕಟೇಶ ಜೋಯಿಸ್, ಶ್ರೀಕಂಠ ಮತ್ತು ಶ್ರೀಮತಿ ಶೈಲಜಾ ಪ್ರಭಾಕರ್ ರವರುಗಳು ಒಳಗೊಂಡಂತೆ ಪತ್ರಿಕಾ ಸಮಿತಿ ರಚನೆಗೆ ಒಪ್ಪಲಾಯಿತು.
ಉತ್ತಮ ಉಪಾಹಾರ, ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಧುರ ನೆನಪುಗಳೊಂದಿಗೆ ಬಂಧುಗಳು ವಿದಾಯ ಹೇಳಿದರು.
                                    * * * * *  * * * * *

ಸಂದೇಶ   

    ಕೆಳದಿ ಅರಸರ ಸತ್ಯನಿಷ್ಟ ಆಳ್ವಿಕೆಯಿಂದ ಐತಿಹಾಸಿಕ ಮನ್ನಣೆಯನ್ನು ಪಡೆದಿರುವ ಕೆಳದಿಯು, ಕವಿಲಿಂಗಣ್ಣ, ಕವಿ ವೆಂಕಣ್ಣ, ಕವಿ ಕೃಷ್ಣಪ್ಪ ಮೊದಲಾದ ಕವಿಗಳಿಂದಾಗಿ ಕವಿಗಳ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿದೆ, ಈ ಕವಿ ಕುಟುಂಬದವರು ಹಲವೆಡೆ ಹರಡಿ ಹಂಚಿಹೋಗಿರುವ ಈ ಕವಿ ಮನೆತನದವರನ್ನು ಒಂದೆಡೆ ಸೇರಿಸಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದು ಅಭಿನಂದನೀಯ.      ಕವಿ ಕುಟುಂಬಗಳ ಹಿಂದಿನ ಸಾಧಕರುಗಳ ಹಾಗೂ ಅವರ ಕೃತಿಗಳ ಪರಿಚಯ ಮಾಡಿಕೊಡುವ ಹಾಗು ಉತ್ತಮ ಸಾಧನೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮುಖ್ಯ ಉದ್ದೇಶದಿಂದ ಕವಿಕಿರಣ ಎಂಬ ಪತ್ರಿಕೆಯನ್ನು ಪ್ರಾರಂಭಿಸುವ ತಮ್ಮ ಉದ್ದೇಶ ಸಾರ್ಥಕವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.   
                                             - ಡಾ. ನಲ್ಲೂರು ಪ್ರಸಾದ್ ಆರ್.ಕೆ.  
                                                        ಅಧ್ಯಕ್ಷರು,
                                           ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 
***********************

 ಅಭಿನಂದನೆ

     ಬೆಂಗಳೂರಿನ ಶ್ರೀ ಎಂ.ಎಸ್. ನಾಗೇಂದ್ರ ಮತ್ತು ಕುಟುಂಬ ವರ್ಗದವರು 28-12-2008ರಂದು ಬೆಂಗಳೂರಿನಲ್ಲಿ ನಡೆಯುವ ತೃತೀಯ ವಾರ್ಷಿಕ ಸಮಾವೇಶದ ಆಯೋಜಕರಾಗಿದ್ದು ಅವರಿಗೆ ಕವಿಮನೆತನದ ಬಂಧು-ಬಳಗದವರ ಅಭಿನಂದನೆಗಳು.
**************************
 -ಪುಟಗಳು - 7,8-
***************************************

ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ

ಗದ್ಯಾನುವಾದ: ಕೆ. ಗುಂಡಾಜೋಯಿಸ್

ಉಪೋದ್ಘಾತ:     ಕರ್ನಾಟಕದ ಹಲವಾರು ಸಂಸ್ಥಾನಗಳಲ್ಲಿ ಕೆಳದಿಯು ಪ್ರಮುಖವಾದುದಾಗಿದೆ. ಕ್ರಿ.ಶ.೧೫ನೆಯ ಶತಮಾನದಲ್ಲಿ ಜನಿಸಿದ ಈ ಪಾಳೆಯಪಟ್ಟು ೨೫೦ ವರ್ಷಗಳವರೆಗೂ ಬಲಿಷ್ಠವಾಗಿ ಆಳಿದ ರಾಜ್ಯವೆನಿಸಿತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕೆಳದಿಯು ಹಿಂದೂ ತತ್ವ ಹಾಗೂ ಸಂಸ್ಕೃತಿಯ ರಕ್ಷಣೆಯ ಸ್ಥಾನವನ್ನು ವಹಿಸಿಕೊಂಡಿತು. ಈ ರಾಜ್ಯವು ತನ್ನ ಉನ್ನತಿಯ ಕಾಲದಲ್ಲಿ ಮೈಸೂರಿಗಿಂತಲೂ ಅಧಿಕ ವಿಸ್ತಾರವನ್ನು ಒಳಗೊಂಡ ಸಂಪದ್ಭರಿತ ರಾಜ್ಯವಾಗಿ ಮೆರೆಯಿತು.
     ಕೆಳದಿ ಅರಸರ ವಂಶಪರಂಪರೆಯನ್ನು ಕುರಿತು ರಚಿಸಿದ ಕೆಳದಿ ನೃಪವಿಜಯವು ಸಮಕಾಲೀನ ಕೃತಿಗಳಲ್ಲಿ ಶ್ರೇಷ್ಠ ಐತಿಹಾಸಿಕ ಆಕರ ಗ್ರಂಥವೆನಿಸಿದೆ.
     ಕೆಳದಿ ನಾಯಕರ ಚರಿತ್ರೆಯನ್ನು ಯಥಾವತ್ತಾಗಿ ನಿರೂಪಿಸುವ ಕೆಳದಿ ನೃಪವಿಜಯವು ೧೨ ಆಶ್ವಾಸಗಳುಳ್ಳ ಚಂಪೂಗ್ರಂಥ.
ಇದು ಕಂಠೀರವ ನರಸರಾಜ ವಿಜಯ ಹಾಗೂ ಚಿಕ್ಕದೇವರಾಜ ವಂಶಾವಳಿಗಳಂತೆ ಐತಿಹಾಸಿಕ ಪ್ರಾಮುಖ್ಯವುಳ್ಳದ್ದು.
     ಕ್ರಿ.ಶ. ೧೮ನೆಯ ಶತಮಾನದಲ್ಲಿ ಈ ಕೃತಿಯನ್ನು ರಚಿಸಿದ ಕೆಳದಿ ಅರಸರ ಆಸ್ಥಾನಕವಿ ಲಿಂಗಣ್ಣ, ಆಸ್ಥಾನದಲ್ಲಿದ್ದುಕೊಂಡು ರಚನೆ ಮಾಡಿರುವುದರಿಂದ ಈ ಐತಿಹಾಸಿಕ ಕೃತಿಯು ಇತಿಹಾಸಜ್ಞರಿಗೆ ಮಹತ್ವಪೂರ್ಣ ಆಕರ ಗ್ರಂಥವೆನಿಸಿದೆ.
     ಕಾವ್ಯಾಂಶಕ್ಕಿಂತಲೂ ಚಾರಿತ್ರಿಕಾಂಶಗಳೇ ಹೆಚ್ಚಾಗಿರುವ ಈ ಕೃತಿಯಲ್ಲಿ ಕವಿಯು ಕೆಳದಿ ಅರಸರ ಸಮಗ್ರ ಪರಿಚಯವನ್ನು ನೀಡಲು ಪ್ರಯತ್ನಿಸಿ, ಪ್ರಾಸಂಗಿಕವಾಗಿ ಚಿತ್ರದುರ್ಗದ ನಾಯಕರು, ಬೇಲೂರ ನಾಯಕರು, ವಿಜಯನಗರದ ಚಕ್ರವರ್ತಿಗಳು, ಷಾಹಿ ರಾಜರು, ಮೈಸೂರು ಒಡೆಯರು, ತರಿಕೆರೆಯ ನಾಯಕರು, ದೆಹಲಿಯ ಬಾದಷಹರು, ಅಹಮದ್ ನಗರದ ನಿಜಾಂಷಹನೇ ಮುಂತಾದವರು, ಬಿಜಾಪುರದವರು, ಸೋದೆ, ಗೇರುಸೊಪ್ಪ, ಬಿಳಗಿ ಇತ್ಯಾದಿ ಅರಸರ ಚರಿತ್ರೆಗಳು, ಶ್ರೀ ಶೃಂಗೇರಿ ಮಠದ ಪರಂಪರೆಯ ಗುರುಗಳು ಮುಂತಾದ ಚರಿತ್ರೆಗಳನ್ನು ಹಾಸುಹೊಕ್ಕಾಗಿ ಹೆಣೆದಿದ್ದಾನೆ. ಶಾಸನಾದಿ ಸಂಶೋಧನೆಗಳಲ್ಲಿ ಹಾಗೂ ಚಾರಿತ್ರಿಕಾಂಶ ಅಧ್ಯಯನದ ಉಲ್ಲೇಖಗಳಲ್ಲಿ ಇವುಗಳನ್ನು ವಿವೇಚಿಸಲಾಗಿ ಈತನು ಹೇಳಿದ ಐತಿಹಾಸಿಕ ಸಂಗತಿಯು ಸಾಕ್ಷೀಭೂತವಾಗಿ ಸತ್ಯವೆಂದು ಹೇಳುವಂತಿವೆ.
     ಕೆಳದಿ ನೃಪವಿಜಯದಂತೆ ಕೆಳದಿನಾಯಕ ಬಸವರಾಜನಿಂದ ರಚಿಸಲ್ಪಟ್ಟ ಶಿವತತ್ವರತ್ನಾಕರವು ಸಂಸ್ಕೃತದಲ್ಲಿ ವಿಶ್ವಕೋಶವೆನಿಸಿದೆ. ಕೆಳದಿ ಅರಸರ ಚರಿತ್ರೆಯನ್ನು ಪ್ರಬುದ್ಧಾತ್ಮಕವಾಗಿ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಚಿಸಿರುವ ಕೃತಿಯಲ್ಲಿ ಶಿವತತ್ವರತ್ನಾಕರಕ್ಕಿಂತ ಕೆಳದಿ ನೃಪವಿಜಯವೇ ಅಗ್ರಮಾನ್ಯತೆ ಪಡೆದಿದೆ.
     ಕೆಳದಿ ಸರಕಾರದ ವರದಿಯೋಪಾದಿಯಲ್ಲಿ ಚಾರಿತ್ರಿಕಾಂಶಗಳನ್ನೊಳಗೊಂಡು ಪ್ರಾಮಾಣಿಕ ಗ್ರಂಥವೆನಿಸಿದ ಈ ಕೃತಿ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತ ಕೊಡುಗೆಯಲ್ಲದೆ ಇಡೀ ಭಾರತದ ಇತಿಹಾಸಕ್ಕೆ ಮಾರ್ಗದರ್ಶನ ನೀಡುವ ಕೈದೀವಿಗೆಯ ಕೃತಿಯಾಗಿದೆ.
          
ತಿಳಿಯಲ್ಕೀ ಕೃತಿನಾಮಂ
           ಕೆಳದೀನೃಪವಿಜಯಮೆಂದಿದಕ್ಕಧಿನಾಥಂ
           ಕೆಳದಿಪ ರಾಮೇಶ್ವರನಿದ

           ನೊಲಿದುಸುರ್ದಂ ವೆಂಕಪಾತ್ಮಜಂ ಲಿಂಗಬುಧಂ

            ಪ್ರಾಕೃತ ಸಂಸ್ಕೃತ ಮೃದು ಭಾ
            ಷಾಕವನದಿನಧಿಕರಮ್ಯಮಾಗಿರ್ಪುದರಿಂ
            ಶ್ರೀಕೆಳದಿ ನೃಪವಿಜಯಮೆನಿ
            ಪೀ ಕಾವ್ಯಂ ಸೇವ್ಯಮೆನಿಸಿ ಶೋಭಿಸುತಿರ್ಕಂ
         

                     
ಪ್ರಥಮಾಶ್ವಾಸಂ
                
  ಈ ಕೃತಿಗಾದಿಯಾವುದೆನಲುಜ್ವಲ ತುಂಗತರಂಗಸಂಚರ
   ದ್ಭೀಕರಮೀನ ಕರ್ಕಟಕೂರ್ಮ ಕನತ್ಸಲಿಲೇಭನಕ್ರದ
   ರ್ವೀಕರ ಶಿಂಶುಮಾರ ಮುಖವಾಶ್ಚರಸಂಚಯಚಾಲನೋಚ್ಚಲ
   ಚ್ಛೀಕರ ಫೇನ ಕಂಬು ಕುಲರತ್ನಗಳಿಂದೆಸೆದತ್ತು ಸಾಗರಂ              ೧

        ಈ ಕೃತಿಗೆ ಮೂಲ ಯಾವುದು ಎನ್ನುವ ಪ್ರಶ್ನೆಗೆ ಉತ್ತರವಾಗಿ ಸಮುದ್ರವು ಶೋಭಿಸುತ್ತಿದೆ. ಆ ಸಮುದ್ರವು ಎತ್ತರವಾಗಿ ಹೊಳೆಯುವ ಅಲೆಗಳ ಮೇಲೆ ಸಂಚರಿಸುವ ಭಯಂಕರವಾದ ಮೀನುಗಳು, ಏಡಿಗಳು, ಆಮೆಗಳು, ನೀರಾನೆಗಳು, ಮೊಸಳೆಗಳು, ಹಾವುಗಳು ಸಮುದ್ರವ್ಯಾಘ್ರಿ ಮುಂತಾದ ಜಲಚರಗಳ ಸಮೂಹದ ಓಡಾಟದಿಂದ ಹಾರುವ ತುಂತುರು ಹನಿಗಳಿಂದಲೂ, ನೊರೆಗಳಿಂದಲೂ, ಶಂಖಗಳಿಂದಲೂ, ರತ್ನಗಳಿಂದಲೂ ಮೆರೆಯುತ್ತಿತ್ತು.
         ಹರನ ನಿಷಂಗವಚ್ಯುತನ ಪಾಸು ಜಲೇಶನ ರಾಜಮಂದಿರಂ
         ನಿರುಪಮಮಪ್ಪ ಲಕ್ಷ್ಮಿಯ ತವರ್ಮನೆ ಚಂದ್ರನ ಜನ್ಮಭೂಮಿ ಭೂ
         ಧರವರಪುತ್ರನುದ್ಘಕವಚಂ ಬಡಬಾನಲಪಾನಪಾತ್ರಮ
      ತ್ಯುರುತರುಮಪ್ಪ ಸನ್ಮಣಿಗಳಾಗರಮೊಪ್ಪಿದುದೈದೆ ಸಾಗರಂ         ೨

     ಆ ಸಮುದ್ರವು ಶಿವನ ಬತ್ತಳಿಕೆ, ವಿಷ್ಣುವಿನ ಹಾಸಿಗೆ, ವರುಣನ ಅರಮನೆ, ಲಕ್ಷ್ಮೀದೇವಿಯ ತವರುಮನೆ, ಚಂದ್ರನ ಜನ್ಮಸ್ಥಾನ, ಹಿಮವಂತನ ಮಗ ಮೈನಾಕನ ರಕ್ಷಾಕವಚ, ವಡಬಾಗ್ನಿಯ ಕುಡಿಯುವ ಜಲಪಾತ್ರೆ ಮತ್ತು ಶ್ರೇಷ್ಠವಾದ ಒಳ್ಳೆಯ ರತ್ನಗಳ ಭಂಡಾರವಾಗಿ ಶೋಭಿಸುತ್ತಿದೆ.
            
ವಳಿತೋಳ್ ಸುಳಿ ಚಕ್ರಂ ನೊರೆ
             ಯೆಳೆನಗೆ ಬೊಬ್ಬುಳಿಗಳುದರದೊಳಗಣಜಾಂಡಾ
             ವಳಿ ನೀರ್ತನುರುಚಿ ಬಡಬಾ
             ನಲನಂಬರಮಾಗಲಬುಧಿ ಹರಿಯವೊಲೆಸೆಗುಂ                       ೩
 

    ಸಮುದ್ರವು ಹರಿಯ ಹಾಗೆ ಶೋಭಿಸುತ್ತದೆ. ಅಲೆಗಳೇ ತೋಳುಗಳು; ಸುಳಿಯೇ ಚಕ್ರ, ನೊರೆಯೇ ಮಂದಹಾಸ, ನೀರುಗುಳ್ಳೆಗಳೇ ಹೊಟ್ಟೆಯೊಳಗಿನ ಬ್ರಹ್ಮಾಂಡ ಸಮೂಹ, ನೀರೇ ದೇಹದ ಕಾಂತಿ, ಬಡಬಾಗ್ನಿಯೇ ಪೀತಾಂಬರ. ಹೀಗೆ ಹರಿಯ ಲಕ್ಷಣಗಳು ಸಮುದ್ರದಲ್ಲಿವೆ.
    
ವ:: ಮತ್ತಮದಲ್ಲದಾ ಮಹಾರ್ಣವಂ ಸಾರ್ವಭೌಮವಿಭವದಂತಪರಿಮಿತ ವಾಹಿನೀ ಸಂಗತಮುಂ, ನಂದಗೋಕುಲದಂತೆ ಕಂಸಾರಾತಿರಮಣೀಯಮುಂ ವೈನತೇಯನಂತೆ ವಿಲಸದ್ವಿಷ್ಣು ಪದಾವಲಂಬಿಯುಂ, ವಸಂತಸಮಯದಂತುಜ್ವಲತ್ಕಳಿಕಾಪ್ರತಾನ ಶೋಭಿತಮುಂ, ಜ್ಯೋತಿಶ್ಚಕ್ರದಂತೆ ಮನೋಹರಮೀನ ಮಿಥುನ ಕರ್ಕಾಟಕ ರಾಶಿಸಮಾವೃತಂ, ಮಾರ್ತಾಂಡನಂತುಜ್ವಲಾಬ್ಜ ಕದಂಬ ಸಮುಚ್ಛ್ರಯಕಾರಿಯುಂ, ಯೋಗಿಜನದಂತೆ ಮುಕ್ತಾಮಯಮುಂ ಕಂದರ್ಪನಂತನವರತಮನುಪಮಾಗಣ್ಯ ಲಾವಣ್ಯ ಸ್ವಭಾವಮುಂ, ಶಶಾಂಕೋದಯದಂತೆ ಕುವಲಯೋತ್ಸವಕಾರಿಯುಮೆನಿಸಿ ವಿಭ್ರಾಜಿಸುತ್ತಿರ್ದುದಂತುಮಲ್ಲದೆಯುಂ    
     ಇಷ್ಟು ಮಾತ್ರವಲ್ಲದೆ ಆ ದೊಡ್ಡ ಸಮುದ್ರವು ಚಕ್ರವರ್ತಿಯ ವೈಭವದ ಹಾಗೆ ಅಸಂಖ್ಯಾತವಾಹಿನಿ (ನದಿ ಮತ್ತು ಸೈನ್ಯ) ಗಳಿಂದ ಕೂಡಿದೆ; ನಂದಗೋಕುಲದ ಹಾಗೆ ಕಂಸವಿರೋಧಿ (ವಿಷ್ಣು ಮತ್ತು ಕೃಷ್ಣ) ಇರುವುದರಿಂದ ಸುಂದರವಾಗಿದೆ. ಗರುಡನ ಹಾಗೆ ಮೆರೆಯುವ ವಿಷ್ಣುಪದವನ್ನು ಹೊತ್ತುಕೊಂಡಿದೆ. ವಸಂತಕಾಲದ ಹಾಗೆ ಪ್ರಕಾಶಿಸುವ ಕಲಿಕೆಗಳಿಂದ (ಮತ್ತು ಮೊಗ್ಗು) ಶೋಭಿಸುತ್ತದೆ. ಜ್ಯೋತಿಷ್ಚಕ್ರದ ಹಾಗೆ ಮನೋಹರವಾದ ಮೀನ-ಮಿಥುನ-ಕರ್ಕಾಟಕ ರಾಶಿಗಳಿಂದ (ಮೀನುಗಳ ಜೋಡಿಗಳು ಏಡಿಗಳ ಗುಂಪು ಮತ್ತು ಮೀನಾದಿ ರಾಶಿಗಳು) ಆವರಿಸಲ್ಪಟ್ಟಿದೆ. ಸೂರ್ಯನ ಹಾಗೆ ಹೊಳೆಯುವ ಅಬ್ಜ (ಚಂದ್ರ ಮತ್ತು ತಾವರೆ) ಸಮೂಹದ ಉನ್ನತಿಯನ್ನು ಮಾಡುತ್ತವೆ. ಯೋಗಿಗಳ ಹಾಗೆ ಮುಕ್ತಾಮಯವಾಗಿದೆ (ಮುತ್ತಿನಿಂದ ಕೂಡಿದೆ; ರೋಗವಿಲ್ಲದಾಗಿದೆ) ಮನ್ಮಥನ ಹಾಗೆ ಯಾವಾಗಲೂ ಅಸಮಾನವೆಂದು ಲೆಕ್ಕಿಸಲ್ಪಡುವ ಲಾವಣ್ಯ (ಸೌಂದರ್ಯ ಮತ್ತು ಉಪ್ಪು) ಸ್ವಭಾವವುಳ್ಳದ್ದಾಗಿದೆ. ಚಂದ್ರೋದಯದ ಹಾಗೆ ಕುವಲಯಕ್ಕೆ (ಭೂಮಂಡಲಕ್ಕೆ ಮತ್ತು ನೈದಿಲೆಗೆ) ಆನಂದವನ್ನು ಉಂಟು ಮಾಡುತ್ತಾ ಶೋಭಿಸುತ್ತದೆ. ಅಲ್ಲದೆ -                          

                     ತಿಳಿಯಲ್ಕತಿ ಚಂಚಲೆ ಮಗ
                     ಳಳಿಯಂ ಪೂಗಣ್ಣನಾತ್ಮಜಂ ಕ್ಷಯಿ ಮೊಮ್ಮಂ
                    ಒಡಲಿಲಿಯೆನುತಂ ಚಿಂತಿಸಿ
                    ಸಲೆ ಸುಯ್ಯವೊಲಾದುದಬ್ಧಿಯದ್ಭುತರಾವಂ                  ೪

     ಸಮುದ್ರ ರಾಜನ ಮಗಳು ಲಕ್ಷ್ಮಿ ಅತ್ಯಂತ ಚಂಚಲೆ ಎನಿಸಿದವಳು; ಅಳಿಯನಾದ ವಿಷ್ಣುವು ಹೂಗಣ್ಣಿನವನು (ತಾವರೆ ಯಂತ ಕಣ್ಣುಳ್ಳವನು), ಮಗನಾದ ಚಂದ್ರ ಕ್ಷಯ ರೋಗಿ, ಮೊಮ್ಮಗ ಮನ್ಮಥನಿಗೆ ದೇಹವೇ ಇಲ್ಲ (ಅನಂಗ), ಹೀಗಾಯಿತೆಂದು ಚಿಂತಿಸುತ್ತಾ ನಿಟ್ಟುಸಿರು ಬಿಡುವ ರೀತಿಯಲ್ಲಿ ಸಮುದ್ರದ ಅದ್ಭುತವಾದ ಗರ್ಜನೆಯಿದೆ.
               ಅಮರರ್ಗಮೃತಾಶನರೆಂ
               ದುಮೆಯಾಣ್ಯಗೆ ನೀಲಕಂಠನೆಂದಚ್ಯುತಗಂ
               ಕ್ರಮದಿಂ ಕಮಲಾಪತಿಯೆಂ
               ದಮರ್ದಿರೆ ಪೆಸರಿತ್ತ ಜಲಧಿಯೇಂ ರಂಜಿಸಿತೋ             ೫
   

  ಈ ಸಮುದ್ರದ ದೆಸೆಯಿಂದ ದೇವತೆಗಳು ಅಮೃತವನ್ನುಂಡು ಅಮರರಾದರು. ಶಿವನಿಗೆ (ಇದರಲ್ಲಿ ಹುಟ್ಟಿದ ವಿಷವನ್ನು ಕುಡಿದಿದ್ದರಿಂದ) ನೀಲಕಂಠನೆಂಬ ಹೆಸರುಂಟಾಯಿತು, ವಿಷ್ಣುವಿಗೆ (ಮಗಳಾದ ಲಕ್ಷ್ಮಿಯನ್ನು ಕೊಟ್ಟುದರಿಂದ) ಲಕ್ಷ್ಮೀಪತಿಯೆಂದು ಹೆಸರಾಯಿತು. ಹೀಗೆ ದೇವತೆಗಳಿಗೂ ಹರಿಹರರಿಗೂ ಒಳ್ಳೆಯ ಹೆಸರನ್ನು ಕೊಟ್ಟು ಸಮುದ್ರವು ಎಷ್ಟೊಂದು ಹಿರಿಯತನದಿಂದ ಮೆರೆಯುತ್ತಿದೆ!
                
ಇಂತೆಸೆವಂಬುಧಿಮಧ್ಯದೊ
                 ಳಂ ತವೆ ಕಂಗೊಳಿಸುತಿರ್ಪ ಜಂಬೂದ್ವೀಪಾ
                 ಬ್ಜಾಂತರದ ಚಾರುಕರ್ಣಿಕೆ
                 ಯಂತಿರೆ ಕನಕಾಚಲಂ ವಿರಾಜಿಸುತಿರ್ಕುಂ                  ೬
    

      ಈ ರೀತಿ ಶೋಭಿಸುವ ಸಮುದ್ರದ ಮಧ್ಯದಲ್ಲಿ ವಿರಾಜಿಸುತ್ತಿದ್ದ ಜಂಬೂದ್ವೀಪವೆಂಬ ಕಮಲದ ನಡುವೆ ಇರುವ ಮನೋಹರವಾದ ದಳ ಅಥವಾ ಮೊಗ್ಗಿನಂತೆ ಮೇರು ಪರ್ವತವು ಶೋಭಾಯಮಾನವಾಗಿತ್ತು.
                  ಜಲಜಜ ವಿಷ್ಣುವಿವಾದವ
                  ನಿಲಿಸಲ್ ಕಲ್ಪಾಂತದೆಡೆಯೊಳೊಗೆದತಿ ತೇಜೋ
                  ಜ್ವಲ ದಿವ್ಯಮಹಾಲಿಂಗದ
                 ನಿಲವೆನೆ ಚೆಲ್ವಾಯ್ತು ಕಣ್ಗೆ ಕಾಂಚನಶೈಲಂ                   ೭
 

    ಹಿಂದಿನ ಕಲ್ಪದಲ್ಲಿ ಬ್ರಹ್ಮ ವಿಷ್ಣು ಇವರಿಬ್ಬರ ವಿವಾದವನ್ನು ನಿಲ್ಲಿಸಲು ಒಡಮೂಡಿದ ಅಸಮಾನವಾದ ಹಾಗೂ ಶ್ರೇಷ್ಠವಾದ ತೇಜೋರಾಜಿತ ಮಹಾಲಿಂಗದ (ಈಶ್ವರನ) ಹಾಗೆ ಕಾಂಚನಶೈಲವು ಕಣ್ಣಿಗೆ ರಂಜಿಸುತ್ತಿತ್ತು.
               ಮಿಸುಪಾ ಮೇರುವ ತೆಂಕಣ
               ದೆಸೆಯಳ್ಪೂರ್ವಾಪರಾಂಬುನಿಧಿಗಳನವಗಾ
               ಹಿಸಿ ನಭಮಂ ತುಡುಕುತೆ ಕ
               ಣ್ಗೆಸೆದುದು ಹಿಮವನ್ನಗೇಂದ್ರಮುರುಗುಣಸಾಂದ್ರಂ            ೮
    

 ಆ ಮೇರು ಪರ್ವತದ ದಕ್ಷಿಣದಿಕ್ಕಿನಲ್ಲಿ ಪೂರ್ವ ಪಶ್ಚಿಮ ಸಮುದ್ರಗಳನ್ನು ತಾಗಿ, ಆಕಾಶವನ್ನು ತುಡುಕುತ್ತಿರುವ ಹಿಮಾಲಯ ಪರ್ವತವು ಉತ್ತಮಗುಣಯುಕ್ತವಾಗಿ ಶೋಭಿಸುತ್ತಿತ್ತು.
                                                                 . .  (ಮುಂದುವರೆಯುವುದು)
**************************
-ಪುಟಗಳು:9,10,11-
********************************************
    
ಕೆಳದಿ ಕವಿಮನೆತನದ ಸಮಕಾಲೀನರು -೧
ಕವಿ ವೆಂಕಟಸುಬ್ಬರಾವ್ - ಸೀತಮ್ಮ
    ಕವಿ ವೆಂಕಟಸುಬ್ಬರಾವ್ ರವರು ಸಮಕಾಲೀನ ಕವಿ ಕುಟುಂಬಗಳ ಸದಸ್ಯರುಗಳ ಪೈಕಿ ಅತ್ಯಂತ ಹಿರಿಯ ಸದಸ್ಯರು. ೧೨-೦೧-೧೯೨೫ರಲ್ಲಿ ಜನಿಸಿ ಧರ್ಮಪತ್ನಿ ಸೀತಮ್ಮರವರನ್ನು ೨೩-೦೫-೧೯೪೯ರಲ್ಲಿ ವಿವಾಹವಾಗಿ ಸಾರ್ಥಕ ಬದುಕು ನಡೆಸಿರುವ ಇವರು ಸದ್ಯದಲ್ಲಿಯೇ ೬೦ ವರ್ಷಗಳ ದಾಂಪತ್ಯ ಜೀವನ ಪೂರ್ಣಗೊಳಿಸಲಿದ್ದಾರೆ. ಕವಿಕಿರಣ ಬಳಗ ಇವರುಗಳಿಗೆ ಸುದೀರ್ಘ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತದೆ; ಹಾಗೂ ಇವರ ಮಾರ್ಗದರ್ಶನ ಬಯಸುತ್ತದೆ.
     ಇವರ ಪರಿಚಯ ಲೇಖನ ಬರೆದಿರುವ ಶ್ರೀ ಹೆಚ್. ಎಸ್. ಗೋಪಾಲಕೃಷ್ಣರವರು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್ ರವರ ತಮ್ಮ. ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿರಸ್ತೆದಾರರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆ ನಿಂತಿದ್ದಾರೆ.
*************************
ಹೀಗಿದ್ದಾರೆ ನಮ್ಮ ಅಕ್ಕ - ಭಾವ    

     ನನ್ನ ಅಕ್ಕ ಸೀತಮ್ಮನನ್ನು ಕವಿ ಸುಬ್ರಹ್ಮಣ್ಯಯ್ಯರವರ ಏಕೈಕ ಪುತ್ರ ಕೆ. ವೆಂಕಟಸುಬ್ಬರಾವ್‌ರವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ನ್ಯಾಯಾಂಗ ಇಲಾಖೆಯಲ್ಲಿ ಕಾಪಿಯಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಯ್ಯನವರಿಗೆ ಇಬ್ಬರು     ಹೆಣ್ಣು ಮಕ್ಕಳೂ  - ಸೀತಾಲಕ್ಷ್ಮಮ್ಮ ಮತ್ತು ನಾಗರತ್ನಮ್ಮ - ಇದ್ದಾರೆ.
     ಸುಬ್ರಹ್ಮಣ್ಯಯ್ಯನವರು ತಮ್ಮ ಮಗ ಹುಟ್ಟಿದ ಮೂರು ತಿಂಗಳಿಗೇ ಕೊಪ್ಪವನ್ನು ಬಿಟ್ಟು ದಾವಣಗೆರೆಗೆ ಬಂದು ನೆಲೆಸಿದರು. ವೆಂಕಟಸುಬ್ಬರಾಯರು ದಾವಣಗೆರೆಯಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೇ ಹೋಗಬೇಕಾಗಿದ್ದರಿಂದ ಅನಾನುಕೂಲತೆಯಿಂದ ಮುಂದೆ ಓದಲಾಗಲಿಲ್ಲ. ನೌಕರಿಗೆ ಸೇರಿ ಆಸರೆಯಾಗಿರಬೇಕೆಂದು ತಂದೆ ಬಯಸಿದ್ದರು. ಅದರಂತೆ ಆಗ ಹರಿಹರದಲ್ಲಿ ಬೀಡು ಬಿಟ್ಟಿದ್ದ ಬ್ರಿಟಿಶ್ ಮಿಲಿಟರಿ ಕ್ಯಾಂಪ್‌ನಲ್ಲಿ ಸಿವಿಲ್ ವಿಭಾಗದಲ್ಲಿ ಕ್ಲರ್ಕ್ ಆಗಿ ಸ್ವಲ್ಪ ಸಮಯ ಕೆಲಸ ಮಾಡಿದರು.  ತಂದೆಗೆ ಮಿಲಿಟರಿ ಸೇವೆ ಮಾಡುವುದು  ಇಷ್ಟವಿಲ್ಲದ್ದರಿಂದ   ನ್ಯಾಯಾಂಗ ಇಲಾಖೆಯಲ್ಲಿ     ೨೨-೬-೧೯೪೫ರಲ್ಲಿ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಗುಮಾಸ್ತರಾಗಿ ನೇಮಕಗೊಂಡು ನಂತರದಲ್ಲಿ ನ್ಯಾಯಾಂಗ ಇಲಾಖೆಯ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಶಿರಸ್ತೇದಾರ್ ಹುದ್ದೆಯವರೆಗೆ ಬಡ್ತಿ ಹೊಂದಿ ಹಲವು ಊರುಗಳಲ್ಲಿ -ಅಂದರೆ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಭದ್ರಾವತಿ, ನರಸಿಂಹರಾಜಪುರ, ಮೈಸೂರು, ಹಾಸನ, ಇತ್ಯಾದಿ - ಕೆಲಸ ಮಾಡಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಸಿವಿಲ್, ಕ್ರಿಮಿನಲ್ ವಿಭಾಗದ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಣಿತಿ ಹೊಂದಿದ್ದು, ಸಿಬ್ಬಂದಿಗಳಿಗೆ ನ್ಯಾಯಾಂಗ ಇಲಾಖೆಯ ಎಲ್ಲಾ ಕೆಲಸಗಳನ್ನು ಹೇಳಿಕೊಡುತ್ತಿದ್ದರಲ್ಲದೆ  ನ್ಯಾಯಾಧೀಶರುಗಳೂ ಕೆಲವು ಸಂದರ್ಭಗಳಲ್ಲಿ ಇವರ ಸಲಹೆ ಪಡೆಯುತ್ತಿದ್ದರು.
     ಅವರ ೨೫ನೆಯ ವಯಸ್ಸಿನಲ್ಲಿ ನನ್ನಕ್ಕ ಅಂದರೆ ಹಳೇಬೀಡು ಶ್ಯಾನುಭೋಗರಾಗಿದ್ದ ಶ್ರೀಯುತ ಹೆಚ್. ಪಿ. ಸುಬ್ಬರಾಯರ ಜೇಷ್ಠ ಪುತ್ರಿ ಸೀತಮ್ಮನನ್ನು ವಿವಾಹವಾದರು. ಸೀತಮ್ಮ ಸರಳ ಸುಂದರವಾಗಿದ್ದು ವೆಂಕಟಸುಬ್ಬರಾಯರಿಗೆ ಅನುರೂಪಳಾಗಿದ್ದು, ಒಳ್ಳೆಯ ಗೃಹಿಣಿ. ಮಮತಾಮಯಿ. ವೆಂಕಟಸುಬ್ಬರಾಯರಿಗೆ ಆಗ ತಮ್ಮ ಕಡೆಯ ಬಂಧು ಬಳಗ ಜಾಸ್ತಿ ಇರಲಿಲ್ಲ. ಹೆಂಡತಿಯ ತವರುಮನೆ ಅಂದರೆ ನಮ್ಮ ಕಡೆಯ ಬಳಗದವರನ್ನು ಬಹಳ ಹಚ್ಚಿಕೊಂಡಿದ್ದರು. ನಮ್ಮ ತಂದೆ ತಾಯಿಗೆ ಎಂಟು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು ಇರುವ ದೊಡ್ಡ ಕುಟುಂಬವಿದ್ದರೂ, ಶ್ರೀಯುತರು ಮಾವನಿಗೆ ಹಿರಿಯ ಮಗನಂತೆ ಇದ್ದು, ಅವರ ಕುಟುಂಬದ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದು ನಮಗೆ ಹೆಮ್ಮೆಯ ವಿಷಯ. ನಾನು ಮತ್ತು ನನ್ನ ತಮ್ಮ ಜಯಶಂಕರನೇ ಇದಕ್ಕೆ ನಿದರ್ಶನ. ನಮ್ಮಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಂಡು ಸರ್ಕಾರಿ ನೌಕರಿ ದೊರೆಯುವವರೆಗೆ ಜೀವನಕ್ಕೆ ದಾರಿಯಾಗುವಂತೆ ಉಪಕಾರ ಮಾಡಿದ್ದಾರಲ್ಲದೆ, ನನ್ನ ಮದುವೆಯ ಉಸ್ತುವಾರಿಯನ್ನೂ ಅವರೇ ಹೊತ್ತು ಕೊಂಡು ನಿರ್ವಹಿಸಿದರು. ಆ ವೇಳೆಗಾಗಲೇ ನಮ್ಮ ತಂದೆಯವರು ಕಾಲವಾಗಿದ್ದರು. ನಮ್ಮ ತಂದೆಯವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಅವರೇ ಆಶ್ರಯ ಕೊಟ್ಟು ಉಪಚರಿಸಿದ ಮಹಾನುಭಾವರು. ನನ್ನ ಮದುವೆ ಪ್ರಭಾವತಿಯೊಂದಿಗೆ ಆಗಿದ್ದು. ನಮ್ಮಿಬ್ಬರನ್ನೂ ಅವರ ಮನೆಯಲ್ಲೇ ಆಶ್ರಯ ಕೊಟ್ಟು ಒಂದು ವರ್ಷದವರೆಗೆ ಇಟ್ಟುಕೊಂಡಿದ್ದರು. ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ ಕಾರಣ ನಾನು ಬೇರೆ ಮನೆ ಮಾಡಬೇಕಾಯಿತು. ಆಗಲೂ ಅವರು ನಮ್ಮಿಬ್ಬರನ್ನು ಬಿಟ್ಟು ಹೋಗುವಾಗ ಅವರ ಮಕ್ಕಳನ್ನು ಬಿಟ್ಟು ದೂರ ಹೋಗುತ್ತಿರುವಷ್ಟೇ ದುಃಖಿಸಿದರು. ಅವರು ತಮ್ಮ ತಂಗಿಯ ಗಂಡ (ಭಾವ) ಕೃಷ್ಣಮೂರ್ತಿಯವರಿಗೂ ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ಕೊಡಿಸಿ ಜೀವನಕ್ಕೆ ದಾರಿ ಮಾಡಿಕೊಟ್ಟರು. ನನ್ನ ತಂಗಿಯ ಗಂಡ ಸತ್ಯನಾರಾಯಣರವರಿಗೂ ಸಹ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಕೊಡಿಸಿ ಉಪಕಾರ ಮಾಡಿದರು.
     ಅವರ ಔದಾರ್ಯ, ವಿವೇಚನೆ, ಸಹಕಾರ, ಕಾರ್ಯತತ್ಪರತೆ, ಕರುಣೆ ಇವುಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ಕರ್ತವ್ಯ ನಿರ್ವಹಿಸುವಾಗ ಹತ್ತಾರು ಜನರಿಗೆ ಕೆಲಸ ಕೊಡಿಸಿದ್ದನ್ನು ಪಡೆದವರು ಈಗಲೂ ಅವರನ್ನು ಸ್ಮರಿಸುತ್ತಿದ್ದಾರೆ. ಸ್ವಲ್ಪ ಮುಂಗೋಪದ ಸ್ವಭಾವದವರಾದರೂ ಮೃದು ಹೃದಯಿಗಳು.     ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬ ಮಗಳನ್ನು ಹೊಂದಿರುವ ಇವರು ಎಲ್ಲರಿಗೂ ವಿದ್ಯಾಭ್ಯಾಸ ಮಾಡಿಸಿ ವಿವಾಹಗಳನ್ನು ಮಾಡಿ ಎಲ್ಲರೂ ಒಳ್ಳೆಯ ಸ್ಥಿತಿಯಲ್ಲಿ ನೆಲೆಗೊಳ್ಳುವಂತೆ ಮಾಡಿದ್ದಾರೆ. ಹಿರಿಯ ಮಗ ನಾಗರಾಜ ತಹಸೀಲ್ದಾರ್ ಆಗಿದ್ದಾನೆ. ಮಗಳು ಲಲಿತಾಂಬಾ ವೆಂಕಟರಾಮಯ್ಯ ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರಲಿಪಿಗಾರ್ತಿಯಾಗಿದ್ದು ಸ್ವಯಂ ನಿವೃತ್ತಿ ಪಡೆದವಳು ಎರಢನೆಯ ಮಗ ಸುರೇಶ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಸ್ವಯಂ ನಿವೃತ್ತಿ ಪಡೆದು ಸಮಾಜ ಕಾರ್ಯಗಳಲ್ಲಿ ತೊಡಗಿದ್ದಾನೆ. ಮೂರನೆಯ ಮಗ ಶ್ರೀಧರ ಖಾಸಗಿ ವೃತ್ತಿಯಲ್ಲಿದ್ದಾನೆ. ಕೊನೆಯ ಮಗ ಅನಂತ ಅಮೆರಿಕಾದಲ್ಲಿ ಸಾಫ್ಟ್‌ವೇರ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಹೊಂದಿ ಅವರ ಅಭಿವೃದ್ಧಿಯನ್ನು ಕಾಣುತ್ತಾ ಸಂತೋಷದಿಂದ ಪತ್ನಿ ಸೀತಮ್ಮರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ.
     ಶ್ರೀಯುತರ ಈ ಯಶಸ್ಸಿನ ಗುಟ್ಟಿಗೆ ಅವರ ಶ್ರೀಮತಿ ಸೀತಮ್ಮನವರ ಸಹಕಾರ, ಔದಾರ್ಯವೇ ಕಾರಣ. ತಾಳ್ಮೆ, ಸಹನೆ, ವಿವೇಕದ ಪ್ರತಿರೂಪವಾಗಿರುವ ಮಮತಾಮಯಿ ತಾಯಿ ಸೀತಮ್ಮ. ಇವರ ಗಂಡು ಮಕ್ಕಳೂ ಇವರನ್ನು ಕಣ್ಣು ರೆಪ್ಪೆಯಂತೆ ನೋಡಿ ಕೊಳ್ಳುತ್ತಿದ್ದಾರೆ. ನಮಗಂತೂ ಇವರಿಬ್ಬರು ನಮ್ಮ ತಂದೆ ತಾಯಿಯ ಸ್ಥಾನದಲ್ಲಿರುವ ಮಹಾನುಭಾವರು. ಅವರಿಗೆ ನನ್ನ ಮತ್ತು ನನ್ನ ಪತ್ನಿ ಪ್ರಭಾವತಿಯ ಸಾಷ್ಟಾಂಗ ನಮನಗಳನ್ನು ಎಷ್ಟು ಅರ್ಪಿಸಿದರೂ ಸಾಲದೆನಿಸುತ್ತದೆ. ಅವರು ಯಾವಾಗಲೂ ನಮ್ಮ ಹಳೇಬೀಡಿನ ಬಾಂಧವರೆಲ್ಲರ ಕಷ್ಟ ಸುಖಗಳನ್ನು ವಿಚಾರಿಸಿಕೊಳ್ಳದ ದಿನವಿಲ್ಲ. ಆಗಾಗ್ಗೆ ನಾವೆಲ್ಲಾ ಭೇಟಿ ಯಾಗುತ್ತಿದ್ದರೆ  ಅದೇ ಅವರಿಗೆ ಸಂತಸ. ಎಲ್ಲರ ಯಶಸ್ಸಿಗೆ ಹಾರೈಸುವುದೇ ಅವರ ದೊಡ್ಡ ಗುಣ. ಅವರು ಶಿವಮೊಗ್ಗದಲ್ಲಿದ್ದರೂ ಅವರ ಮನಸ್ಸು ಯಾವಾಗಲೂ ಎಲ್ಲಾ ಬಂಧುಗಳ ಕುಟುಂಬಗಳೊಂದಿಗೆ ಬೆರೆತಿರುತ್ತದೆ. ದೇವರು ಅವರಿಬ್ಬರನ್ನೂ ಸಂಪೂರ್ಣ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ಎಂಬುದೇ ನಮ್ಮ ಪ್ರಾರ್ಥನೆ.
-ಹೆಚ್. ಎಸ್. ಗೋಪಾಲಕೃಷ್ಣ.


* * * * * * * *
ಶುಭ ಸಂದೇಶ
     ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರ್ನಾಟಕದ ಐತಿಹಾಸಿಕ ಕೆಳದಿ ಸಂಸ್ಥಾನದ ಗತವೈಭವದ ನೆನಪಿನಲ್ಲಿ ಶ್ರೀ ಕವಿ ಲಿಂಗಣ್ಣ ಮುಂತಾದ ಕವಿ ಮನೆತನಕ್ಕೆ ಸೇರಿದ ಕುಟುಂಬಗಳ ನೆನಪಿಗಾಗಿ ವಾರ್ಷಿಕ ಸಮಾವೇಶ ನಡೆಸುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ಮರೆತು ಹೋಗುತ್ತಿರುವ ಎಷ್ಟೋ ವೈಶಿಷ್ಟ್ಯಗಳನ್ನು ನೆನಪು ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಪ್ರಶಂಸನೀಯವಾಗಿದೆ. ಹಾಲಿ ಮೂರನೇ ವಾರ್ಷಿಕ ಸಮಾವೇಶದಲ್ಲಿ ಹೊರತರಲಿರುವ ಉದ್ದೇಶಿತ ಕವಿಕುಟುಂಬದ ಪತ್ರಿಕೆ ಕವಿಕಿರಣ ಪತ್ರಿಕೆಯು ಯುವ ಪೀಳಿಗೆಗೆ ದಾರಿದೀಪವಾಗಿ ಕವಿಹೃದಯ ಚಿಗುರೊಡೆಯಲಿ, ಸಮಾಜಕ್ಕೆ ಆಶಾದಾಯಕವಾಗಿ ಉತ್ತಮ ರೀತಿಯಲ್ಲಿ ಹೊರಹೊಮ್ಮಿ, ಯೋಜಿತ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.
       ಡಾ|| ಪ್ರವೀಣ್ ಕುಮಾರ್ ಜಿ.ಎಲ್., ಕ.ಆ.ಸೇ.,
   ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ ದಂಡಾಧಿಕಾರಿ,
                       ಸಾಗರ.    
*********************************
ಸನ್ಮಾರ್ಗ
     ತಪ್ಪು ಮಾಡಿಯೂ ಸರಿಯೆಂದು ವಾದಿಸುವುದಕ್ಕಿಂತ ತಪ್ಪು ಒಪ್ಪಿಕೊಂಡು ಸರಿಯಾಗಿ ನಡೆಯುವುದು ಸರಿಯಾದ ಮಾರ್ಗ. ಇಂತಹವರನ್ನು ಜನರು ಮೆಚ್ಚುತ್ತಾರೆ.
**************
                                                       -ಪುಟಗಳು 12,13- 
****************************************    

 ಶುಭನುಡಿ
     ನಮ್ಮ ಪೂರ್ವಿಕರು ಪ್ರತಿಭಾಸಂಪನ್ನರಾಗಿದ್ದು, ನಮ್ಮ ಮನೆತನದ ಈಗಿನವರೂ ಸಹ ಪ್ರತಿಭಾಶಾಲಿಗಳಾಗಿದ್ದಾರೆ. ಪ್ರತಿವರ್ಷ ಕವಿವಂಶಸ್ಥರ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಕವಿಮನೆತನದ ಪತ್ರಿಕೆ ಕವಿಕಿರಣ ಹೊರತರುತ್ತಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.
     ಕೊಲ್ಲೂರು ಮೂಕಾಂಬಿಕೆ ಮತ್ತು ವೆಂಕಟರಮಣ ಸ್ವಾಮಿಯ ಅನುಗ್ರಹದಿಂದ ಪತ್ರಿಕೆಯ ಸದುದ್ದೇಶ ನೆರವೇರಲಿ.
- ಕವಿ ವೆಂಕಟಸುಬ್ಬರಾವ್, ಶಿವಮೊಗ್ಗ.
***********************************

ಶುಭಾಶಯ
      ಇತಿಹಾಸವನ್ನು ಅಭ್ಯಾಸ ಮಾಡಿರಿ. ಚರಿತ್ರೆಯಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಈ ಕಾಲದಲ್ಲಿ ಉತ್ತಮ ನಾಗರಿಕರಾಗಿ ಬಾಳಿರಿ. ಮುಂದಿನ ಪೀಳಿಗೆಗೆ ಒಳ್ಳೆಯ ಮಾರ್ಗದೋರಿ ಭಾರತವನ್ನು ಮತ್ತು ಕನ್ನಡ ನೆಲವನ್ನು ಉಜ್ವಲವಾಗಿ ಬೆಳಗಲು ಪಣತೊಟ್ಟು ಕಾರ್ಯಶೀಲರಾಗಿ ದುಡಿಯಿರಿ.
ಕವಿಕಿರಣಕ್ಕೆ ಶುಭವಾಗಲಿ.
-ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್
***********************************
ಹಳೆ ಬೇರು ಹೊಸ ಚಿಗುರು
ಇರಲು ಚೆಂದ ಹಳೆ ಬೇರು ಹೊಸ ಚಿಗುರು,
ಹಾಡಲು ಅಂದ ಹಳೆ ರಾಗ ಹೊಸ ಗಾನ,
ಕೇಳಲು ಆನಂದ ಹಳೆ ವಿಷಯ ಹೊಸ ವಿಸ್ಮಯ,
ಬರೆಯಲು ಸದಾ ಹಳೆ ಸಾಹಿತ್ಯ ಹೊಸ ವಿಚಾರ,
ನುಡಿಯಲು ಕಂದ ಹಳೆ ಭಾಷೆ ಹೊಸ ನುಡಿ,
ಹರಡಲು ಗಂಧ ಹಳೆಗಾಳಿ ಹೊಸ ಪರಿಮಳ,
ಇರುವುದು ಬಂಧ ಹಳೆ ಜನ ಹೊಸ ಮನ,
ಸವಿಯಲು ಮುದ ಹಳೆ ಅಡುಗೆ ಹೊಸ ರುಚಿ,
ಸೇರಲು ಬಂದ ಹಳೆ ಭಾವದ ಹೊಸ ಜನ,
ನೆಂಟರು ತಂದ ಹಳೆ ಸಂಬಂಧ ಹೊಸ ಸಂಭ್ರಮ!
             - ಹೇಮಾ ಮಾಲತೇಶ, ಶಿವಮೊಗ್ಗ.
**********************************

ಹೀಗಿರಬೇಕು  ನಮ್ಮವ
 ಕವಿ, ಕರುಣಿ, ಕಣ್ಮಣಿ, ಕಷ್ಟ ಸಹಿಷ್ಣು
ವಿ ವಿನಯಿ, ವಿಶ್ವಾಸಿ, ವಿಜಯಿ, ವಿದ್ಯಾವಂತ
 ಮಮತಾಮಯಿ, ಮಂದಸ್ಮಿತ, ಮನೋಹರ
ನೆ ನೆಂಟ, ನೆರಳಾಗಿರುವ, ನೆಮ್ಮದಿವಂತ
 ತಪಸ್ವಿ, ತನ್ಮಯಿ, ತಪ್ಪು ಮಾಡದವ
 ನಮ್ರ., ನಮ್ಮವ, ನಂಬಿಕಸ್ಥ, ನಡೆನುಡಿವಂತ
 ದಯಾವಂತ, ದಾರ್ಶನಿಕ, ದಕ್ಷ, ಧರ್ಮಿಷ್ಟ
 ವಜ್ರಕಾಯ, ವಾಗ್ಮಿ, ವಾತ್ಸಲ್ಯಮಯಿ, ವರ್ಚಸ್ವಿ
            
              - ಹೇಮಾ ಮಾಲತೇಶ, ಶಿವಮೊಗ್ಗ.
* * *

ಹಣೆಬರಹ
       ಹೆತ್ತವರು ಬರೆವುದಿಲ್ಲ ಹಣೆಯಲ್ಲಿ
       ಬರುವಾಗ ಬರೆದು ಕಳಿಸುವನು ಅಲ್ಲಿ
       ಬರೆದುದನು ಓದಲಾಗದು ನಮ್ಮಲ್ಲಿ
       ಅಂತೂ ಸಿಲುಕಿರುವೆವು ಗೊಂದಲದಲ್ಲಿ ! !
-ಕವಿಶ್ರೀ (ಕೆ. ಶ್ರೀಕಾಂತ್)
* * *

ಶ್ರದ್ಧಾಂಜಲಿ    
     ದಿ. ಕವಿ ಸುಬ್ರಹ್ಮಣ್ಯಯ್ಯನವರ ತಂಗಿ ದಿ. ಸುಂದರಮ್ಮನವರ ಮಗ ಹಾಗೂ ಶ್ರೀಮತಿ ಸೀತಮ್ಮ ಕವಿ ವೆಂಕಟಸುಬ್ಬರಾವ್‌ರವರ ಸಹೋದರಿ ಶ್ರೀಮತಿ ಸಾವಿತ್ರಮ್ಮನವರ ಪತಿಯಾದ ಶ್ರೀ ಸತ್ಯನಾರಾಯಣರಾವ್ ರವರು ದಿನಾಂಕ  ೨೮-೦೫-೨೦೦೭ ರಂದು ನಮ್ಮನ್ನು ಅಗಲಿದ್ದಾರೆ. ಶ್ರೀಯುತರು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು.
     ದಿ. ಕವಿ ಸುಬ್ರಹ್ಮಣ್ಯಯ್ಯನವರ ಮಗಳು ಶ್ರೀಮತಿ ನಾಗರತ್ನಮ್ಮನವರ ಪತಿ ಶ್ರೀ ನಾರಾಯಣರಾವ್‌ರವರು ದಿನಾಂಕ ೧೮-೦೭-೨೦೦೮ ರಂದು ದೈವಾಧೀನರಾಗಿದ್ದಾರೆ. ಹೊಸನಗರ ತಾಲ್ಲೂಕು ಬಿಲ್ಲೇಶ್ವರದಲ್ಲಿ ಅರ್ಚಕರಾಗಿದ್ದ ಅವರು ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
     ಅಗಲಿದ ಆತ್ಮಗಳಿಗೆ ಸದ್ಗತಿ ದೊರೆಯಲಿ ಎಂದು ಕವಿಕಿರಣ ಬಳಗ ಪ್ರಾರ್ಥಿಸುತ್ತದೆ.
*********************************************
                                                                                     -ಪುಟ ೧೪-
**********************************************
ಕೆಳದಿ ಶ್ರೀರಾಮೇಶ್ವರ ದೇವಾಲಯ                                                                                                   - ಡಾ. ಕೆಳದಿ ವೆಂಕಟೇಶ ಜೋಯಿಸ್.

 

     ಕೆಳದಿ ಶಿವಮೊಗ್ಗದಿಂದ ೭೮ ಕಿ.ಮೀ. ಮತ್ತು ಸಾಗರದಿಂದ ೫.೫ ಕಿ.ಮೀ. ದೂರದಲ್ಲಿದೆ. ಕೆಳದಿ ಎಂಬ ವೇಶ್ಯೆ ಕೆಳದಿ ಕೆರೆಗೆ ಬಲಿಯಾದ್ದರಿಂದ ಅವಳ ನೆನಪಿ ಗಾಗಿ ಕೆಳದಿ ಎಂಬ ಹೆಸರು ಬಂದಿರುವುದಾಗಿ ಐತಿಹ್ಯ ವಿದೆ. ಇದಕ್ಕೆ ಸಂಬಂಧಿಸಿದಂತೆ ಕೆಳದಿ ಕೆರೆಯ ಮೇಲ್ಭಾಗದಲ್ಲಿ ವಡ್ಡರ ತಿಮ್ಮಿ ಎಂಬ ನಗ್ನ ಶಿಲ್ಪವಿದ್ದು ಇವಳೇ ಕೆಳದಿ ಎಂದು ಹೆಸರು ಪಡೆದ ವೇಶ್ಯೆ ಎಂದು ಹೇಳಲಾಗುತ್ತದೆ. ಕೆಳದಿ ಕ್ರಿ.ಶ. ೧೫೦೦ ರಿಂದ ೧೫೧೪ರ ವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ರಣದುಲ್ಲಾ ಖಾನ್, ಬಿಜಾಪುರದ ಆದಿಲ್ ಷಾಹಿ ಮತ್ತು ಹೈದರಾಲಿ ಕಾಲದಲ್ಲಿ ಹಾಳಾಗುವಂತಾಯಿತು.
     ಕೆಳದಿಯಲ್ಲಿ ಶ್ರೀ ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯವಿದೆ. ಅಲ್ಲದೆ ಇತರ ಹಲವು ದೇವಾಲಯಗಳಿವೆ.
     ಶ್ರೀ ರಾಮೇಶ್ವರ ವಿಗ್ರಹ ಮೊದಲು ಊರ ಹೊರ ವಲಯದ ಸೀಗೆಹಟ್ಟಿಯ ಮಧ್ಯೆ ಇತ್ತಂತೆ. ಚೌಡಪ್ಪ ನಾಯಕನ ಮನೆಯ ಹಸು ಪ್ರತಿದಿನ ಅಲ್ಲಿಗೆ ಬಂದು ಅಲ್ಲಿದ್ದ ಹುತ್ತಕ್ಕೆ ಹಾಲು ಕರೆಯುತ್ತಿತ್ತಂತೆ. ಇದು ಚೌಡಪ್ಪ ನಾಯಕನಿಗೆ ಒಮ್ಮೆ ತಿಳಿದು ಅನಂತರ ಆ ಪೊದೆಗಳನ್ನು ತೆಗೆಸಿ ನೋಡಿದಾಗ ಅಲ್ಲಿ ಲಿಂಗ ವಿದ್ದುದನ್ನು ನೋಡಿ ತೃಣಕುಟಿ ನಿಮಿಸಿದನಂತೆ. ಅನಂತರದಲ್ಲಿ ಈ ಪ್ರದೇಶದ ಒಡೆಯನಾದ ಮೇಲೆ ದೇವಾಲಯ, ಗರ್ಭಗೃಹವನ್ನು ಶಿಲಾಮಯವಾಗಿ ಮಾಡಿದ್ದುದಾಗಿ ಕೆಳದಿ ನೃಪ ವಿಜಯದಲ್ಲಿ ತಿಳಿಸಲಾಗಿದೆ. ಇಲ್ಲಿ ಈ ಮೊದಲು ಶಿವ ದೇವಾಲಯ ಇದ್ದಿರಬಹುದು. ಅದು ಈ ಪ್ರಾಂತವನ್ನು ಮೊದಲು ಆಳಿದ ಹೊಯ್ಸಳ, ಸಾಂತ ಅಥವಾ ವಿಜಯ ನಗರದ ಕಾಲದಲ್ಲಿ ನಿರ್ಮಾಣ ಆಗಿದ್ದಿರಬಹುದು. ದೇವಾಲಯದ ಆವರಣದಲ್ಲಿರುವ ಬಾವಿಯ ಪಕ್ಕ ದಲ್ಲಿರುವ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳು ಹಾಗೂ ವಠಾರದಲ್ಲಿರುವ ನಾಗರಗಳ ಮಧ್ಯದಲ್ಲಿ ಇಟ್ಟಿರುವ ಶ್ರೀ ಲಕ್ಷ್ಮೀನಾರಾಯಣ ಶಿಲ್ಪದ ಲಕ್ಷಣವನ್ನು ಗಮನಿಸಿದಾಗ ಈ ಪ್ರದೇಶವು ಕೆಳದಿಗೂ ಮೊದಲು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿದ್ದಿತೆಂದು ಊಹಿಸ ಬಹುದಾಗಿದೆ. ಈ ಪ್ರದೇಶದಲ್ಲಿ ಕಾಡಿನಲ್ಲಿ ಇನ್ನೊಂದು ಈಶ್ವರ ದೇವಾಲಯ ಇದ್ದ ಅವಶೇಷ ಗಳನ್ನು ನೋಡಿರುವುದಾಗಿ ಸ್ಥಳೀಕರು ಹೇಳುತ್ತಾರೆ.
ಇದು ಕೆಳದಿ ಜೋಯಿಸರಿಗೆ ಸದಾಶಿವನಾಯಕನು ಕೊಟ್ಟ, ಶಾಸನದಲ್ಲಿ ದಾಖಲಾಗಿರುವ ಶಂಭುಲಿಂಗ ದೇವಾಲಯವೇ ಆಗಿದ್ದರೂ ಆಗಿರಬಹುದು. ಆಡಳಿತ ದಲ್ಲಿ ತಾನು ಎದ್ದು ನಿಲ್ಲುವಂತಾದ ಮೇಲೆ ಲಿಂಗಕ್ಕೆ ಮರದಲ್ಲಿ ಗುಡಿ ಕಟ್ಟಿಸಿದನೆಂದೂ ಅನಂತರ ಈ ದೇವಾಲಯವನ್ನು ಮತ್ತು ನಂದಿ ಮಂಟಪವನ್ನು ಶಿಲ್ಪ ಶಾಸ್ತ್ರದನ್ವಯ ಶಿಲಾಮಯವಾಗಿಸಿ ಗರ್ಭಗೃಹವನ್ನು ಕಲ್ಲಿನಿಂದ ಕಟ್ಟಿಸಿದನೆಂದು ತಿಳಿದುಬರುತ್ತದೆ. ಹಾಗೆಯೇ ಈಶ್ವರ ದೇವಾಲಯದ ಎಡಭಾಗದಲ್ಲಿ ಪಾರ್ವತಿ ದೇವಾಲಯವನ್ನು ಕಟ್ಟಿಸಿದನು. ಇದಕ್ಕೆ ಪೂಜಾದಿ ಗಳಿಗಾಗಿ ದಾನದತ್ತಿಗಳು ಬಿಡಲ್ಪಟ್ಟಿತ್ತು. ಕ್ರಿ.ಶ. ೧೫೦೯ರ ಶಾಸನವೊಂದು ವಿಜಯನಗರದ ವೆಂಕಟಾದ್ರಿ ಯಜಮಾನರ ಪೌತ್ರರಾದ  ನಾರಸಿಂಹ ಯಜಮಾನರ ಪುತ್ರರಾದ ನರಸಪ್ಪ ದೈವಜ್ಞ ಯಜಮಾನರಿಗೆ ಶ್ರೀ ಸದಾ ಶಿವನಾಯಕರು ಇಲ್ಲಿಯ ಸ್ಥಳದ ದೇವತಾ ಪೂಜೆ, ಶಂಭುಲಿಂಗಪೂಜೆ, ಭೂಮಿತತ್ವ, ದೈವಜ್ಞ ಯಜಮಾನಿಕೆ ಕೊಟ್ಟುದನ್ನು ತಿಳಿಸುತ್ತದೆ. ಕ್ರಿ.ಶ. ೧೫೫೬ರ ವರೆಗೆ ಈ ಮನೆತನದವರು ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿರಬೇಕು. ಕ್ರಿ.ಶ. ೧೫೫೬ರಲ್ಲಿ ಬನವಾಸಿ ಆಚಾರ್ಯ ಭೀಮಭಟ್ಟರ ಮಗ ಆಚಾರ್ಯ ಮಧುಲಿಂಗಭಟ್ಟರಿಗೆ ಈ ಸ್ಥಳದ ಪೂಜೆ ಕೊಟ್ಟಿರುವುದನ್ನು ಶಾಸನವೊಂದು ತಿಳಿಸುತ್ತದೆ. ಇಂದೂ ಈ ಕುಟುಂಬದವರೇ ಪೂಜಾದಿ ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ದೇವಾಲಯವೂ ಮುಜರಾಯಿ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆಯ ರಕ್ಷಣಾ ಸ್ಮಾರಕವಾಗಿದೆ. ಕ್ರಿ.ಶ. ೧೫೯೦-೧೬೨೯ರ ಮಧ್ಯದಲ್ಲಿ ಆಡಳಿತ ನಡೆಸಿದ ಹಿರಿಯ ವೆಂಕಟನಾಯಕನ ಕಾಲದಲ್ಲಿ ಈ ದೇವಾಲಯದ ಮುಂಭಾಗದ ರಂಗ ಮಂಟಪ ಮತ್ತು ವರಗು ದಿಣ್ಣೆಗಳನ್ನು ನಿರ್ಮಿಸಲಾಯಿತು. ಮುಂದೆ ದೊಡ್ಡ ಸಂಕಣ್ಣನಾಯಕನ ಕಾಲದಲ್ಲಿ ಶಿಕಾರಿಪುರ ತಾಲ್ಲೂಕಿನ ಮಾಸೂರು ಗ್ರಾಮದಲ್ಲಿ ಸಿಕ್ಕ ವೀರಭದ್ರ ಮೂರ್ತಿಯನ್ನು ಶ್ರೀ ರಾಮೇಶ್ವರ ದೇವಾಲಯದ ಬಲ ಬದಿಯಲ್ಲಿ ಪ್ರತಿಷ್ಠಾಪಿಸಿದನು. ಕೆಳದಿಯ ರಾಣಿ ಚೆನ್ನಮ್ಮಾಜಿಯು ಈ ದೇವಾಲಯಕ್ಕೆ ಗೋಪುರವನ್ನು ಮತ್ತು ರಂಗಮಂಟಪವನ್ನು ನಿರ್ಮಿಸಿದಳು. ಹಿರಿಯ ಬಸವಪ್ಪನಾಯಕನು (೧೬೯೭-೧೭೧೪) ವೀರಭದ್ರ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ನಿರ್ಮಿಸಿದನು. ದೇವಾಲಯದ ಎದುರಿನಲ್ಲಿರುವ ಧ್ವಜಸ್ಥಂಭವನ್ನು ಚೆನ್ನಮ್ಮಾಜಿ ಕಾಲದಲ್ಲಿದ್ದ ಬೊಕ್ಕಸದ ಸಿದ್ದಬಸವಯ್ಯನು ಕ್ರಿ.ಶ. ೧೬೮೧ರಲ್ಲಿ ನಿರ್ಮಿಸಿದನು. ದೇವಾಲಯದ ಮುಂಭಾಗದ ಪೌಳಿಯನ್ನು ಚಂದ್ರಸಾಲೆ ಎಂದು ಕರೆದಿದ್ದು ಮುಂಭಾಗದ ಬಾಗಿಲ ಮೇಲು ಭಾಗದಲ್ಲಿ ರಾಮೇಶ್ವರ ದೇವಸ್ಥಾನದ ಚಂದ್ರಸಾಲೆ ೧೮೯೬ನೇ ಇಸವಿ ಹೊನ್ನಾವರದ ನಾರಾಯಣಾಚಾರಿ ಮಗ ವಾಮನಾಚಾರಿ ಕಟ್ಟಿದ್ದು ಎಂದಿದೆ. ಲಾರ್ಡ್ ವೇsವೆಲ್ ಇಲ್ಲಿಗೆ ಬಂದಿದ್ದು ಆ ಸಂದರ್ಭದಲ್ಲಿ ಇದನ್ನು ಕಟ್ಟಲಾಯಿತೆಂದೂ ಹೇಳಲಾಗಿದೆ.
     ಕೆಳದಿ ದೇವಾಲಯವು ದ್ರಾವಿಡ, ಹೊಯ್ಸಳ ಶೈಲಿಯಲ್ಲಿ ಹಸಿರು ಬಣ್ಣದ ಕಲ್ಲಿನಿಂದ ನಿರ್ಮಾಣ ವಾಗಿದೆ. ಚಿಕ್ಕ ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ, ಮುಖಮಂಟಪಗಳಿಂದ ಕೂಡಿದೆ. ಜಗಲಿಯ ಹೊರ ಭಾಗದ ಒಂದು ದಿಂಡಿನಲ್ಲಿ ವಾದ್ಯಗಾರರು, ನರ್ತಕರ ಶಿಲ್ಪವಿದೆ. ಎರಡು ಅಡಿ ಎತ್ತರದ ಮೆರುಗಿರುವ ಶಿಲಾ ಲಿಂಗವಿರುವ ಗರ್ಭಗೃಹದ ಬಿತ್ತಿಯಲ್ಲಿ ಚಚ್ಚೌಕದ ಅರ್ಧ ಕಂಬಗಳ ಅಲಂಕಾರವಿದೆ. ನಡುವೆ ಕಣ್ಣಪ್ಪ, ಗರುಡ, ಹನುಮ, ಒಂಟೆ, ಆನೆ, ಮಿಥುನಶಿಲ್ಪಗಳು, ಆನೆಯ ಜೊತೆ ಹೋರಾಟ ಮಾಡಿದ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗನಿರತ ರಾಮೇಶ್ವರ ಮೊದಲಾದ ಶಿಲ್ಪಗಳಿವೆ. ಮುಂದೆ ಚಾಚಿಕೊಂಡಿರುವ ಛಾವಣಿಯ ಏಣುಗಳಲ್ಲಿ ವೀರಭದ್ರ, ತಾಂಡವೇಶ್ವರ, ಪಾರ್ವತಿ, ಮೋಹಿನಿ, ವೇಣುಗೋಪಾಲ ಕಾಳಿಂಗಮರ್ದನ, ಭೈರವ ಶಿಲ್ಪಗಳಿವೆ. ಗರ್ಭಗೃಹದ ಮೇಲಿನ ಗೋಪುರ ಚೌಕಾಕಾರವಾಗಿದೆ. ಮುಖ ಮಂಟಪವು ನಾಲ್ಕು ಅಂಕಣ ಉದ್ದ ಮತ್ತು ಮೂರು ಅಂಕಣ ಅಗಲವಿದೆ. ಹದಿನೆಂಟು ಕಂಬಗಳಿವೆ. ಇಲ್ಲಿ ಎಡ ಬಲಗಳಲ್ಲಿ ಗಣಪತಿ, ಮಹಿಷ ಮರ್ದಿನಿ ಮೂರ್ತಿಗಳಿವೆ. ದ್ವಾರ ಬಂಧದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದಾರೆ. ನವ ರಂಗ ಚಿಕ್ಕದಾಗಿದೆ. ಇಲ್ಲಿ ಬಸವ ಮತ್ತು ಶಿವ ಪಾರ್ವತಿ ಉತ್ಸವಮೂರ್ತಿಗಳಿವೆ. ೨೧-೦೯-೧೯೯೭ರಲ್ಲಿ ಈ ಹಿಂದಿನ ಉತ್ಸವಮೂರ್ತಿಯು ಕಳುವಾಗಿದ್ದು ಅನಂತರದಲ್ಲಿ ಈಗ ಹೊಸ ಉತ್ಸವಮೂರ್ತಿಯನ್ನು ಮಾಡಿಸಲಾಗಿದೆ. ಪ್ರದಕ್ಷಿಣಾಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡ ದಾಗಿದೆ. ಇದರ ಮೇಲೆ ಆರು ಕಂಬಗಳು ನಿಂತಿವೆ. ಈ ದೇವಾಲಯ ಮೂರು ಪ್ರವೇಶದ್ವಾರಗಳನ್ನು ಹೊಂದಿದೆ. ಒಳಗೆ ಸುತ್ತಲೂ ಕುಳಿತುಕೊಳ್ಳಲು ಜಗಲಿ ಇದೆ. ಅಲ್ಲಿರುವ ತಾಳ ಪ್ರಸ್ತಾರ ಗಂಗಪ್ಪನ ನಮನ ಎಂಬ ಲಿಪಿ ಮತ್ತು ಪಕ್ಕದ ಅಂಕಗಳು ಸಂಗೀತದ ಮಟ್ಟನ್ನು, ಸಂಗೀತಗಾರನನ್ನೂ ಉಲ್ಲೇಖಿಸುತ್ತದೆ. ನಮಸ್ಕಾರ ಹಾಕಿ ರುವಂತೆ ಚಿತ್ರಿಸಿರುವ ಉಬ್ಬು ಚಿತ್ರಗಳು ಯಾವ ರಾಜರದ್ದೆಂದು ಸ್ಪಷ್ಟವಿಲ್ಲದಿದ್ದರೂ ಇಮ್ಮಡಿ ಸೋಮಶೇಖರ ನಾಯಕನದೆಂದು ಹೇಳುತ್ತಾರೆ. ಈ ದೇವಾಲಯದ ಹೊರಗಿನ ಮೈಯಲ್ಲಿರುವ ಗಜಹಂಸದ ಶಿಲ್ಪವನ್ನು ಲಕ್ಷ್ಮಿ ಮತ್ತು ಸರಸ್ವತಿ ಸಂಕೇತವೆಂದು ಕುವೆಂಪು ವಿಶ್ವವಿದ್ಯಾಲಯಕ್ಕೆ ಲಾಂಛನವಾಗಿ ಬಳಸಿಕೊಳ್ಳ ಲಾಗಿದೆ. ಈ ದೇವಾಲಯ ನಿರ್ಮಾಣಕ್ಕೆ ಕಲ್ಲನ್ನು ಹತ್ತಿರದ ನಾಡಕಲಸಿಯಿಂದ ತಂದಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಕಾರ್ತಿಕ ಅಮಾವಾಸ್ಯೆ ಮತ್ತು ಫಾಲ್ಗುಣ ಶುದ್ಧ ತೃತೀಯ ದೂತ ರಥವೂ, ಫಾಲ್ಗುಣ ಶುದ್ಧ ಪಾಡ್ಯದಂದು ಶ್ರೀ ದೇವರಿಗೆ ರಥೋತ್ಸವ ನಡೆಯತ್ತದೆ.

ಪಾರ್ವತಿ ದೇವಾಲಯ
     ಗರ್ಭಗೃಹವು ಶಿಲಾಮಯದಿಂದ ಕೂಡಿದೆ. ಮುಂಭಾಗ ಕೆಂಪು ಜಂಬಿಟ್ಟಿಗೆಕಲ್ಲಿನಲ್ಲಿ ಕಟ್ಟಿರುವುದಾಗಿದೆ. ಶಿಲಾಭಾಗದಲ್ಲಿ ಭೈರವ, ಷಣ್ಮುಖ, ಗಣೇಶ, ಅಂಧ ಕಾಸುರನ ವಧೆಯಲ್ಲಿ ನಟರಾಜ, ಪುರುಷಾಮೃಗ, ಕಣ್ಣಪ್ಪ, ಗಜಲಕ್ಷ್ಮಿಯ ಶಿಲ್ಪವಿದೆ. ಈ ದೇವಾಲಯದ ಹೊರಭಾಗದ ಗೋಡೆಯಲ್ಲಿ ಉಮಾಮಹೇಶ್ವರ ಶಿಲ್ಪ ಇದೆ, ಇದು ಕೆಳದಿಯ ಮೊದಲ ಚಿನ್ನದ ನಾಣ್ಯಗಳಲ್ಲಿ ಇರುವ ಚಿಹ್ನೆಯಾಗಿದೆ. ಪಕ್ಕದಲ್ಲಿ ಸಾಕ್ಷಿ ಆಂಜನೇಯ ಎಂದು ಕರೆಯುವ ಆಂಜನೇಯನ ಶಿಲ್ಪವಿದೆ. ಅದರ ಮುಂದೆ ಚಂಡಿಕೇಶ್ವರನಿದ್ದಾನೆ. ಮುಂಭಾಗವೂ ಸಹ ಕಲ್ಲಿನಲ್ಲೇ ನಿರ್ಮಾಣವಾಗಿದ್ದ ಬಗ್ಗೆ ಅಲ್ಲಿ ಸಿಕ್ಕಿರುವ ಅವಶೇಷಗಳು ತಿಳಿಸುತ್ತವೆ. ಇದು ಆದಿಲ್‌ಷಾಹಿಯ ಆಕ್ರಮಣದ ಕಾಲದಲ್ಲಿ ಹಾಳಾಗಿದೆ. ಈ ದೇವಾಲಯದ ಚಂದನ ಮರದಿಂದ ಮಾಡಿದ್ದೆನ್ನುವ ಶಿಲ್ಪವು ಸುಂದರ ವಾಗಿದೆ. ಕಂಬಗಳು, ಮೇಲ್ಛಾವಣಿಯ ರಂಗೋಲಿ, ನಾಲ್ಕೂ ಪಕ್ಕಗಳಲ್ಲಿರುವ ಮೂರ್ತಿ ಶಿಲ್ಪಗಳು ಕಲಾ ಪ್ರೌಢಿಮೆ ತೋರುತ್ತವೆ. ಇಲ್ಲಿಯ ಮೊದಲ ಅಂಕಣದ ಒಂದನೇ ಸಾಲಿನಲ್ಲಿ ನಂದಿ, ವೀರಭದ್ರ, ತುಂಬುರ, ನಾರದ, ಅಘೋರೇಶ್ವರ, ರಾಮೇಶ್ವರ, ಚಂದ್ರಮೌಳೇಶ್ವರ, ಕೊರವಂಜಿ ಇದೆ. ಎರಡನೇ ಸಾಲಿನಲ್ಲಿ ದತ್ತಾತ್ರೇಯ, ಅಗ್ನಿ, ನಟರಾಜ, ದಕ್ಷಾಧಿಪತಿ, ವೀರಭದ್ರ, ವೆಂಕಟ ರಮಣ, ಕಾಳಿಂಗ ಮರ್ದನ, ವೇಣುಗೋಪಾಲ, ನರ್ತಕಿ ಇದೆ. ಮೂರನೇ ಸಾಲಿನಲ್ಲಿ ಮಹಿಷಾಸುರ ಮರ್ದಿನಿ, ನಗಾರಿ, ಪುಂಗಿ, ಮೃದಂಗ, ವೀಣಾ, ನರ್ತನ, ತಾಳ, ಪಿಟೀಲು, ಗಜಾಸುರ ಸಂಹಾರ, ತಂಬೂರಿ ಇದೆ. ನಾಲ್ಕನೇ ಸಾಲಿನಲ್ಲಿ ಶಿವಪಾರ್ವತಿ, ಕಾಲಭೈರವ, ಲಕ್ಷ್ಮಣ, ರಾಮ, ಮಾರುತಿ, ಗಣೇಶ, ವೆಂಕಟರಮಣ, ಭೃಂಗಿ ಇದೆ.
     ಎರಡನೇ ಅಂಕಣದಲ್ಲಿ ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯುವ್ಯ, ಕುಬೇರ, ಈಶಾನ್ಯ ಇತ್ಯಾದಿ ಕಲಾ ಕೌಸ್ತುಭಗಳಿವೆ. ಕೆಳದಿಯ ಬ್ರಹ್ಮರಥ ಅಗ್ನಿಗಾಹುತಿಯಾಗಿದೆ. ೧೯೭೩ರಲ್ಲಿ ಹೊಸರಥ ನಿರ್ಮಾಣ ವಾಗಿದೆ. ದೇವಾಲಯದ ವಠಾರದಲ್ಲಿ ಚಂಡಿಕೇಶ್ವರ, ಆಂಜನೇಯ, ಗಣಪತಿ, ವೆಂಕಟರಮಣ ಮೊದಲಾದ ವಿಗ್ರಹಗಳಿವೆ. ದೇವಾಲಯದಲ್ಲಿ ನವರಾತ್ರಿ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುವ ಮರದ ಶಿಲ್ಪಗಳು ಹಲವಿವೆ.
ವೀರಭದ್ರ ದೇವಾಲಯ
     ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಈ ದೇವಾಲಯವಿದೆ. ಇದನ್ನು ಕ್ರಿ.ಶ.೧೫೪೬-೧೫೫೯ರ ಅವಧಿಯ ಮಧ್ಯಭಾಗದಲ್ಲಿ ದೊಡ್ಡ ಸಂಕಣ್ಣನಾಯಕನು ತೀರ್ಥಯಾತ್ರೆಗೆ ಹೋಗಿದ್ದಾಗ ಶಿಕಾರಿಪುರದ ಮಾಸೂರಿ ನಲ್ಲಿ ಕನಸ್ಸಿನಲ್ಲಿ ವೀರಭದ್ರನನ್ನು ಕಂಡು ಅದರಂತೆ ಇಲ್ಲಿ ಪ್ರತಿಷ್ಟಾಪಿಸಿದ್ದಾಗಿ ಕೆಳದಿನೃಪವಿಜಯ ತಿಳಿಸುತ್ತದೆ. ಮುಂಭಾಗದ ಕೆಲಸವು ಕೆಳದಿ ವೀರಭದ್ರ ನಾಯಕ ಮತ್ತು ಚೆನ್ನಮ್ಮಾಜಿಯ ಕಾಲದಲ್ಲಿ ನಿರ್ಮಾಣವಾಗಿದೆ. ಗರ್ಭಗೃಹದ ಮುಂಭಾಗದ ಬಾಗಿಲುವಾಡದ ಮೇಲಿರುವ ಆಳ್ವಾರರ ಮತ್ತು ಕೃಷ್ಣನ ಶಿಲ್ಪಗಳು ಗಮನಿಸಬೇಕಾಗುತ್ತದೆ.


      ಈ ದೇವಾಲಯದಲ್ಲಿ ಮೇಲ್ಭಾಗದಲ್ಲಿರುವ ಗಂಡ ಭೇರುಂಡ ಕೆಳದಿ ಲಾಂಛನ. ವಿಜಯನಗರದ ನಂತರ ಇದನ್ನು ಕೆಳದಿ ಅರಸರು ತಮ್ಮ ಲಾಂಛನವಾಗಿ ಬಳಸಿ ಕೊಂಡಿದ್ದಾರೆ. ಕೆಲವು ವಿದ್ವಾಂಸರುಗಳು ಗಂಡಭೇರುಂಡ ಶಿಲ್ಪ ಕೆಳದಿ ಅರಸರ ರಾಜಲಾಂಛನ ಆಗುವುದು ಅಸ್ವಾಭಾವಿಕ ಎಂದು ಅಭಿಪ್ರಾಯಿಸುತ್ತಾರೆ. ಅವರ ಪ್ರಕಾರ ನಾಣ್ಯಗಳಲ್ಲಿ ಶಿವ ಪಾರ್ವತಿಯರ ಚಿತ್ರ ವಿರುವುದು, ಶಾಸನಗಳ ಕೊನೆಯಲ್ಲಿ ಶ್ರೀ ಸದಾಶಿವ ಎಂಬ ಮುದ್ರಾಂಕಿತ ಬರುವುದು ಗಮನಿಸಿದಾಗ ಇವರ ಲಾಂಛನ ಶಿವ ಪಾರ್ವತಿ ಜೋಡಿಚಿತ್ರವಾಗಿದೆ ಎಂಬುದು. ಕೆಳದಿ ಕಾಲದ ಚಿನ್ನದ ನಾಣ್ಯಗಳಲ್ಲಿ ಗಂಡ ಭೇರುಂಡ ಶಿಲ್ಪ ಇರುವುದನ್ನು ಗಮನಿಸಲಾಗಿದೆ. ಅಲ್ಲದೆ ಇದನ್ನು ನಾಣ್ಯಶಾಸ್ತ್ರ ವಿದ್ವಾಂಸರೂ ಒಪ್ಪುತ್ತಾರೆ. ಹಾಗಾಗಿ ಇವರ ಲಾಂಛನ ಗಂಡಭೇರುಂಡವೇ ಆಗಿತ್ತೆನ್ನ ಬಹುದಾಗಿದೆ. ಇಂದು ಕರ್ನಾಟಕದ ಲಾಂಛನವಾಗಿ ಇದು ಬಳಕೆಯಾಗಿದೆ. ಕೆಳದಿ ಲಾಂಛನದಲ್ಲಿ ನಾಲ್ಕು ಆನೆ, ನಾಲ್ಕು ಸಿಂಹ ಹೊತ್ತು ಹಾರುತ್ತಿರುವ ಗರುಡನನ್ನು ನೋಡಬಹುದು. ಕೆಳಭಾಗದ ಕಾಲುಗಳಲ್ಲಿ ಎರಡು ಆನೆ ಗಳ ಒಳಗೆಯೇ ಎರಡು ಸಿಂಹಗಳನ್ನು ಅಳವಡಿಸಿ ರುವುದನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿದುಬರುತ್ತದೆ. ಕೊಕ್ಕಿನಲ್ಲಿ ಎರಡು ಸಿಂಹ, ಅದರ ಕಾಲಿಗೆ ಸೇರಿದಂತೆ ಎರಡು ಆನೆ ಹೊತ್ತಿರುವ ಈ ಶಿಲ್ಪ ಸುಂದರವಾಗಿದೆ. ಈ ದೇವಾಲಯದ ಗರ್ಭಗೃಹ, ಮುಖಮಂಟಪಗಳು ರಾಮೇಶ್ವರ ದೇವಾಲಯವನ್ನೇ ಹೋಲುತ್ತದೆ. ಇಲ್ಲಿಯ ನವಗ್ರಹಗಳು, ನಾಗಬಂಧಗಳು, ಗರ್ಭಗೃಹದ ದ್ವಾರ ಮೋಹಕವಾಗಿದೆ. ದೇವಾಲಯದ ಕಂಬಗಳಲ್ಲಿ ವಿಜಯನಗರದ ವಿಜಯ ವಿಠಲ ದೇವಾಲಯದಂತೆ ಯಾಳಿಯನ್ನು ಅಳವಡಿಸಲಾಗಿದೆ. ಒಂದೆಡೆ ಮರಾಠ ಪ್ರಭಾವದ ಕುದುರೆ ಸವಾರ, ಆನೆ ಮುಖದ ಹಂಸ, ಯೋಗಿಯ ಶಿರದ ಅಗ್ರಭಾಗದಲ್ಲಿ ವೃಕ್ಷ ಬೆಳೆದ ಶಿಲ್ಪ, ರಾಜಚಿಹ್ನೆಯಿಂದ ಕೂಡಿದ ನಾಯಕ, ಮೇಲ್ಭಾಗದಲ್ಲಿ ಕಂಗೊಳಿಸುವ ಮನೋಹರ ಕಮಲಗಳು, ನಾಗಬಂಧ, ಗೃಹಗಳ ಮಧ್ಯ ಇರುವ ಸೂರ್ಯ, ಜಿಂಕ ಯೊಂದಿಗೆ ಚಂದ್ರ,, ಆನೆ, ಸಿಂಹ, ಹೂವು, ಪರ್ವತ, ಮಾವುತ, ಎತ್ತು ಮೊದಲಾದುವು ಸೌಂದರ್ಯ ಪ್ರಜ್ಞೆ ಪ್ರತೀಕವಾಗಿದೆ. ಕಮಲವೊಂದು ಸಿಡಿಲಿನಿಂದ ಭಗ್ನ ವಾಗಿದೆ. ದ್ವಾರಬಂಧದ ಕಂಬಗಳಲ್ಲಿ ದ್ವಾರಪಾಲಕರ ಶಿಲ್ಪವಿದೆ. ಗರ್ಭಗೃಹದಲ್ಲಿ ವೀರಭದ್ರ ಮೂರ್ತಿ ಇದೆ. ವೀರಭದ್ರ ದೇವಾಲಯದಲ್ಲಿ ಕೃಷ್ಣ, ನಾರಸಿಂಹ ಮೊದಲಾದ ಶಿಲ್ಪವನ್ನೂ ಅಳವಡಿಸಿ ಆ ಮೂಲಕ ಸರ್ವಧರ್ಮವನ್ನು ಪ್ರತಿಪಾದಿಸಿದಂತಿದೆ. ಇಲ್ಲಿ ಇರುವ ತಮ್ಮಡಿ ವೀರಪ್ಪ ಎಂಬ ರೇಖಾಚಿತ್ರ ಮತ್ತು ಬರಹ ಯಾರೆಂದು ಸ್ಪಷ್ಟವಾಗುವುದಿಲ್ಲ. ಈ ದೇವಾಲಯದ ಗೋಪುರದಲ್ಲಿರುವ ಕಳಸದಲ್ಲಿ ಮಹಿಸೂರ ಬಸವೇಶ್ವರ ದೆವರ ಪಾದಕೆ ನೆರಸಭೀಸಲಕೊಪ್ಪದ ಬಂಮೈಯ ಗೌಡರ ಮಗ ಬಸವೈಯ ಗೌಡರ ಭಕ್ತಿ ಎಂದಿದೆ.
ಧ್ವಜಸ್ಥಂಭ
     ಇದು ವೀರಭದ್ರ ದೇವಾಲಯದ ಎದುರಿನಲ್ಲಿದೆ. ಸುಮಾರು ೨೫ ಅಡಿ ಎತ್ತರದ ಈ ಸ್ಥಂಭದಲ್ಲಿ ಗಣೇಶ, ಶಿವ, ನಂದಿ, ಪಾರ್ವತಿ, ಭೈರವ ಶಿಲ್ಪಗಳಿವೆ. ಇದನ್ನು ಮಾನಸ್ಥಂಭ ಎನ್ನುವವರೂ ಇದ್ದಾರೆ. ದೀಪಸ್ಥಂಭ ಎನ್ನುವವರೂ ಇದ್ದಾರೆ. ಆದರೆ ಇಲ್ಲಿರುವ ಶಾಸನವು ಕ್ರಿ.ಶ. ೧೬೭೮ರಲ್ಲಿ ಬೊಕ್ಕಸದ ಸಿದ್ದಬಸವಯ್ಯನು ಪ್ರತಿಷ್ಠೆ ಮಾಡಿಸಿದ ಧ್ವಜಸ್ಥಂಭದ ಸೇವೆ ಎಂದಿರುವುದನ್ನು ನೋಡಿದಾಗ ಇದು ಧ್ವಜಸ್ಥಂಭವೆಂದು ಸ್ಪಷ್ಟವಾಗುತ್ತದೆ. ಕೆಳದಿ ಚೆನ್ನಮ್ಮಾಜಿಯ ಕಾಲದಲ್ಲಿ ನಂದಿ ಧ್ವಜಸ್ಥಂಭ ಸ್ಥಾಪಿಸಲಾಯಿತು. ಈ ಸ್ಥಂಭದ ಮೇಲ್ಭಾಗದಲ್ಲಿ ನಂದಿ  ವಿಗ್ರಹವಿದೆ. ಇದರಲ್ಲಿ ಗಣಪತಿಯ ಕೆಳಭಾಗದಲ್ಲಿರುವ ಶಿಲ್ಪಗಳು ಕೆಳದಿ ರಾಣಿ ಚೆನ್ನಮ್ಮಾಜಿ, ಶಿವಾಜಿಯ ಮಗ ರಾಜಾರಾಮ ಮತ್ತು ಅವರ ಸೇವಕ, ಸೇವಿಕೆಯರನ್ನು ಸೂಚಿಸುತ್ತದೆ. ವೀರಭದ್ರ ದೇವಾಲಯದ ಕೊನೆಯಲ್ಲಿನ ಕಂಬದಲ್ಲಿ ಹೊರಭಾಗದಲ್ಲಿ ಶಿವಾಜಿಯನ್ನು ಕುದುರೆಯ ಮೇಲೆ ಕುಳಿತಿರುವಂತೆ ಚಿತ್ರಿಸಿರುವುದನ್ನು ನೋಡಬಹುದು.
     ದೇವಾಲಯದ ಹೊರಗೋಡೆಯಲ್ಲಿರುವ ಸಾಸಿವೆ ಗಣಪತಿ, ಒಂದೇ ದೇಹ ಎರಡು ಮುಖ ತೋರುವ ಚಿತ್ರ (ಆನೆ ಮತ್ತು ಹಸು), ವಾಸ್ತುಪುರುಷನ ಶಿಲ್ಪ, ಕೈ ಎತ್ತಿ ಕುಳಿತಿರುವ ಬಾಲಕನ ಶಿಲ್ಪ, ದರ್ಪಣ ವೀಕ್ಷಿಸುತ್ತಿರುವ ಸುಂದರಿ, ಮೋಹಿನಿ, ಭಸ್ಮಾಸದುರ, ಇತ್ಯಾದಿಗಳು ಗಮನಿಸುವಂತಹವು. ಉಳಿದ ಕಡೆ ಪಂಚಶಿರ, ಕಾಮಧೇನು, ಜಂಗಮ ಶಿಲ್ಪಗಳಿವೆ. ಹಲವು ಕಣ್ಮರೆಯಾಗಿವೆ. ರಾಮೇಶ್ವರ, ವೀರಭದ್ರ ದೇವಾಲಯದ ಹೊರಗೋಡೆ ಗೋಪುರಗಳಿಂದ ತುಂಬಿದೆ. ರಾಮೇಶ್ವರ ದೇವಾಲಯದ ಎದುರುಮುಖದ ಮೇಲ್ಭಾಗದಲ್ಲಿ ಬೃಂಗಿ ಎಂಬ ಮೂರು ಕಾಲಿನ ವಿಚಿತ್ರ ಶಿಲ್ಪ ಇದೆ. ಇದು ಈಶ್ವರನ ಗಣಗಳಲ್ಲಿ ಒಂದಾಗಿದೆ. ಇಲ್ಲಿರುವ ಒಂದು ಕಂಬವನ್ನು ಕಲ್ಲುಜಾಗಟೆ ಎಂದು ಕರೆಯಲಾಗುತ್ತದೆ. ಕಲ್ಲು ಹೊಡೆತಕ್ಕೆ ಈಗಾಗಲೇ ಕಂಬ ತತ್ತರಿಸಿದೆ. ಈಶ್ವರ ಮತ್ತು ವೀರಭದ್ರ ದೇವಾಲಯದ ಮೇಲ್ಭಾಗದಲ್ಲಿ ಶಿಖರವಿದೆ. ವಠಾರದಲ್ಲಿ ನಾಲ್ಕು ಆಂಜನೇಯ, ನಾಲ್ಕು ವಿಷ್ಣು, ಕ್ಷೇತ್ರಪಾಲ, ಗಣಪತಿಯ ಶಿಲ್ಪವಿದೆ. ನಾಗಶಿಲ್ಪಗಳ ಮಧ್ಯದಲ್ಲಿರುವ ಹೊಯ್ಸಳಕಾಲದ ಲಕ್ಷ್ಮೀನರಸಿಂಹನ ಶಿಲ್ಪ ಸುಂದರವಾಗಿದೆ. ಹೊಯ್ಸಳಕಾಲದ ವೀರ ಮತ್ತು ಮಾಸ್ತಿಕಲ್ಲುಗಳು ಎರಡಿವೆ. ಕೋಣೆಯೊಂದರಲ್ಲಿ ಕೆಳದಿ ಸಂಸ್ಥಾನ ಉದಯಕ್ಕೆ ಮೂಲ ಕಾರಣರಾದ ಎಡವಮುರಾರಿ, ಬಲವಮುರಾರಿಯರ ಮತ್ತು ಅವರ ಹೆಂಡತಿಯರ ಸುಮಾರು ೪೯೦ ವರ್ಷದಷ್ಟು ಹಳೆಯದಾದ ಬೃಹದಾಕಾರದ ಮರದ ಶಿಲ್ಪಗಳಿವೆ. ಕೆಳದಿ-ಸಾಗರ ಮಾರ್ಗದಲ್ಲಿ ಹಳ್ಳಿಬೈಲು ಎಂಬಲ್ಲಿ ರಸ್ತೆಯ ಎರಡೂ ಕಡೆ ಇರುವ ಕಟ್ಟೆಗಳು ಇವರುಗಳು ರಾಜ್ಯ ಸ್ಥಾಪನೆಗಾಗಿ ಆತ್ಮಾರ್ಪಣೆ ಮಾಡಿಕೊಂಡ ಸ್ಥಳ ಎಂದು ಹೇಳಲಾಗುತ್ತದೆ.
**   **   **   **
ಮನವಿ
     ಇದು ಕವಿ ವಂಶಸ್ಥರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬದವರೇ ಆಧಾರ. ಕೆಳದಿಯಲ್ಲಿ ನಡೆದ ಎರಡನೆಯ ವಾರ್ಷಿಕ ಕುಟುಂಬ ಸಮಾವೇಶದಲ್ಲಿ ಹಾಗೂ ೧೫-೦೬-೨೦೦೮ರಲ್ಲಿ ನಡೆದ ಪತ್ರಿಕಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿರುವಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ.  ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ಪಾವತಿಗೆ ರಸೀದಿ ನೀಡಲಾಗುವುದು. ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವ ಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
     ಸಂಗ್ರಹವಾದ ಮೊಬಲಗನ್ನು ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ  ಜಮಾ ಇರಿಸಿ, ಸಮಿತಿ ನಿರ್ಧಾರ ಪಡೆದು ವೆಚ್ಚ ಮಾಡಲಾಗುವುದು. ಖಾತೆಸಂ. ೦೪೭೮೨೦೧೦೦೩೭೬೫೦   ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ - ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಪರಿಶೀಲನೆಗೂ ಅವಕಾಶವಿದೆ.
     ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವಾಗ, ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಸಹ ಮಂಗಳನಿಧಿ ಹೆಸರಿನಲ್ಲಿ ದೇಣಿಗೆ ನೀಡಬಹುದು.
*************************
ದಾರಿದೀಪವಾಗಲಿ
     ಪ್ರತಿವ್ಯಕ್ತಿಯೂ ಒಂದೊಂದು ಜನ್ಮದಲ್ಲೂ ಆಯಾ ಜನ್ಮದ ಹಿರಿಯರ ಬಳುವಳಿಯಿಂದ ಹೊಸ ಹೊಸ ಸಂಸ್ಕಾರಗಳನ್ನು ಪಡೆಯುತ್ತಾ ಮುಕ್ತಿಪಥದಲ್ಲಿ ವಿಕಾಸಗೊಳ್ಳುತ್ತಾನೆ. ಅದರಂತೆ ಕವಿವಂಶದಲ್ಲಿ ಜನಿಸಿರುವ ನಮಗೆ ನಮ್ಮ ಪೂರ್ವಜರಿಂದ ಪ್ರಾಪ್ತವಾಗಿರುವ ಸದ್ಗುಣ ಸಂಪತ್ತುಗಳಿಗಾಗಿ ಅವರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಶಿರಬಾಗಿ ನಮಿಸೋಣ.
     ಇಂತಹ ಸದ್ಗುಣ ಸಂಪತ್ತುಗಳ ವೃದ್ಧಿಗೆ ಸಹಕಾರಿಯಾಗಿ, ದಾರಿದೀಪವಾಗಿ ಕವಿಕಿರಣ ಬೆಳಗಲಿ ಎಂದು ಆಶಿಸುತ್ತೇನೆ.
-ಸಾ.ಕ. ಕೃಷ್ಣಮೂರ್ತಿ, ಬೆಂಗಳೂರು.
*****************
 ಪ್ರೀತಿ
ಇನ್ನೊಬ್ಬರ ಇಚ್ಛೆ, ಬಯಕೆಗಳಿಗೆ ತನ್ನ ಇಚ್ಛೆ-ಬಯಕೆಗಳಿಗಿಂತ ಹೆಚ್ಚಿನ ಆದ್ಯತೆ ನೀಡುವುದು ಪ್ರೀತಿಯ ಶುದ್ಧರೂಪವಾಗಿದೆ.
********************
-ಪುಟಗಳು 15-18-
****************************
ಸುದ್ದಿ - ಕಿರಣ !!
 ದಿ.೦೫-೦೧-೦೮ರ ಕೆಳದಿ ಉತ್ಸವದಲ್ಲಿ   ಸಂಶೋಧನಾ ರತ್ನ ಬಿರುದು ಮತ್ತು ರೂ.೨೫೦೦೦/- ನಗದು ನೀಡಿ ಶ್ರೀ ಗುಂಡಾ ಜೊಯಿಸ್‌ರಿಗೆ ಸನ್ಮಾನ.
* ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಶಿವಮೊಗ್ಗೆಯಲ್ಲಿ ದಿ. ೨೭-೦೭-೦೮ರಂದು ಮತ್ತು ಅಲ್ಪ ಸಂಖ್ಯಾತರ ಮತ್ತು ಹಿರಿಯ ನಾಗರೀಕರ ಇಲಾಖೆ, ಬೆಂಗಳೂರು, ಇವರ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಹಿರಿಯ ನಾಗರಿಕ ವಿದ್ವಾಂಸರೆಂದು ಶ್ರೀ ಗುಂಡಾ ಜೊಯಿಸರನ್ನು ದಿ.೧-೧೦-೦೮ರಂದು ಸನ್ಮಾನಿಸಲಾಯಿತು.
* ಶಿಕಾರಿಪುರದ ಶ್ರೀಮತಿ ಕಾಶೀಬಾಯಿಯವರು ಸುಗಮ ಸಂಗೀತದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿ ಆಯ್ಕೆಯಾಗಿರುತ್ತಾರೆ.
* ಶ್ರೀ ಬಿ.ವಿ.ಹರ್ಷ  ದಕ್ಷಿಣ ಕೊರಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಮೆರಿಕೆಯ ಕೊಲಂಬೋ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಯನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ.
* ಕು. ಬಿ.ಎಸ್.ಆರ್. ದೀಪಕ್ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ (ವಯಲಿನ್) ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಉತ್ತೀರ್ಣನಾಗಿದ್ದು, ಆಕಾಶವಾಣಿಯಲ್ಲಿ ಬಿ ಗ್ರೇಡ್ ಕಲಾವಿದನಾಗಿ ಆಯ್ಕೆಯಾಗಿದ್ದಾನೆ.   ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಡೆಸಿದ ಅಂತರ ಕಾಲೇಜು ಸ್ಪರ್ಧೆಯಲ್ಲಿ (ವಯಲಿನ್) ಪ್ರಥಮ ಸ್ಥಾನ ಪಡೆದಿದ್ದಾನೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಶಿಷ್ಯವೇತನವನ್ನು (ಸಂಗೀತ) ಪಡೆದಿದ್ದಾನೆ. ಬಿ.ಎ.ಎಂಎಸ್. ಪ್ರಥಮ ಹಂತದ ಪರೀಕ್ಷೆ ಯಲ್ಲಿ ವಿಶ್ವವಿದ್ಯಾಲಯಕ್ಕೆ ೨ನೇ ಸ್ಥಾನ ಪಡೆದು ಉತ್ತೀರ್ಣನಾಗಿದ್ದಾನೆ.
* ಕು. ಬಿ.ಎಸ್.ಆರ್. ಅಂಬಿಕಾ ಶಿವಮೊಗ್ಗದ ವಿದ್ಯಾ ಗಣಪತಿ ಸಂಘದವರು ನಡೆಸುವ ಜೂನಿಯರ್ ಸಂಗೀತ ಕಛೇರಿಗಳಲ್ಲಿ ಅನೇಕ ಕಲಾವಿದರಿಗೆ ವಯಲಿನ್ ಸಹಕಾರ ನೀಡಿ ಮೆಚ್ಚುಗೆ ಪಡೆದಿದ್ದಾಳೆ. ಸಂಗೀತ ಹಾಡುಗಾರಿಕೆ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕಡೂರಿನಲ್ಲಿ ದುರ್ಗಾ ಸೇವಾ ಸಮಿತಿಯ ವತಿಯಿಂದ ಏರ್ಪಾಟಾದ ಕಾರ್ಯ ಕ್ರಮದಲ್ಲಿ ಅಣ್ಣ ದೀಪಕ್‌ನೊಡನೆ ವಯಲಿನ್-ದ್ವಂದ್ವ ಕಾರ್ಯಕ್ರಮ ನೀಡಿದ್ದಾಳೆ.
*  ದಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ),ಬೆಂಗಳೂರು, ಇವರು ಎಲ್&ಟಿ ಯ ಇಂಜಿನಿಯರ್ ಆದ ಶ್ರೀ ಕೆ.ಜಿ.ನಾಗರಾಜ ಜೊಯಿಸ್‌ರವರಿಗೆ ಅವರ ಕಾರ್ಯಕುಶಲತೆಗಾಗಿ ೨೯.೮.೨೦೦೮ರಂದು ಧಾರವಾಡದಲ್ಲಿ ನಡೆದ ಸಮಾರಂಭ ದಲ್ಲಿ ACCE-Sarvamangala Award-2008 ಪ್ರಶಸ್ತಿಯನ್ನು ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸಿ.ಎಂ.ಉದಾಸಿಯವರ ಹಸ್ತ ಪ್ರದಾನ ಮಾಡಿದೆ.
*   ಶ್ರೀ ನಾಗರಾಜ್ ಜೊಯಿಸ್-ರೂಪಾ ರವರ ಪುತ್ತಿ ಕು.ಸಿರಿ ಎನ್.ಜೊಯಿಸ್ ರಾಷ್ಟ್ರೀಯ ಮಟ್ಟದ ಕಲರ್ ಚ್ಯಾಂಪ್-೨೦೦೮ ನ ಪ್ರಥಮ ಸುತಿನಲ್ಲಿ ವಿಜಯಿ ಎಂದು ಫೋಷಿತೆ;
*   ಶ್ರೀ ಜಗದೀಶ ಚಂದ್ರ  ಇವರು ಸಾಮಾನ್ಯ ಮತ್ತು ಮಧ್ಯಮವರ್ಗದವರಿಗಾಗಿ ಗೃಹ ವಿನ್ಯಾಸದ ಬಗ್ಗೆ   ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿಯಮಿತವಾಗಿ 'ಮನೆ ಕಥೆ' ಶೀರ್ಷಿಕೆಯಡಿಯಲ್ಲಿ ಲೇಖನಗಳನ್ನು ಬರೆಯುತ್ತಿರುತ್ತಾರೆ.
*   ಶ್ರೀಮತಿ .ಬಿಂದು ಮತ್ತು ಶ್ರೀ ರಾಘವೇಂದ್ರರವರ ಪುತ್ರಿ, ಅಕ್ಷಯಳ (ಜಯಗೌರಿ) ೨ನೆಯ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ೧೪-೦೬-೨೦೦೮ ರಂದು ಅನಾಥ ಮಕ್ಕಳಿಗೆ ಶಿಕ್ಷಣಶುಲ್ಕ ಪಾವತಿಸುವ ಸಲುವಾಗಿ ಬೆಂಗಳೂರಿನ ಒಂದು ಸೇವಾಸಂಸ್ಥೆಗೆ ರೂ. ೧೦೦೦೦/- ದೇಣಿಗೆ ನೀಡಿ ಆಚರಿಸಲಾಯಿತು.
*   ಬೆಂಗಳೂರಿನ ಕಲಾಶ್ರೀ ಸಾಂಸ್ಕೃತಿಕ ಸಮ್ಮಿಲನ ವೇದಿಕೆ ಹಾಗೂ ಸುಚೇತನಾ ಕಲಾವಿದರು ಜಂಟಿಯಾಗಿ ೭-೦೯-೦೮ರಂದು ಆಯೋಜಿಸಿದ್ದ ವಿಜ್ಞಾನ ಯುಗದಲ್ಲಿ ಆಧ್ಯಾತ್ಮದ ಅವಶ್ಯಕತೆ ವಿಚಾರಗೋಷ್ಟಿ ಸಂದರ್ಭದಲ್ಲಿ ವೇಷಭೂಷಣ ಸ್ಪರ್ಧೆ ಸಹ ಏರ್ಪಡಿಸಿದ್ದು ಭಾಗ ವಹಿಸಿದ್ದ ಅತಿ ಕಿರಿಯ ಸ್ಪರ್ಧಿ ಅಕ್ಷಯ(ಜಯಗೌರಿ) ಬಹುಮಾನ ವಿಜೇತೆ. 
   
* ಶ್ರೀ ಗುರುಮೂರ್ತಿ ಮತ್ತು ದಿ.ವಿಜಯಲಕ್ಷ್ಮಿ ಇವರ ಪುತ್ರ ಚಿ. ನಿತಿನ್‌ನ ಉಪನಯನ ಕಾರ್ಯಕ್ರಮ ಕೊಲ್ಲೂರಿನಲ್ಲಿ ಇತ್ತೀಚೆಗೆ ಬಂಧು-ಮಿತ್ರರರ ಸಮ್ಮುಖ ದಲ್ಲಿ ಸಂಪನ್ನವಾಯಿತು.

*   ಶ್ರೀ ಕ.ವೆಂ. ಅನಂತ ಮತ್ತು ಶ್ರೀಮತಿ ರಾಧಾರವರ ಪುತ್ರ ಬೆನಕನ ಚೂಡಾಕರ್ಮ ಅಮೆರಿಕಾದ ಡೆಲವೇರ್‌ನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ೩೦-೦೬-೨೦೦೮ರಂದು ನೆರವೇರಿತು.
* ಗೃಹಪ್ರವೇಶ: ಡಾ. ವೆಂಕಟೇಶಜೋಯಿಸ್ ಮತ್ತು ಸುಮನಾಜೋಯಿಸ್ ರವರು ದಿನಾಂಕ ೦೮-೦೫-೨೦೦೮ ರಂದು ಸಾಗರದ ಅಣಲೇಕೊಪ್ಪ ಬಡಾವಣೆಯಲ್ಲಿ ಕಟ್ಟಿಸಿದ ನೂತನ ಗೃಹ ಕೆಳದೀಶದ ಗೃಹಪ್ರವೇಶವನ್ನು ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿಸಿದರು.
*   ಶ್ರೀ ಕೆ.ವಿ. ರಾಘವೇಂದ್ರ ಮತ್ತು ಶ್ರೀಮತಿ ಬಿಂದು ರವರ ಹೆಚ್.ಎಸ್.ಆರ್.ಲೇಔಟ್, ೧ನೆಯ ಸೆಕ್ಟರ್, ೨೬ನೆಯ ಮುಖ್ಯರಸ್ತೆ, ೧೧ಎ ಅಡ್ಡರಸ್ತೆಯ ನಂ.೭೬೮ರಲ್ಲಿನ ನೂತನ ಗೃಹ 'ಕ್ಷೇಮ'ದ ಗೃಹಪ್ರವೇಶ ದಿನಾಂಕ    ೧೦-೧೧-೨೦೦೮ರಂದು ಸರಳವಾಗಿ ನಡೆಯಿತು.
************************

೨೦೦೮ರಲ್ಲಿ ಪ್ರಕಟವಾದ ಕೃತಿಗಳು:೧. ನಿಷ್ಕಳಂಕಿಣಿ ಕೆಳದಿ ರಾಣಿ ವೀರಮ್ಮಾಜಿ (ಸತ್ಯಶೋಧನೆ) - ಲೇ: ಕೆಳದಿ ಗುಂಡಾಜೋಯಿಸ್. ಪ್ರ: ಕೆಳದಿ ವ,ಸಂ.ಇ.ಸಂ.ಕೇಂದ್ರ, ಕೆಳದಿ. ಪು. ೧೬೬. ಬೆಲೆ: ರೂ.೧೮೦.
೨.  ಉತ್ಕೃಷ್ಟದೆಡೆಗೆ (ಲೇಖನಗಳ ಸಂಗ್ರಹ) - ಲೇ: ಕವಿ ವೆಂ. ಸುರೇಶ, ಪ್ರ: ಕವಿ ಪ್ರಕಾಶನ, ಶಿವಮೊಗ್ಗ. ಪು. ೯೮. ಬೆಲೆ: ರೂ.೭೫. ೧೮-೦೫-೨೦೦೮ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಶ್ರೀ ಮನು ಬಳಿಗಾರ್‌ರಿಂದ ಬಿಡುಗq.
೩. ಕೆಳದಿ ಕವಿ ಲಿಂಗಣ್ಣ ವಿರಚಿತ ಪಾರ್ವತಿ ಪರಿಣಯ - ಸಂ: ಡಾ. ಕೆಳದಿ ವೆಂಕಟೇಶ ಜೋಯಿಸ್. ಪ್ರ: ಕೆಳದಿ ವ.ಸಂ.ಇ.ಸಂ. ಕೇಂದ್ರ, ಕೆಳದಿ.
೪.   ರತ್ನಾಂಕುರ - ಕಥಾಮಾಲಿಕೆ - ಲೇ: ರತ್ನಮ್ಮ ಸುಂದರರಾವ್, ಪ್ರ: ವಸಂತ ಸಾಹಿತ್ಯ ಗ್ರಂಥಮಾಲಾ, ಬೆಂಗಳೂರು.  ಪು. ೧೬೬.

*   ಬಿಡುಗಡೆಯಾಗಲಿರುವ ಕೃತಿಗಳು:
೧.  ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ - ಲೇ:   ಕ. ವೆಂ. ನಾಗರಾಜ್,ಹಾಸನ. ಪ್ರ: ಕವಿ ಪ್ರಕಾಶನ, ಶಿವಮೊಗ್ಗ.
೨.  ಕವಿ ಮನೆತನದ ಬಂಧು-ಬಳಗದವರ ವಿಳಾಸ, ದೂರವಾಣಿ, ಇತ್ಯಾದಿ ವಿವರಗಳ ಡೈರೆಕ್ಟರಿ - ಸಂ. ಕವಿ ವೆಂ. ಸುರೇಶ, ಪ್ರ: ಕವಿ ಪ್ರಕಾಶನ, ಶಿವಮೊಗ್ಗ.

******************
   ಪ್ರಕಟವಾಗಬಹುದಾದ ಸುದ್ದಿಗಳು ಇನ್ನೂ ಇರಬಹುದು. ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಮಾತ್ರ ಇಲ್ಲಿ ಕೊಟ್ಟಿದೆ. ಸಂಬಂಧಿಸಿದವರು ಸಕಾಲದಲ್ಲಿ ಮಾಹಿತಿಗಳನ್ನು ನೀಡಿದರೆ ಪ್ರಕಟಿಸಲು ಅನುಕೂಲವಾಗುವುದು.
-ಸಂ.

****************************

೧೮-೦೫-೦೮ರಂದು ಶಿವಮೊಗ್ಗದಲ್ಲಿ ಕವಿ ಸುರೇಶರ 'ಉತ್ಕೃಷ್ಟದೆಡೆಗೆ' ಕೃತಿ ಬಿಡುಗಡೆ ಸಮಾರಂಭದಲ್ಲಿ ಕ.ವೆಂ. ನಾಗರಾಜರಿಂದ ಕೃತಿ ಪರಿಚಯ

********************
ಗೋತ್ರ ಪ್ರವರ್ತಕ ಹರಿತಸ
ಮನವಿ
    

     ಕೆಳದಿ ಕವಿ ಮನೆತನದ ಕುಟುಂಬಗಳವರು ಹರಿತಸ ಗೋತ್ರಕ್ಕೆ ಸೇರಿದವರಾಗಿದ್ದು, ಹರಿತಸರ ಕುರಿತು ತಿಳಿದುಕೊಂಡಿರುವುದು ಸೂಕ್ತವಾದುದು. ಆದುದರಿಂದ ಇವರ ಕುರಿತು ಪರಿಚಯ ಲೇಖನ ಬರೆದುಕೊಡಲು ವಿಪ್ರವಾಹಿನಿಯಲ್ಲಿ ಋಷಿಮುನಿಗಳ ಪರಿಚಯ ಲೇಖನ ಮಾಲಿಕೆ ಬರೆಯುತ್ತಿರುವ ಶ್ರೀ ಬೆಳವಾಡಿ ಅಶ್ವತ್ಥ ನಾರಾಯಣರವರನ್ನು ಕೋರಲಾಗಿತ್ತು. ಅವರು ಹರಿತಸರ ಬಗ್ಗೆ ಮಾಹಿತಿ ಸಂಗ್ರಹಿಸಲು ಬಹಳ ಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ಇವರು ಹಲವಾರು ಊರುಗಳಿಗೆ ಪ್ರವಾಸ ಸಹ ಮಾಡಿದ್ದಾರೆ. ಇವರಿಗೆ ಅಪೂರ್ಣ ಮಾಹಿತಿ ಮಾತ್ರ ಲಭ್ಯವಾಗಿದ್ದು, ಆಧಾರವಿಲ್ಲದೆ ಲೇಖನ ಬರೆಯಬಾರದೆಂಬ ಉತ್ತಮ ಭಾವನೆ ಹೊಂದಿದ್ದಾರೆ. ಕವಿ ಕುಟುಂಬದ ಯಾರಿಗೇ ಆಗಲಿ, ಹರಿತಸರ ಕುರಿತು ಮಾಹಿತಿ ಇದ್ದಲ್ಲಿ ನೀಡಲು ಕೋರಿದೆ. ಇಲ್ಲದಿದ್ದಲ್ಲಿ ತಮಗೆ ಗೊತ್ತಿರುವ ಪ್ರಾಜ್ಞರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಕ್ಕೆ ಅವರುಗಳೂ ಕೈಜೋಡಿಸಲು ವಿನಂತಿಸಿದೆ.
-ಸಂ.

************************

ಕವಿಮನೆತನದವರು ಬೆಳೆಸಬಹುದಾದ ಸಂಪ್ರದಾಯ
೧. ವರ್ಷಕ್ಕೊಮ್ಮೆ ಕೆಳದಿ, ಕೊಲ್ಲೂರುಗಳಿಗೆ ಭೇಟಿ,
೨. ವರ್ಷಕ್ಕೊಮ್ಮೆ ಬಂಧು ಬಳಗದ ಸಮಾವೇಶಕ್ಕೆ ಹಾಜರಾಗುವುದು.
೩. ಶುಭ ಸಮಾರಂಭ, ಇತರ ಸಮಾರಂಭಗಳ  ಸಂದರ್ಭಗಳಲ್ಲಿ 'ಮಂಗಳ ನಿಧಿ' ನೀಡುವುದು.


******************************************** ***
             -ಪುಟಗಳು ೧೯,೨೦-
******************************************************



                                                                             ರಕ್ಷಾಪುಟ -3
**********************************************************

ರಕ್ಷಾಪುಟ -4
                                                                                       
********************
ಸಹೃದಯ ವಾಚಕರಿಗೆ ವಂದನೆಗಳು.